ನಿವೇನಾದ್ರು ಖರ್ಜುರದ ಹಣ್ಣನ್ನ ತಿಂತಿದಿರ! ಬಹಳಷ್ಟು ಜನ ಸೊಂಟ ನೋವು, ಮಂಡಿ ನೋವು, ಹಾಗೂ ನರಗಳ ದೌರ್ಬಲ್ಯದಿಂದ ಬಳಲುತ್ತ ಇರುತ್ತಾರೆ. ಇದಕ್ಕೆ ಕಾರಣ ಐರನ್ ಡೆಫಿಸಿಯನ್ಶಿ ಹೌದು ಕಬ್ಬಿಣದ ಕೊರತೆಯಿಂದ ಈ ರೀತಿಯ ವ್ಯಾದಿಗಳು ಅನಾರೋಗ್ಯ ಸಮಸ್ಯೆಗಳು ಬೆನ್ನು ಹತ್ತುತ್ತವೆ.
ಇದಕ್ಕೆ ಸುಲಭವಾದ ಮನೆಯಮದ್ದು ಬಹಳಷ್ಟು ಸಮಾಧಾನವನ್ನು ನೀಡುತ್ತದೆ. ಅದು ಯಾವುದು ಎಂದರೆ ಒಣಗಿದ ಉತ್ತತ್ತಿ. ಹೌದು ಖರ್ಜುರದ ಒಣಗಿದ ಹಣ್ಣನ್ನು ತಿನ್ನುವುದರಿಂದ ಸಾಕಷ್ಟು ತೊಂದರೆ ಕೊಡುವ ಸೊಂಟನೋವು,ಮಂಡಿನೋವು ಮತ್ತು ಕೀಲುನೋವುಗಳನ್ನು ಕಡಿಮೆ ಮಾಡಿಕೊಳ್ಳಬಹುದು ಖರ್ಜುರ ಒಣಗಿದ ಮೇಲೆ ಉತ್ತತ್ತಿ ಆಗುತ್ತದೆ ಅದರಲ್ಲಿರುವ ನೀರನ್ನು ಆ ಹಣ್ಣು ಹಿರಿಕೊಳ್ಳುವುದರಿಂದ ಅದು ಇನ್ನಷ್ಟು ರುಚಿಯಾಗುತ್ತದೆ.ಇನ್ನು ಇದರ ಬೆಲೆ ಕೂಡ ಬಹಳಷ್ಟು ಕಡಿಮೆ 150 ರಿಂದ 200 ರೂಪಾಯಿ ಒಳಗಡೆ ಒಂದು ಕೆಜಿಗೆ ಇರುತ್ತದೆ. ಒಂದು ಕೆಜಿಗೆ ಕಡಿಮೆ ಎಂದರು 200 ಅಥವಾ 250 ರಷ್ಟು ಉತ್ತತ್ತಿಗಳು ಬರುತ್ತವೆ. ಪ್ರತಿದಿನ 2 ಉತ್ತತ್ತಿಯನ್ನು ತಿನ್ನುವುದರಿಂದ ಮಂಡಿನೋವುಗಳಿಗೆ ಸೊಂಟನೋವುಗಳಿಗೆ ಹಾಗೂ ಇನ್ನಿತರ ಕೀಲುನೋವುಗಳಿಗೆ ವಿರಾಮ ಹೇಳಬಹುದು ಇವುಗಳಿಗೆ ಮಾಡಬೇಕಾಗಿರುವುದು ಇಷ್ಟೇ.ಆ ಹಣ್ಣನ್ನ ಯಾವ ರೀತಿ ತಿನ್ನುವುದರಿಂದ ನಾವು ಎಲ್ಲ ನೋವುಗಳಿಂದ ಮುಕ್ತಿ ಪಡೆಯಬೇಕು ಅಂದರೆ ಈ 2 ಹಣ್ಣುಗಳನ್ನು ರಾತ್ರಿ ನೀರಿನಲ್ಲಿ ನೆನಸಿಟ್ಟು ಬೆಳಿಗ್ಗೆ ಎದ್ದ ತಕ್ಷಣ ತಿನ್ನುವುದು.
