ಮೈಸೂರಿನ ಬೆಳಕು ಚಾರಿಟಬಲ್ ಟ್ರಸ್ಟ್ ಕೋವಿಡ್-19 ನ ಲಾಕ್ಡೌನ್ ಸಂಧರ್ಭದಲ್ಲಿ ಸಂಕಷ್ಟಕ್ಕೀಡಾಗಿದ್ದ ರಸ್ತೆಬದಿ ವ್ಯಾಪಾರಿಗಳಿಗೆ 10000ರೂ ಸಹಾಯಧನವನ್ನು ನೀಡಿ ಅವರಿಗೆ ಬಂಡವಾಳವನ್ನು ತೊಡಗಿಸಲು ಸಹಾಯಹಸ್ತವನ್ನು ಚಾಚಿರುವ ಪ್ರಧಾನ ಮಂತ್ರಿಳಿಗೆ ರಸ್ತೆಬದಿ ವ್ಯಾಪಾರಿಗಳಿಂದ ಕೃತಜ್ಞತಾ ಕಾರ್ಯಕ್ರಮ ಮತ್ತು ಸಂಭ್ರಮಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು.
ದೇಶದ ಅಸಂಖ್ಯಾತ ರಸ್ತೆ ಬದಿ ವ್ಯಾಪಾರಿಗಳ ನೆರವಿಗಾಗಿ ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿರವರು ಆತ್ಮನಿರ್ಭರ ಭಾರತ ಯೋಜನೆ ಅಡಿಯಲ್ಲಿ Pಒ SಗಿಂಓIಆಊI ಯ ಮೂಲಕ 10000 ರೂ ಬಡ್ಡಿರಹಿತ ಕಿರುಸಾಲವನ್ನು ಘೋಶಿಸಿದ್ದರು. ಬೆಳಕು ಚಾರಿಟಬಲ್ ಟ್ರಸ್ಟ್ನ ಜನಸೇವಾ ಕೇಂದ್ರ ದ ಕಛೇರಿಯಲ್ಲಿ ಸುಮಾರು 300ಕ್ಕೂ ಹೆಚ್ಚು ರಸ್ತೆ ಬದಿ ವ್ಯಾಪಾರಿಗಳಿಗೆ ಆನ್ ಲೈನ್ ಅರ್ಜಿ ಸಲ್ಲಿಸಲಾಗಿತ್ತು. ಅವರೆಲ್ಲರ ಖಾತೆಗೆ ಹಣ ತಲುಪಿರುವುದರಿಂದ ಸನ್ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿರವರಿಗೆ ಕೃತಜ್ಞತೆ ತಿಳಿಸಿ, ಸಿಹಿ ಹಂಚಿ ಸಂಭ್ರಮಾಚರಣೆಯನ್ನು ಮಾಡಲಾಯಿತು.
ಈ ಕಾರ್ಯಕ್ರಮವನ್ನು ಬಿ.ಜೆ.ಪಿ. ಮೈಸೂರು ನಗರ ಅಧ್ಯಕ್ಷರಾದ ಟಿ.ಎಸ್ ಶ್ರೀವತ್ಸರವರು ಮತ್ತು ಬೆಳಕು ಚಾರಿಟಬಲ್ ಟ್ರಸ್ಟ್ನ ಅಧ್ಯಕ್ಷರಾದ ಕೆ.ಎಂ ನಿಶಾಂತ್ರವರು ಫಲಾನುಭವಿಗಳಿಗೆ ಚೆಕ್ ನೀಡುವುದರ ಮುಖಾಂತರ ಚಾಲನೆ ನೀಡಿದರು.
