ಸಂಗೀತ ಲೋಕಕ್ಕೆ ಎಸ್ ಜಾನಕಿ ಕೊಡುಗೆ ಅನನ್ಯ ಟಿ.ಎಸ್ ಶ್ರೀವತ್ಸ

ಮೈಸೂರು: ಸಂಗೀತ ಲೋಕಕ್ಕೆ ಎಸ್ ಜಾನಕಿ ಅವರ ಕೊಡುಗೆ ಅನನ್ಯವಾದದ್ದು ಎಂದು ಶಾಸಕ ಟಿ ಎಸ್ ಶ್ರೀವತ್ಸ ಹೇಳಿದರು

ನಗರದ ಕೃಷ್ಣಮೂರ್ತಿಪುರಂನಲ್ಲಿರುವ ಶಾರದಾ ವಿಲಾಸ್ ಶತಮಾನೋತ್ಸವ ಭವನದಲ್ಲಿ
ಪಾತಿ ಫೌಂಡೇಶನ್ ವತಿಯಿಂದಆಯೋಜಿಸಿದ ಎಸ್ ಜಾನಕಿ ಅವರ ಗಾಯನಕ್ಕೆ ಗಾನಾಭಿಷೇಕ ನಮನ ಕಾರ್ಯಕ್ರಮವನ್ನು ದೀಪಾ ಬೆಳಗಿಸಿ ನಂತರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು
ತೆಲುಗು ಮಾತೃಭಾಷೆಯಾಗಿದ್ದರು ಎಸ್ ಜಾನಕಿ ಅವರು ಕನ್ನಡದಲ್ಲಿ ಅತಿ ಹೆಚ್ಚು ಹಾಡುಗಳನ್ನು ಹಾಡಿ ಕನ್ನಡಿಗರ ಪ್ರೀತಿ ಪಾತ್ರರಾದರು
ಕನ್ನಡ ನಾಡಿನಲ್ಲೆ ನೆಲೆಸಿ , ಮೈಸೂರಿನಲ್ಲಿ ಕೊನೆ ಉಸಿರು ಬಿಟ್ಟರು, ಸಂಗೀತ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು

ನಂತರ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಆರ್ ರಘು ಕೌಟಿಲ್ಯ ಇಂಪಾದಕಂಠ ಹಾಗೂ ವಿನಯಶೀಲ ವ್ಯಕ್ತಿತ್ವದಿಂದ ಎಸ್ ಜಾನಕಿ ರವರು ಭಾರತೀಯ ಸಂಗೀತ ಲೋಕದಲ್ಲಿ ಶಾಶ್ವತ ಚಾಪು ಮೂಡಿಸಿದ್ದಾರೆ, ಅವರ ಗಾಯನ ಸದಾ ಸಂಗೀತ ಪ್ರೇಮಿಗಳ ಮನಸ್ಸಿನಲ್ಲಿ ಜೀವಂತವಾಗಿರಲಿದೆ ,


ಸಂಗೀತ ಸುಧೆ ಹಾಗೂ ಸಾಂಸ್ಕೃತಿಕ ಮೆರುಗಿಗೆ ಮೇರು ಪರ್ವತದಂತಿದ್ದ ಭಾರತೀಯ ಸಂಸ್ಕೃತಿಯ ಕೋಗಿಲೆ ಕಂಠದ ನಾರಿ, ಎಸ್. ಜಾನಕಿಯವರು ​ಸಂಗೀತ ಕ್ಷೇತ್ರಕ್ಕೆ ನೀಡಿದ ಅಪಾರ ಕೊಡುಗೆ ಹಾಗೂ ಅವರು ಹಾಡಿದಹೇಳಿದರು ಮೂಲಕ ಪಸರಿಸಿದ ರಸಧಾರೆಯನ್ನು ಆಲಿಸುವುದೇ ಈ ಜನ್ಮದ ಸುಕೃತ ಎಂದು ಹೇಳಿದರು

ಇದೇ ಸಂದರ್ಭದಲ್ಲಿ ನೂತನ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದ ಆರ್ ರಘು ಕೌಟಿಲ್ಯ, ಯೋಗ ಕ್ಷೇತ್ರದ ಸಾಧನೆಗೈದ ಅನಂತು, ಸಾಹಿತ್ಯ ಕ್ಷೇತ್ರದಿಂದ ಪುಷ್ಪ ಅಯ್ಯಂಗಾರ್, ಹಾಗೂ ಧಾರ್ಮಿಕ ಕ್ಷೇತ್ರದಿಂದ ವೈದೇಹಿ ಅಯ್ಯಂಗಾರ್ ರವರನ್ನು ಸನ್ಮಾನಿಸಲಾಯಿತು

ಇದೇ ಸಂದರ್ಭದಲ್ಲಿ
ವೆಂಗಿಪುರ ಮಠದ ಇಳೈ ಆಳ್ವಾರ್ ಸ್ವಾಮೀಜಿ,ಆರ್ ಎಸ್ ಎಸ್ ನ ಮಾ ವೆಂಕಟ್ ರಾಮ್ ಜಿ,ಹಿರಿಯ ಪತ್ರಕರ್ತರಾದ ಅಂಶಿ ಪ್ರಸನ್ನ ಕುಮಾರ್, ವಕೀಲರಾದ ಮಧ್ವರಾಜ್ , ಪಾತಿ ಫೌಂಡೇಶನ್ ಅಧ್ಯಕ್ಷರಾದ ಎಂಡಿ ಪಾರ್ಥಸಾರಥಿ, ಮಾಜಿನಗರಪಾಲಿಕ ಸದಸ್ಯರಾದ ಮ ವಿ ರಾಮಪ್ರಸಾದ್,ವಿಪ್ರ ಮುಖಂಡರಾದ ನಂ ಶ್ರೀಕಂಠಕುಮಾರ್ , ವಿಕ್ರಂ ಅಯ್ಯಂಗಾರ್, ಅಜಯ್ ಶಾಸ್ತ್ರಿ, ಟಿ.ಎಸ್ ಅರುಣ್, ರಾಜಕುಮಾರ್, ಗಾಯಕ ಕೃಷ್ಣಮೂರ್ತಿ, ಬಸವರಾಜ್, ಮಹದೇವ್, ಮಂಜುನಾಥ್, ಪುರುಷೋತ್ತಮ್ ಹಾಗೂ ಇನ್ನಿತರರು ಹಾಜರಿದ್ದರು

Leave a Reply