ಮೇಷ
ಈ ರಾಶಿಯ ಛಾಯಾಗ್ರಾಹಕರು, ವಿಡಿಯೊ ಗ್ರಾಹಕರುಗಳಿಗೆ ಹೆಚ್ಚಿನ ಅವಕಾಶಗಳು ಮೂಡಿಬರಲಿದೆ. ಪುಣ್ಯಕ್ಷೇತ್ರ, ಮನೆದೇವರ ದರ್ಶನ ಭಾಗ್ಯ ದೊರೆಯಲಿದೆ. ಬಾಕಿ ಇರುವ ಕೆಲಸಗಳನ್ನು ಯಶಸ್ವಿಯಾಗಿ ಪೂರೈಸುವ ಅವಕಾಶವು ಒದಗಿ ಬರುತ್ತದೆ.

ವೃಷಭ
ಈ ರಾಶಿಯವರು ಹೊಸ ಉದ್ಯಮಗಳನ್ನು ಪ್ರಾರಂಭಿಸಲಿದ್ದೀರಿ. ಸಣ್ಣಪುಟ್ಟ ಸಾಲಗಳಿಂದ ಮುಕ್ತರಾಗಲಿದ್ದೀರಿ. ಉದ್ಯೋಗದಾತರ ವಿಶೇಷ ಸಹಾಯ ಸಹಕಾರದಿಂದಾಗಿ ಪರಿಣಿತರಾಗಲಿದ್ದೀರಿ.

ಮಿಥುನ
ಈ ರಾಶಿಯ ರಾಜಕೀಯ ಮತ್ತು ಗಣ್ಯವ್ಯಕ್ತಿಗಳಿಗೆ ಸಾಮಾಜಿಕ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಸ್ಥಾನಮಾನ ಗೌರವಗಳು ಸಿಗಲಿವೆ. ವ್ಯಾಪಾರ ವ್ಯವಹಾರದಲ್ಲಿರುವವರಿಗೆ ಹೆಚ್ಚಿನ ಲಾಭದ ನಿರೀಕ್ಷೆ. ದೊಡ್ಡ ಹುದ್ದೆಯಲ್ಲಿರುವವರಿಗೆ ಇನ್ನೂ ಹೆಚ್ಚಿನ ಬಡ್ತಿ ದೊರೆಯಲಿದೆ.

ಕಟಕ
ಈ ರಾಶಿಯವರಿಗೆ ನಿಮ್ಮ ಮನಸ್ಸಿನ ವಿಷಯಗಳನ್ನು ಹೇಳಿಕೊಳ್ಳಲು ಸೂಕ್ತ ಸಮಯ. ಸಂಶೋಧಕರು ಪ್ರಶಂಸೆ ಗೌರವಾದರಗಳಿಗೆ ಪಾತ್ರರಾಗುವ ಸಾಧ್ಯತೆಗಳಿವೆ. ಜನಸಾಮಾನ್ಯರ ಸಮಸ್ಯೆಗಳನ್ನು ತಿಳಿದು ಅದಕ್ಕೆ ಸ್ಪಂದಿಸುವ ಕೆಲಸ ಮಾಡಿದಲ್ಲಿ ಉತ್ತಮ ಅವಕಾಶ ದೊರೆಯಲಿದೆ.

ಸಿಂಹ
ಈ ರಾಶಿಯವರು ಸಮಾದಾನದಿಂದ ಚಿಂತನೆ ವಿಮರ್ಶೆಯಿಂದಾಗಿ ವೈಯಕ್ತಿಕ ಸಮಸ್ಯೆಗಳಿಗೆ ಸುಲಭವಾಗಿ ಪರಿಹಾರ ಸಿಗಲಿದೆ. ಇದರಿಂದಾಗಿ ಮನೆಯಲ್ಲಿ ನೆಮ್ಮದಿಯ ವಾತಾವರಣ ನಿರ್ಮಾಣವಾಗುವುದು.

ಕನ್ಯಾ
ಈ ರಾಶಿಯವರಿಗೆ ವಾಣಿಜ್ಯ ವ್ಯವಹಾರ, ಜಾಹೀರಾತುಗಳ ಒಪ್ಪಂದಗಳಿಂದ ಲಾಭ ನಿರೀಕ್ಷಿಸಿಸುವ ಸಾಧ್ಯತೆ. ಕೆಲಸ ಕಾರ್ಯಗಳಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸುವುದು ಅಗತ್ಯ. ಶುಭವಾರ್ತೆ ಕೇಳುವಿರಿ ಇದರಿಂದ ಮನೆಯಲ್ಲಿ ಸಡಗರ ಸಂಭ್ರಮದ ವಾತಾವರಣ ಇರಲಿದೆ.