ಇದರಿಂದ ಅತ್ತ್ಯದ್ಭುತ ಆರೋಗ್ಯ ಪ್ರಯೋಜನಗಳನ್ನು ಹೊಂದಬಹುದು ಅಷ್ಟೇ ಅಲ್ಲದೆ ಇದರಲ್ಲಿರುವ ಪೋಷಕಾಂಶಗಳು ನಿಮ್ಮ ದೇಹಕ್ಕೆ ಶಕ್ತಿಯನ್ನು ನೀಡುವುದಲ್ಲದೆ ಇನ್ನು ಅನೇಕ ಅನೇಕ ತೊಂದರೆಗಳಿಂದ ಉಪಶಮನವನ್ನು ನೀಡುತ್ತವೆ. ಇದರಲ್ಲಿ ವಿಟಮಿನ್ ಎ, ವಿಟಮಿನ್ ಸಿ ಕಬ್ಬಿಣಾಂಶ ಶರೀರಕ್ಕೆ ಸಮೃದ್ಧವಾದಂತಹ ಶಕ್ತಿಯನ್ನು ನೀಡುತ್ತದೆ ಅಷ್ಟೇ ಅಲ್ಲದೆ ಮೂಳೆಗಳಿಗೆ ಬಲವರ್ಧಕ ಪ್ರತಿದಿನ ಈ 2 ಉತ್ತತ್ತಿಯನ್ನು ತಿನ್ನುವುದರಿಂದ ಸಾಕಷ್ಟು ನೋವುಗಳಿಂದ ನಾವು ನಿವಾರಣೆಯನ್ನು ಹೊಂದಬಹುದು. ಯಾರು ಸೊಂಟನೋವು ಮಂಡಿ ನೋವು ಮತ್ತು ಇನ್ನಿತರೆ ಕೀಲುನೋವುಗಳಿಂದ ಬಳಲುತ್ತಿದ್ದಾರೋ ಅವರು ಪ್ರತಿದಿನ ಈ 2 ಒಣಗಿದ ಖರ್ಜುರಗಳನ್ನು ರಾತ್ರಿ ನೀರಿನಲ್ಲಿ ನೆನೆ ಇಟ್ಟುಕೊಂಡು ಬೆಳಿಗ್ಗೆ ಎದ್ದ ತಕ್ಷಣ ತಿನ್ನಬೇಕು.ಇದರಿಂದ ದಂತಗಳು ಕೂಡ ಧೃಢವಾಗಿ ದಂತ ಸಮಸ್ಯೆಗಳು ಬರದಂತೆ ನಿವಾರಣೆ ಮಾಡುತ್ತದೆ. ಹೀಗೆ ಪ್ರತಿನಿತ್ಯ ತಿನ್ನುವುದರಿಂದ ಒಳ್ಳೆ ಲಾಭಗಳು ಇವೆ ಎಂದು ಹೇಳುತ್ತಾರೆ ನಿಪುಣರು.
ಇದಷ್ಟೇ ಅಲ್ಲದೆ ಈ ಒಣಗಿದ ಖರ್ಜುರದಲ್ಲಿ ಐರನ್ ಅಂದರೆ ಕಬ್ಬಿಣದ ಅಂಶ ಅಧಿಕವಾಗಿ ಇರುವುದರಿಂದ ಕೆಂಪು ರಕ್ತಕಣ ಗಳನ್ನು ವೃದ್ಧಿಮಾಡುವುದರಲ್ಲಿ ಇದು ಪ್ರಧಾನ ಪಾತ್ರ ವಹಿಸುತ್ತದೆ.ಇನ್ನು ಶರೀರದ ಪ್ರತಿಯೊಂದು ಅವಯವಕ್ಕೂ ಆಕ್ಸಿಜನ್ ಸರಬರಾಜು ಆಗುವಂತೆ ರಕ್ತವನ್ನು ವೃದ್ಧಿಸುತ್ತದೆ. ಯಾರು ಅಧಿಕ ರಕ್ತದ ಒತ್ತಡದಿಂದ ಬಾದೆ ಪಡುತ್ತಿರುತ್ತಾರೋ ಅಂತವರು ಈ ಒಣಗಿದ ಖರ್ಜುರವನ್ನು ನೀರಿನಲ್ಲಿ ನೆನೆ ಇಟ್ಟುಕೊಂಡು ಬೆಳಿಗ್ಗೆ ಎದ್ದ ತಕ್ಷಣ ಇದನ್ನು ತಿನ್ನುವುದರಿಂದ ತಕ್ಷಣವೇ ಶರೀರಕ್ಕೆ ಶಕ್ತಿ ಒದಗಿದಂತಾಗುತ್ತದೆ.ಇನ್ನು ಕೆಲವರಿಗೆ ಇದು ಮೇದಸ್ಸು ಬೆಳಸುವುದರಲ್ಲಿ ಸಂದೇಹ ಇಲ್ಲ ಎನ್ನುತ್ತಾರೆ ತಜ್ಞರು ಮುಖ್ಯವಾಗಿ ಮಕ್ಕಳಿಗೆ ಈ ಒಣಗಿದ ಖರ್ಜುರವನ್ನು ನೀರಿನಲ್ಲಿ ನೆನೆಸಿ ಕೊಡುವುದರಿಂದ ನೆನಪಿನ ಶಕ್ತಿ ಅಧಿಕವಾಗುತ್ತದೆ ಅಷ್ಟೇ ಅಲ್ಲದೆ ಶಾರೀರಿಕವಾಗಿ ಎನರ್ಜಿ ಲೆವೆಲ್ಸ್ ಹೆಚ್ಚಾಗುತ್ತದೆ. ಇನ್ನು ಬಳಲಿದ ದೇಹಕ್ಕೆ ಈ ಒಣಗಿದ ಖರ್ಜುರ ತಿನ್ನುವುದರಿಂದ ದೇಹ ಬಹು ಬೇಗ ಮತ್ತೆ ಉತ್ತೇಜನವನ್ನು ಪಡೆದುಕೊಳ್ಳುತ್ತದೆ.ಅಷ್ಟೇ ಅಲ್ಲದೆ ಚೈತನ್ಯವಾಗುತ್ತದೆ.
