ಚಾಮರಾಜನಗರ: ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆಗಳು ಅಭಿವೃದ್ದಿ ಯಾದರೆ ಅದು ಗ್ರಾಮಗಳ ಪ್ರಗತಿ ಹಾಗೂ ನಾಗರೀಕರ ಸಂಚಾರಕ್ಕೆ ಅಗತ್ತವಾಗಿದೆ ಎಂದು ಶಾಸಕ ಸಿ. ಪುಟ್ಟರಂಗಶೆಟ್ಟಿ ತಿಳಿಸಿದರು
ತಾಲ್ಲೂಕಿನ ವಿದಾನಸಭಾ ಕ್ಷೇತ್ರ ವ್ಯಾಪ್ತಿಯ ವಿವಿದ ಗ್ರಾಮಗಳಲ್ಲಿ ಮುಖ್ಯ ಮಂತ್ರಿಗಳ ವಿಶೇಷ ಅಭಿವೃದ್ದಿ ಯೋಜನೆಡಿಯಲ್ಲಿ ವೆಂಕಟಯ್ಯನಛತ್ರ ವಿ,ಸಿ ಹೂಸೂರು ಗ್ರಾಮದಲ್ಲಿ ಲಿಂಗಾಯಿತರ ಬೀದಿಗೆ ೫೦ಲಕ್ಷ ರೂ ವೆಚ್ಚದಲ್ಲಿ ರಸ್ತೆ ಮತ್ತು ಚರಂಡಿ ಅಭಿವೃದ್ದಿ ಕಾಮಗಾರಿಗೆ ಶಾಸಕ ಸಿ,ಪುಟ್ಟರಂಗಶೆಟ್ಟಿ ಭೂಮಿ ಪೂಜೆ ನೆರವೇರಿಸಿದರು,
ಈವೇಳೆ ಮಾತನಾಡಿದ ಶಾಸಕರು ಗ್ರಾಮಗಳಿಗೆ ಅಗತ್ಯವಾಗಿ ಬೇಕಾದ ರಸ್ತೆ-ಚರಂಡಿ-ಸಮುದಾಯ ಭವನ,ಕುಡಿಯುವನೀರು ಗಂಗಾ ಕಲ್ಯಾಣ ಯೋಜನೆ ಅರ್ಹ ಫಲಾನು ಭವಿಗಳಿಗೆ ಆಶ್ರಯ ಮನೆ ನಿವೇಶನ ಸೇರಿದಂತೆ ಸರ್ಕಾರದಿಂದ ನೀಡಲಾಗುವ ಸೌಲಭ್ಯಗಳನ್ನು ಸಮಗ್ರವಾಗಿ ಕಲ್ಪಿಸಲಾಗಿದೆ ಎಂದರು
ಕಾಮಗಾರಿ ನಿರ್ವಹಿಸುತ್ತಿರುವ ಇಂಜಿನಿಯರ್ ಗುತ್ತಿಗೆದಾರರು ಗುಣಮಟ್ಟದಿಂದ ತ್ವರಿತವಾಗಿ ಪೂರ್ಣಗೊಳಿಸುವಂತೆ ಶಾಸಕರು ಸೂಚಿಸಿದರು,
ಈ ಸಂಧರ್ಭದಲ್ಲಿ ಎ,ಪಿ,ಎಂ.ಸಿ ಮಾಜಿ ಅಧ್ಯಕ್ಷ ಬಿ,ಕೆ ರವಿಕುಮಾರ್ ಜಿ,ಪಂ,ಮಾಜಿ ಸದಸ್ಯ ರಮೇಶ್ ತಾ,ಪಂಮಾಜಿ ಸದಸ್ಯ ಎಚ್,ಎಂ, ಮಹದೇವಶೆಟ್ಟಿ, ಎ,ಪಿ,ಎಂಸಿ ಸದಸ್ಯ ಸೋಮೇಶ್,ಗ್ರಾ,ಪಂ ಸದಸ್ಯ ಕೆಂಪರಾಜ್ ಮುಖಂಡರಾದ ಶಿವಮಲ್ಲಪ್ಪ ಶಾಂತಪ್ಪ ಶೇಖರಪ್ಪ ಮಹೇಶ್ ಸೋಮಣ್ಣ ಶಾಂತಪ್ಪ ಹೂಸೂರು ಜಗದೀಶ್ ನದೀಶ್ ಮಹೇಶ್ ಇಂಜಿನಿಯರ್ ಮಧುಸೋದನ್ ಸೇರಿದಂತೆ ಗ್ರಾಮದ ಮುಖಂಡುರು ಗ್ರಾಮಾಸ್ಥರು ಜನಪ್ರತಿನಿಧಿಗಳುಇದ್ದರು.