Byadmin
AUG 18, 2021
ಇಡೀ ಭಾರತದಲ್ಲೆ ‘ಗ್ಲಿಸರಿನ್’ ಬಳಸದೇ ಕಣ್ಣೀರಿನ ದೃಶ್ಯ ಚಿತ್ರೀಕರಿಸಿದ ಮೊಟ್ಟಮೊದಲ ಚಿತ್ರ
ಸತೀ ಸುಲೋಚನ ಕನ್ನಡದ ಪ್ರಪ್ರಥಮ ಚಿತ್ರವೂ ಹೌದು!
ಕನ್ನಡದ ಮೊಟ್ಟಮೊದಲ ಸಿನಿಮಾ ‘ಸತೀ ಸುಲೋಚನ’ ೧೯೩೪ರಲ್ಲಿ ತೆರೆಕಂಡಿತು! ಈ ಚಿತ್ರಕ್ಕೆ ಆರ್.ನಾಗೇಂದ್ರರಾವ್ ಹೀರೋ ಮತ್ತು ಲಕ್ಷ್ಮಿಬಾಯಿ ಹೀರೋಯಿನ್ ಎಂದು ಸರ್ವಾನುಮತದಿಂದ ನಿರ್ಧರಿಸಲಾಗಿತ್ತು. ಆದರೆ ದುರದೃಷ್ಟವಶಾತ್ ಇವರಿಬ್ಬರ ಕೈತಪ್ಪಿ ಉಪನಾಯಕ-ಉಪನಾಯಕಿ ಎಂದು ಗೊತ್ತುಪಡಿಸಿದ್ದ ಸುಬ್ಬಯ್ಯನಾಯ್ಡು ಮತ್ತು ತ್ರಿಪುರಾಂಭ ಈ ಇಬ್ಬರಿಗೆ ನಾಯಕ-ನಾಯಕಿನಟರಾಗಿ ಅಭಿನಯಿಸುವ ‘ಸುವರ್ಣಾವಕಾಶ’ ಒದಗಿಬಂತು! ಎಲ್ಲರ ಲೆಕ್ಕಾಚಾರ ತಲೆ ಕೆಳಗಾಗಲು ಪ್ರಮುಖ ಕಾರಣ ನಿರ್ಮಾಪಕರಾದ, ರಾಜಸ್ಥಾನ್ ಮೂಲದ ವರ್ತಕ ಬೆಂಗಳೂರು ನಿವಾಸಿ, ಷಾ ಬೂರ್ಮಲ್ ಚಮನ್ಲಾಲ್ ಡುಂಗಾಜಿ! ಚಿತ್ರದ ಬಜೆಟ್ ರೂ.೪೯,೫೧೦/- ಒಟ್ಟು ಗಳಿಸಿದ ಗಲ್ಲಾಪೆಟ್ಟಿಗೆ ಹಣ ರೂ.೫೭,೯೦೦/- ಚಿತ್ರದ ನಿರ್ದೇಶಕರು ವೈ.ವಿ.ರಾವ್[ನಟಿ ಜೂಲಿ ಲಕ್ಷ್ಮಿಯ ತಂದೆ], ಛಾಯಾಗ್ರಾಹಕ ಸಚಿನ್ನಾಯಕ್, ಸಂಗೀತ ನೀಡಿದ್ದವರು

ಹೆಚ್ಆರ್.ಪದ್ಮನಾಭಶಾಸ್ತಿಮತ್ತು ಆರ್ಎನ್ಆರ್, ಹಿನ್ನೆಲೆ ಗಾಯಕರು ಆರ್.