ಪರೀಕ್ಷೆಯ ಸಮಯದಲ್ಲಿ ಮಕ್ಕಳಿಗೆ ಈ ಒಣ ಖರ್ಜುರವನ್ನು ನೆನಸಿ ಕೊಡುವುದರಿಂದ ಮಾನಸಿಕ ಹಾಗೂ ಶಾರೀರಿಕ ಶಕ್ತಿಯನ್ನು ಇದು ನೀಡುತ್ತದೆ.ಹೀಗಾಗಿ ಇವರಿಗೆ ಶರೀರದ ಸಹಾಯ ಮೆದುಳಿಗೆ ಉಂಟಾಗಿ ಮೆದುಳು ಚುರುಕಾಗಿ ಕೆಲಸ ಮಾಡುತ್ತದೆ. ಮುಖ್ಯವಾಗಿ ಗರ್ಭಿಣಿ ಸ್ತ್ರೀಯರಿಗೂ ಕೂಡ ಇದನ್ನು ಪ್ರತಿನಿತ್ಯ ಸೇವಿಸುವುದರಿಂದ ಗರ್ಭಾಶಯದ ನರಗಳು ಬಲವಾಗಿ ಹೆರಿಗೆಯ ಸಮಯದಲ್ಲಿ ನಾರ್ಮಲ್ ಡೆಲಿವರಿ ಆಗಲು ಕಾರಣವಾಗುತ್ತದೆ. ಸೋಡಿಯಂ ಪೊಟ್ಯಾಷಿಯಂ ಇವುಗಳಲ್ಲಿ ಅತಿಯಾಗಿ ಇರುವುದರಿಂದ ಹೃದಯದ ಆರೋಗ್ಯಕ್ಕೂ ಕೂಡ ಇದು ಒಳ್ಳೆಯದು ಇನ್ನು ಒಣಗಿದ ಖರ್ಜುರದಲ್ಲಿ ಕೊಲೆಸ್ಟ್ರಾಲ್ ಅಂಶ ಬಹಳ ಕಡಿಮೆ ಇರುತ್ತದೆ ಆದ್ದರಿಂದ ಇದನ್ನು ಸೇವಿಸುವುದರಿಂದ ಕೆಟ್ಟ ಕೊಲೆಸ್ಟ್ರಾಲ್ ನಿಂದ ಹೊರಬರಬಹುದು.
ಪೊಟ್ಯಾಷಿಯಂ ಅಧಿಕವಾಗಿರುವುದರಿಂದ ರಕ್ತದ ಒತ್ತಡವನ್ನು ಕಂಟ್ರೋಲ್ ನಲ್ಲಿ ಇಡುತ್ತದೆ ಇನ್ನು ಇದನ್ನು ಹೀಗೆ ಪ್ರತಿನಿತ್ಯ ಸೇವಿಸುವುದರಿಂದ ಆಹಾರ ಚನ್ನಾಗಿ ಜೀರ್ಣವಾಗುವುದಲ್ಲದೆ ಮಲವಿಸರ್ಜನೆ ಸುಲಭವಾಗಿ ಜರಗುತ್ತದೆ ಹೀಗೆ ಸೊಂಟನೋವು ಮಂಡಿನೋವು ಕೀಲುನೋವುಗಳಿಂದ ಬಾದೆ ಪಡುತ್ತಿರುವವರು ಪ್ರತಿನಿತ್ಯ ಹೀಗೆ ಇದನ್ನು ಸೇವಿಸುವುದರಿಂದ ಬಹಳಷ್ಟು ಉಪಯೋಗಗಳು ಇವೆ ಎಂದು ಹೇಳಲಾಗುತ್ತಿದೆ

By admin