ಮೈಸೂರು. ಜು ೨೧ ವಿಶ್ವ ಯೋಗ ದಿನಾಚರಣೆ ಅಂಗವಾಗಿ ಮೂರು ಮಂದಿ ಯೋಗ ಸಾಧಕರಿಗೆ ಸನ್ಮನಾ ಹಾಗೂ ಯೋಗ ಪಟುಗಳಿಂದ ಕಠಿಣ ಆಸನ ಸೂರ್ಯನಮಸ್ಕಾರ ಪ್ರದರ್ಶನ ಮಾಡಲಾಯಿತು.ಮೈಸೂರು ಲಕ್ಷೀಪುರಂ ಹೊಯ್ಸಳ ಕರ್ನಾಟಕ ಸಂಘದಲ್ಲಿ ಸುವರ್ಣ ಬೆಳಕು ಫೌಂಡೇಷನ್ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಯೋಗಪಟುಗಳಾದ ರವಿ.ಬಿ.ಸುಜಾತ ರವಿ ಕುಮಾರ ಅವರಿಗೆ ಸನ್ಮನಾ ಮಾಡಲಾಯಿತು.
ಬಳಿಕ ಮಾತನಾಡಿದ ಪೈಟರ್ ಸ್ಪೋಟ್ಸ್ ವೇರ್ ಮಾಲೀಕರಾದ. ಮಂಜುನಾಥ ಸಿಂಗ್ ಅವರು ಇತ್ತೀಚಿನ ದಿನಗಳಲ್ಲಿ ದಿನ ನಿತ್ಯ ಜಂಜಾಟ ಹಾಗೂ ಕೆಲಸದ ಒತ್ತಡದಿಂದ ಸರಿಯಾದ ಜೀವನ ಶೈಲಿಯೇ ಮರೆತಿಂತಾಗಿದೆ, ಈ ಆಧುನಿಕ ಜೀವನ ಶೈಲಿಯಿಂದ ಜನ ಸಾಮನ್ಯರು ಹಲವಾರು ಖಾಯಿಲೆಗೆ ತುತ್ತಾಗುತ್ತ ಇದ್ದಾರೆ ಆದರಿಂದ್ದ ಪ್ರತಿಯೊಬ್ಬರು ಯೋಗ ವ್ಯಾಯಮ ಸರಿಯಾದ ಆಹಾರ ಕ್ರಮ ದಿನ ನಿತ್ಯ ಆಭ್ಯಾಸ ರೂಡಿಸಿಕೊಂಡರೆ ಆರೋಗ್ಯ ನಮ್ಮದಾಗುತ್ತೆದೆ,ಯಾವ ಸಾಧಕ ಸದಾಕಾಲವು ಯೋಗ ಸಾಧನೆಯನ್ನು ಮಾಡುತ್ತಿರುವನೋ ಅವನು ಆರೋಗ್ಯವಂತನಾಗಿರುತ್ತಾನೆ.ಈ ಹಿಂದೆಯೂ ಅನೇಕ ಸಾಧಕರು ಈ ರೀತಿಯಲ್ಲಿ ಸಾಧನೆ ಮಾಡಿ ನಿತ್ಯತ್ವವನ್ನು ಪಡೆದಿರುತ್ತಾರೆ ಇದಕ್ಕೆ ಯೋಗವಿದ್ಯೆಗಿಂತಲೂ ಮಿಗಿಲಾದ ಅಮೃತ ಮಾರ್ಗವು ಬೇರೂಂದಿಲ್ಲ.
ದೈಹಿಕ ಸ್ಥಿತಿಯನ್ನು ಕಾಪಾಡಿಕೊಳ್ಳಬಹುದು. ಹಾಗೂ ಪ್ರಸ್ತುತ ಕರೋನಾ ವೈರಸ್ ಅನ್ನು ಸ್ವತಃ ಈ ಯೋಗಾಭ್ಯಾಸಗಳಿಂದ ಹತ್ತಿಕ್ಕಬಹುದು ಎಂದು ಉತ್ತಮ ಮಾರ್ಗದರ್ಶನವನ್ನು ಯೋಗ ಚಾರ್ಯರ ಮೂಲಕ ನಾವು ವಿದ್ಯೆ ಕಲಿತು ಇನ್ನೂಬ್ಬರಿಗೆ ಅದರ ಮಹತ್ವ ತಿಳಿಸಬೇಕು.ಹಾಗು ಸಾಮಾನ್ಯರಲ್ಲಿ ಸಲಹೆಯಿತ್ತರು ಯೋಗಾಸನಗಳನ್ನು ಯೋಗ ತರಬೇತುದಾರರಿಂದ ಸಮಯ ನಿಯಮಾನುಸಾರವಾಗಿ ಕಲಿತರೆ ಒಳಿತು ಆನಂತರ ಸ್ವತಃ ಅಭ್ಯಾಸ ಮಾಡಿಕೊಳ್ಳ ಬಹುದು ಎಂದರು.