ನಾಗೇಂದ್ರರಾವ್, ಲಕ್ಷ್ಮೀಬಾಯಿ. ವಾಲ್ಮೀಕಿ ರಾಮಾಯಣದ ಕತೆಗೆ ಚಿತ್ರಕಥೆ-ಸಂಭಾಷಣೆ-ಹಾಡುಗಳನ್ನು ಬರೆದಿದ್ದವರು ಬೆಳ್ಳಾವೆನರಹರಿಶಾಸ್ತಿç. ಪೂನಾದ ಪ್ರಭಾತ್ ಸ್ಟುಡಿಯೊ ಮತ್ತು ಕೊಲ್ಲಾಪುರದ ಛತ್ರಪತಿಶಿವಾಜಿ ಸ್ಟುಡಿಯೋಗಳಲ್ಲಿ ಚಿತ್ರೀಕರಣಗೊಂಡಿತ್ತು. ೧೭೫ ನಿಮಿಷ ಅವಧಿಯ ಫಿûಲಂ ಹಳೇಮೈಸೂರು ರಾಜ್ಯದಾದ್ಯಂತ ಒಟ್ಟು ೧೩ ಕೇಂದ್ರಗಳಲ್ಲಿ ದಿನಾಂಕ ೩.೩.೧೯೩೪ರಂದು ಬಿಡುಗಡೆಗೊಂಡಿತು. ೪ ಕೇಂದ್ರಗಳಲ್ಲಿ ೫೦ ದಿನದ, ೩ಕೇಂದ್ರಗಳಲ್ಲಿ ೧೦೦ದಿನದ ಹಾಗೂ ೨ಕೇಂದ್ರದಲ್ಲಿ ಸಿಲ್ವರ್ ಜ್ಯುಬಿಲಿಯ ಪ್ರದರ್ಶನ ಕಂಡಿತು! ಮೈಸೂರು ಮಹಾರಾಜರು ಪ್ರಿಂಟ್ ತರಿಸಿಕೊಂಡು ಅರಮನೆಯ ಸ್ವಂತ ಬೆಳ್ಳಿಪರದೆ ಮೇಲೆ ಇಡೀ ಮಂತ್ರಿಮ0ಡಲ-ಬ0ಧು-ಬಳಗದೊಡನೆ ನೋಡಿ ಆನಂದಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಹಲವಾರು ನೂತನ ದಾಖಲೆ ನಿರ್ಮಿಸಿದ ಸತೀಸುಲೋಚನ ಚಿತ್ರದ ತಾರಾಗಣದಲ್ಲಿ; ಆರ್.ನಾಗೇಂದ್ರರಾವ್, ಮೂರ್ತಿರಾವ್, ಶೇಷಾಚಲಂ, ರ್ರಗುಡಿಪತಿವರದರಾವ್, ಕೆಂಪರಾಜೆಅರಸು, ಲಕ್ಷ್ಮೀಬಾಯಿ, ಕಮಲಬಾಯಿ, ಇಂದುಬಾಲ, ಸ್ವರ್ಣಮ್ಮ, ಎಸ್.ಕೆ.ಪದ್ಮಾದೇವಿ, ಮುಂತಾದವರು ನಟಿಸಿದ್ದರು.
ಸ್ಯಾಂಡಲ್ವುಡ್ನ ಮೊಟ್ಟಮೊದಲ ಹೀರೋ ಎಂ.ವಿ.ಸುಬ್ಬಯ್ಯನಾಯ್ಡು ತಾವು ಜೀವಿಸಿರುವವರೆಗೆ ನಡೆದುಬಂದ ದಾರಿಯನ್ನು ಮರೆಯದೆ ನಾಟಕಗಳಲ್ಲು ಪಾತ್ರವಹಿಸುತ್ತಾ ಸಿನಿಮಾಗಳಲ್ಲಿ ನಟಿಸುತ್ತಿದ್ದರು. ಅಂದಿನ ಮೈಸೂರು ರಾಜ್ಯ ಮಾದಲಾಪುರದ ಶ್ರೀಮತಿ/ಶ್ರೀ ವೀರಯ್ಯನಾಯ್ಡು-ವೆಂಕಟಮ್ಮ ದಂಪತಿಗಳ ಪುತ್ರರಾಗಿ ೨೧.೭.೧೮೯೬ರಂದು ಜನಿಸಿ ೧೯೧೬ರಲ್ಲಿ ತಮ್ಮದೇ ನಾಟಕ ಕಂಪನಿ ಆರಂಭಿಸಿದ್ದರು. ೧೨.