ವಾರಸುದಾರರ ಮನೆಗೆ ತೆರಳಿ ಚಿನ್ನಾಭರಣ ಹಿಂದಿರುಗಿಸಿ ಪೊಲೀಸರು
ಮೈಸೂರು ನಗರ ಪೊಲೀಸರು, ಸ್ವತ್ತು ಕಳುವು ಪ್ರಕರಣಗಳಲ್ಲಿ ಪತ್ತೆಯಾದ ಸ್ವತ್ತುಗಳನ್ನು ಮಾನ್ಯ ನ್ಯಾಯಾಲಯದ ಅನುಮತಿ ಪಡೆದು ವಾರಸುದಾರರ ಮನೆಗಳಿಗೆ ತೆರಳಿ ಚಿನ್ನಾಭರಣ ಮತ್ತು ನಗದನ್ನು
ಹಿಂತಿರುಗಿಸುವ ಮೂಲಕ 2021ನೇ ಹೊಸ ವರ್ಷಾಚರಣೆಯನ್ನು ವಿಶೇಷವಾಗಿ ಆಚರಿಸಿರುತ್ತಾರೆ.
ಲಷ್ಕರ್ ಪೊಲೀಸ್ ಠಾಣಾ ವ್ಯಾಪ್ತಿಯ ಕನ್ನ ಕಳುವು ಪ್ರಕರಣಕ್ಕೆ ಸಂಬಂಧಪಟ್ಟಂತೆ ಫಿರ್ಯಾದಿ ರೇಖಾ ರವರ ಮನೆಗೆ ತೆರಳಿ ವಶಪಡಿಸಿಕೊಂಡಿರುವ ರೂ. 2,13,000/- ಮೌಲ್ಯದ 40 ಗ್ರಾಂ ತೂಕದ
ಚಿನ್ನದ ಆಭರಣಗಳು ಮತ್ತು 200 ಗ್ರಾಂ ತೂಕದ ಬೆಳ್ಳಿ ಪದಾರ್ಥಗಳನ್ನು ಹಿಂತಿರುಗಿಸಿರುತ್ತಾರೆ.
ಮಂಡಿ ಪೊಲೀಸ್ ಠಾಣಾ ವ್ಯಾಪ್ತಿಯ ಕನ್ನ ಕಳುವು ಪ್ರಕರಣಕ್ಕೆ ಸಂಬಂಧಪಟ್ಟಂತೆ ಫಿರ್ಯಾದಿ ಮೊಹಮ್ಮದ್ ಉಕೈಲ್ ಶಿರೂರ್ ರವರ ಮನೆಗೆ ತೆರಳಿ ವಶಪಡಿಸಿಕೊಂಡಿರುವ ರೂ. 10,00,000/-
ಮೌಲ್ಯದ 225 ಗ್ರಾಂ ತೂಕದ ಚಿನ್ನಾಭರಣಗಳನ್ನು ಹಿಂತಿರುಗಿಸಲಾಯಿತು. ಈ ದಿನ ಮೊಹಮ್ಮದ್ ಉಕೈಲ್ ಶಿರೂರ್ ರವರು ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿದ್ದು, ಕಳೆದುಕೊಂಡಿದ್ದ ಮಂಗಳ ಸೂತ್ರವನ್ನು ಹಿಂದಿರುಗಿಸಿದ್ದು, ಇದರಿಂದ ಸಂತೋಷಗೊಂಡು ಪೊಲೀಸರಿಗೆ ಸಿಹಿಯನ್ನು ನೀಡಿ ಹೊಸ ವರ್ಷದ ಶುಭಾಶಯವನ್ನು ಕೋರಿರುತ್ತಾರೆ.
ನರಸಿಂಹರಾಜ ಪೊಲೀಸ್ ಠಾಣಾ ವ್ಯಾಪ್ತಿಯ ಮನೆ ಕಳ್ಳತನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಫಿರ್ಯಾದಿ ಪಿ. ಅಭಿಷೇಕ್ರವರಿಗೆ ಎ.ಸಿ.ಪಿ. ನರಸಿಂಹರಾಜ ವಿಭಾಗದ ಕಛೇರಿಯಲ್ಲಿ ವಶಪಡಿಸಿಕೊಂಡಿದ್ದ ನಗದು
ಹಣ ರೂ. 2,79,000/-ನ್ನು ಹಿಂದಿರುಗಿಸಲಾಯಿತು.
ಈ ವಿಶೇಷ ಕಾರ್ಯದಲ್ಲಿ ಡಿ.ಸಿ.ಪಿ.ರವರಾದ ಗೀತಪ್ರಸನ್ನ, ಎ.ಸಿ.ಪಿ. ಎಂ. ಶಿವಶಂಕರ್, ಪೊಲೀಸ್ ಇನ್ಸ್ಪೆಕ್ಟರ್ರವರುಗಳಾದ ಅಜûರುದ್ದೀನ್, ನಾರಾಯಣಸ್ವಾಮಿ, ಡಿ.ಎಸ್.ಸುರೇಶ್ಕುಮಾರ್ರವರು ಪಾಲ್ಗೊಂಡಿದ್ದು, ಒಟ್ಟು ರೂ. 14,92,000/- ಮೌಲ್ಯದ 265 ಗ್ರಾಂ ಚಿನ್ನಾಭರಣ, 200 ಗ್ರಾಂ ಬೆಳ್ಳಿ ಪದಾರ್ಥಗಳು ಹಾಗೂ ರೂ. 2,79,000/- ನಗದು ಹಣವನ್ನು ವಾರಸುದಾರರಿಗೆ ಹಿಂದಿರುಗಿಸಲಾಯಿತು.
ಈ ಕಾರ್ಯವನ್ನು ಮೈಸೂರು ನಗರದ ಪೊಲೀಸ್ ಆಯುಕ್ತರವರಾದ ಡಾ: ಚಂದ್ರಗುಪ್ತ, ಐ.ಪಿ.ಎಸ್. ರವರು ಪ್ರಶಂಸಿಸಿರುತ್ತಾರೆ.