ನಂತರ ಮಾತನಾಡಿದ ಹಿಮಾಲಯ ಫೌಂಡೇಶನ್ ಅಧ್ಯಕ್ಷ ಎನ್ ಅನಂತ್. ಸಾಂಸ್ಕೃತಿಕ ನಗರಿ ಮೈಸೂರು ಎಂದು ಹೆಸರುವಾಸಿಯಾಗಿರುವ ಬೆನ್ನಲ್ಲೇ ಯೋಗದ ವಿಚಾರದಲ್ಲಿ ಅಪಾರ ಮಹತ್ವವುಳ್ಳ ಐತಿಹಾಸಿಕ ಸ್ಥಳವಾಗಿ ಗುರುತಾಗುತ್ತಿರುವ ಮೈಸೂರು ನಮ್ಮದು ಎನ್ನುವ ಹೆಮ್ಮೆ ಮೂಡುತ್ತಿದೆ.ಯೋಗದ ವಿಷಯವಾಗಿ ತಿಳಿಸುವ ಮುಖ್ಯ ವಿಷಯವೆಂದರೆ ಬಹಳಷ್ಟು ಜನ ಯೋಗ ಎಂದರೆ ವ್ಯಾಯಾಮ ಎಂದು ತಪ್ಪಾಗಿ ತಿಳಿದಿದ್ದಾರೆ.ಇದರ ಬಗ್ಗೆ ಸ್ಪಷ್ಟ ಅರಿವು ಜನತೆಗೆ ಬರಬೇಕು ಹಾಗೂ ಪ್ರತಿಯೊಬ್ಬರು ಯೋಗದ ಮಹತ್ವ ಅರಿತು ಯೋಗ ಕಲಿತು ಮಾನಸಿಕ ಮತ್ತು ದೈಹಿಕವಾಗಿ ಆರೋಗ್ಯ ಸ್ವಾಸ್ಥ್ಯವನ್ನು ಹೊಂದಬೇಕೆಂದರು.
ನಂತರ ಮಾತನಾಡಿದ ಮಧಮೇಹ ತಜ್ಞ ರೇಣುಕ ಪ್ರಸಾದ್ ಅವರು ಮಧುಮೇಹಿಗಳ ಸಮ್ಯಸ್ಯೆಗಳಿಗೆ ಯೋಗ ಸೂಕ್ತ ಪರಿಹಾರ.ಹಾಗೂ ಮಧುಮೇಹವು ಸುಧೀರ್ಘ ಆಳವಾದ ಸಮಸ್ಯೆ ಆಗಿರುವುದರಿಂದ ನಿರಂತರ ಯೋಗದಿಂದ ಸುಲಭವಾಗಿ ಈ ಖಾಯಿಲೆಯನ್ನು ನಿಯಂತ್ರಣದಲ್ಲಿಟ್ಟುಕೊಂಡು ಸಾಮಾನ್ಯರಂತೆ ಆರಾಮದಾಯಕ ಜೀವನವನ್ನು ಸಾಗಿಸಬಹುದು ಹಾಗು ಇನ್ಸುಲಿನ್ ಪ್ರಮಾಣವನ್ನು ದೇಹದಲ್ಲಿ ಸಮತೋಲನ ಗೊಳಿಸಿ ಅಥವಾ ದೇಹದಲ್ಲಿ ಇನ್ನಸುಲಿನ್ ಉತ್ಪಾದನೆಗೆ ಯೋಗ ಸಹಕಾರಿಯಾಗಿದೆ.ಮತ್ತು ದೇಹದ ರಕ್ತದಲ್ಲಿನ ಸಕ್ಕರೆ ಪ್ರಮಾಣದ ಸಮತೋಲನಕ್ಕೆ ಈ ಯೋಗಭ್ಯಾಸ ಸಹಕಾರಿಯಾಗಿದೆ.ಆದಷ್ಟು ಮಧುಮೇಹಿಗಳು ಯೋಗದ ಮೊರೆ ಹೋದರೆ ನೆಮ್ಮದಿಯುಕ್ತ ಜೀವನ ಸಾಗಿಸಬಹುದೆಂದು ಉತ್ತಮ ಸಂದೇಶವನ್ನು ತಿಳಿಸಿಕೊಟ್ಟರು.
ಕಾರ್ಯಕ್ರಮದಲ್ಲಿ ಸುವರ್ಣ ಬೆಳಕು ಫೌಂಡೇಶನ್ ಅಧ್ಯಕ್ಷ ಎಸ್. ಮಹೇಶ್ ನಾಯಕ್, ಹೊಯ್ಸಳ ಕರ್ನಾಟಕ ಸಂಘ ಕಾರ್ಯದರ್ಶಿ ರಂಗನಾಥ. ಅಂತರ್ ರಾಷ್ಟ್ರೀಯ ಚೆಸ್ ಆಟಗಾರ ವಿಜೇಯಿಂದ್ರ. ಕೇಬಲ್ ರವಿ . ಶಿವು, ಕುಮಾರ್,ಶ್ರೀಕಾಂತ್, ಮುಂತಾದವರು ಲೋಕೆಶ್ ಉಪಸ್ಥಿತರಿದ್ದರು.