೦೭.೧೯೬೨ರಲ್ಲಿ ದೈವಾಧೀನರಾದರು. ಕನ್ನಡದ ಪ್ರಪ್ರಥಮ ಹೀರೋಯಿನ್ ತ್ರಿಪುರಾಂಭ ಹೇಳಿಕೊಳ್ಳುವಷ್ಟು ಸುಂದರಿಯೇನಲ್ಲ. ಆದರೂ ಆಕರ್ಷಣೀಯ ಅಭಿನಯದೊಡನೆ ಎಲ್ಲರ ಮೆಚ್ಚುಗೆ ಗಳಿಸಿದ್ದರು. ಸತತ ೩ವರ್ಷ ತೆರೆಕಂಡ ಎಲ್ಲ ಕನ್ನಡ ಚಿತ್ರಗಳಲ್ಲು ಪಾತ್ರವಹಿಸಿದ್ದ ಈಕೆ ‘ಚಕ್ರವರ್ತಿತಿರುಮಗಳ್’ ಮತ್ತು ‘ದಾನಶೂರಕರ್ಣ’ ತಮಿಳು ಚಿತ್ರಗಳಲ್ಲೂ ನಟಿಸಿದ್ದರು. ಪ್ರತಿಯೊಂದು ಸಿನಿಮಾದ ಶೂಟಿಂಗ್ ಮುನ್ನ ಮನೆಯ ಒಳಗೆ-ಹೊರಗೆ ಬಹಳಷ್ಟು ‘ರಿಹರ್ಸಲ್’ ಮಾಡುವ ಅಭ್ಯಾಸ ಬೆಳೆಸಿಕೊಂಡಿದ್ದರು, ಕಲೆಗೋಸ್ಕರ ತಮ್ಮನ್ನು ತಾವೇ ಅರ್ಪಿಸಿಕೊಂಡಿದ್ದರು! ಹಲವಾರು ಪ್ರಪ್ರಥಮಗಳ ದಾಖಲೆಯೊಂದಿಗೆ ಚಂದನವನದ ಇತಿಹಾಸ ಪುಟ ಸೇರಿದ ಇಂಥ ಇಬ್ಬರು ಮಹಾನ್ ಕಲಾವಿದರ ಚಲನಚಿತ್ರಗಳು:-
ದಿ||ಸುಬ್ಬಯ್ಯನಾಯ್ಡು ನಟಿಸಿದ ಚಿತ್ರಗಳು ದಿ||ತ್ರಿಪುರಾಂಭ ನಟಿಸಿದ ಚಿತ್ರಗಳು.
ಕ್ರ.ಸಂ. ಚಲನಚಿತ್ರ ಇಸವಿ ಕ್ರ.ಸಂ. ಚಲನಚಿತ್ರ ಇಸವಿ
೧ ಸತೀ ಸುಲೋಚನ ೧೯೩೪ ೧ ಸತೀ ಸುಲೋಚನ ೧೯೩೪
೨ ವಸಂತ ಸೇನಾ ೧೯೪೧ ೨ ಭಕ್ತ ಧ್ರುವ ೧೯೩೪
೩ ಸತ್ಯ ಹರಿಶ್ಚಂದ್ರ ೧೯೪೩ ೩ ಸದಾರಮೆ ೧೯೩೫
೪ ಮಹಾತ್ಮ ಕಬೀರ್ ೧೯೪೭ ೪ ಸಂಸಾರನೌಕ ೧೯೩೬
೫ ಭೂ ಕೈಲಾಸ ೧೯೫೮ ೫ ಚಿರಂಜೀವಿ ೧೯೩೭
೬ ಧರ್ಮಸ್ಥಳ ಮಹಾತ್ಮೆ ೧೯೬೨ ೬ ರಾಜಸೂಯ ಯಾಗ ೧೯೩೭
೭ ದಾನಶೂರಕರ್ಣ[ತಮಿಳು] ೧೯೬೧ ೭ ಪುರಂದರದಾಸ ೧೯೩೭

ಬೆಂಗಳೂರು-೫೬೦೦೭೨