ತುಲಾ
ಈ ರಾಶಿಯವರು ಮಾಡುವ ಸಮಾಜ ಸೇವೆ ಕಾರ್ಯಗಳಿಂದ ಗೌರವ ಹೆಚ್ಚಾಗಲಿದ್ದು, ಉತ್ತಮವಾದ ಲಾಭವೂ ಬರಲಿದೆ. ಹಲವರು ಗಣ್ಯರ ಆಕಸ್ಮಿಕ ಸಂಪರ್ಕದಿಂದಾಗಿ ಜೀವನಶೈಲಿಯಲ್ಲಿ ಬದಲಾವಣೆ ಸಾಧ್ಯತೆಗಳಿದೆ. ಹಣಕಾಸಿನ ಸ್ಥಿತಿ ಉತ್ತಮಗೊಳ್ಳುವ ಸಾಧ್ಯತೆಗಳಿವೆ.

ವೃಶ್ಚಿಕ
ಈ ರಾಶಿಯವರು ತಮ್ಮ ಕೆಲಸ ಕಾರ್ಯಗಳಲ್ಲಿ ವಿಶೇಷ ಆಸಕ್ತಿಯಿಂದ ಶ್ರಮ ವಹಿಸುವುದು ಒಳ್ಳೆಯದು. ಮಕ್ಕಳ ಬದುಕಿನಲ್ಲಿ ಹೊಸ ತಿರುವು ಬರಲು ಅವಕಾಶ. ಧಾರ್ಮಿಕ ಕ್ಷೇತ್ರದಲ್ಲಿ ಹೆಚ್ಚಿನ ಕೆಲಸ ಮಾಡುವವರು.

ಧನು
ಈ ರಾಶಿಯವರ ಸಮಸ್ಯೆಗಳು ಪರಿಹಾರವಾಗುವ ಸಾಧ್ಯವಾಗಲಿದೆ. ಮೇಲಧಿಕಾರಿಗಳ ವಿಶ್ವಾಸಕ್ಕೆ ಪಾತ್ರರಾಗಲಿದ್ದೀರಿ. ವಿವಾಹ ನಿರೀಕ್ಷೆಯಲ್ಲಿರುವವರಿಗೆ ಉತ್ತಮವಾದ ಸಂಬಂಧಗಳು ಕೂಡಿಬರಲಿದೆ. ನೂತನ ಉದ್ಯಮ ಆರಂಭಕ್ಕೆ ಒಳ್ಳೆಯಕಾಲವಾಗಿದೆ.

ಮಕರ
ಈ ರಾಶಿಯವರಿಗೆ ಮನೆ ನಿರ್ಮಾಣ ಇಲ್ಲವೇ ಖರೀದಿ ಮಾಡುವ ಸಾಧ್ಯತೆಗಳಿದೆ. ಲೇವಾದೇವಿ ವ್ಯವಹಾರಗಳಲ್ಲಿ ಉತ್ತಮ ಪ್ರಗತಿ ಕಾಣಲಿದ್ದೀರಿ. ಶ್ರಮಕ್ಕೆ ತಕ್ಕ ಪ್ರತಿಫಲ ಬರಲಿದೆ. ಮನೆಯ ಸದಸ್ಯರೊಂದಿಗೆ ದೇವರ ದರ್ಶನ ಮಾಡುವ ಸಾಧ್ಯತೆಯಿದೆ.

ಕುಂಭ
ಈ ರಾಶಿಯವರಿಗೆ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ವಿದೇಶ ಪ್ರಯಾಣ ಮಾಡುವ ಸಂಭವವಿದೆ. ಸಣ್ಣ ಸಣ್ಣ ಉದ್ಯಮದಾರರಿಗೆ ಹೆಚ್ಚಿನ ಲಾಭ ಬರಲಿದೆ. ಕೆಲವು ವ್ಯಾಪಾರಿಗಳಿಗೆ ಕ್ಷೇತ್ರ ಬದಲಾಯಿಸಲು ಇದು ಉತ್ತಮ ಸಮಯ.
ಮೀನ
ಈ ರಾಶಿಯವರಲ್ಲಿ ಗಂಭೀರವಾದ ಉದ್ದೇಶಗಳಿಟ್ಟುಕೊಂಡು ಸಾಕಷ್ಟು ಬದಲಾವಣೆಗಳು ಕಂಡುಬರಲಿದೆ. ಸ್ತ್ರೀ ಕುಲಕ್ಕೆ ಹೆಚ್ಚಿನ ಜವಾಬ್ದಾರಿ ಬೀಳಲಿದೆ. ಕೆಲಸ ಕಾರ್ಯಗಳಲ್ಲಿ ಸಿಗುವ ಉತ್ತಮ ಪ್ರೋತ್ಸಾಹದಿಂದ ಹೆಚ್ಚಿನ ಪ್ರಸಂಶೆಗೆ ಪಾತ್ರರಾಗುವಿರಿ.

ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಜ್ಯೋತಿಷ್ಯಶಾಸ್ತ್ರದಿಂದ ಶಾಶ್ವತ ಪರಿಹಾರಕ್ಕಾಗಿ ಒಮ್ಮೆ ಸಂಪರ್ಕಿಸಿ
ಶ್ರೀನಿವಾಸ ಆಚಾರ್ಯ
ಪ್ರಸಿದ್ಧ ಜ್ಯೋತಿಷ್ಯರು, ಪ್ರಧಾನ್ ತಾಂತ್ರಿಕರು
ಮೊ: 9611732144