ನಂತರ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಮೈಸೂರು ನಗರ ಬಿಜೆಪಿ ಅಧ್ಯಕ್ಷರಾದ ಟಿ.ಎಸ್ ಶ್ರೀವತ್ಸರವರು ಪ್ರತಿದಿನದ ತಮ್ಮ ವ್ಯಾಪಾರ ವ್ಯವಹಾರಕ್ಕೆ ಬಂಡವಾಳವನ್ನು ತೊಡಗಿಸಲು ಸಾಲದ ರೂಪದಲ್ಲಿ ಖಾಸಗಿ ವ್ಯಕ್ತಿಗಳಿಂದ ಹೆಚ್ಚಿನ ಬಡ್ಡಿದರಕ್ಕೆ ತೆಗೆದುಕೊಂಡು ವ್ಯಾಪಾರ ನಡೆಸಿ ಬರುವ ಅಲ್ಪ ಸ್ವಲ್ಪ ಲಾಭಾಂಶದಲ್ಲಿಯೇ ಬಡ್ಡಿಯನ್ನು ಕಟ್ಟಿಕೊಂಡು ಜೀವನವನ್ನೂ ನಡೆಸಬೇಕಾದ ಅನಿವಾರ್ಯತೆ ನಮ್ಮ ಬೀದಿ ವ್ಯಾಪಾರಿಗಳಿಗೆ ಇತ್ತು. ಕೋವಿಡ್ 19 ಸಂದರ್ಭದಲ್ಲಿ ಆ ಒಂದು ವ್ಯಾಪಾರಕ್ಕೂ ಹೊಡೆತ ಬಿದ್ದು, ತಮ್ಮ ಜೀವನೋಪಾಯಕ್ಕೂ ಹಣವಿಲ್ಲದೆ, ವ್ಯಾಪಾರ ವ್ಯವಹಾರವನ್ನು ನಡೆಸಲೂ ಬಂಡವಾಳವಿಲ್ಲದೆ ಪರಿತಪಿಸುತ್ತಿದ್ದ ನಮ್ಮ ಬೀದಿ ಬದಿ ವ್ಯಾಪಾರಿಗಳ ಕಷ್ಟವನ್ನು ಗಮನದಲ್ಲಿಟ್ಟುಕೊಂಡು ನಮ್ಮ ಪ್ರಧಾನಮಂತ್ರಿಗಳು ಆತ್ಮನಿರ್ಭರ ಭಾರತ ಯೋಜನೆಯಡಿಯಲ್ಲಿ ಪ್ರತಿಯೊಬ್ಬ ಬೀದಿಬದಿ ವ್ಯಾಪಾರಿಯೂ ಸಾಲದಿಂದ ಮುಕ್ತನಾಗಿ ಸ್ವಂತ ಬಂಡವಾಳದಿಂದ ವ್ಯಾಪಾರ ವ್ಯವಹಾರವನ್ನು ವೃದ್ಧಿಸಿಕೊಳ್ಳಬೇಕು ಎಂಬ ಉದ್ದೇಶದಿಂದ 10000ರೂಗಳ ಬಡ್ಡಿರಹಿತ ಬಂಡವಾಳ ರೂಪದ ಸಾಲ ಸೌಲಭ್ಯವನ್ನು ಕಲ್ಪಿಸಿಕೊಟ್ಟಿದ್ದಾರೆ. ಇಲ್ಲಿಯವರೆಗೆ ದೇಶಾದ್ಯಂತ ಸುಮಾರು 28ಲಕ್ಷ ರಸ್ತೆಬದಿ ವ್ಯಾಪಾರಿಗಳು ಈ ಕಿರು ಸಾಲಕ್ಕೆ ಅರ್ಜಿಸಲ್ಲಿಸಿದ್ದು, ಅದರಲ್ಲಿ 15ಲಕ್ಷ ಮಂದಿಯ ಬ್ಯಾಂಕ ಖಾತೆಗೆ ಈಗಾಗಲೇ ಹಣ ತಲುಪಿದೆ. ಅದರಂತೆ ಮೈಸೂರಿನ ರಸ್ತೆಬದಿ ವ್ಯಾಪಾರಿಗಳಿಗೆ ಅನುಕೂಲವಾಗಲೆಂದು ಬೆಳಕು ಚಾರಿಟಬಲ್ ಟ್ರಸ್ಟ್ ತಮ್ಮ ಜನಸೇವಾ ಕೇಂದ್ರದ ಮೂಲಕ ಹಮ್ಮಿಕೊಂಡಿದ್ದ ಅಭಿಯಾನದಲ್ಲಿ ಸುಮಾರು 300ಕ್ಕೂ ಹೆಚ್ಚು ಫಲಾನುಭವಿಗಳು ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಿದ್ದು, ಅವರಲ್ಲಿ ಬಹುತೇಕರಿಗೆ ಈಗಾಗಲೇ ಅವರ ಖಾತೆಗೆ ಹಣ ತಲುಪಿರುವುದು ಸಂತಸದ ವಿಷಯ ಎಂದು ತಿಳಿಸಿ ಬೆಳಕು ಚಾರಿಟಬಲ್ಟ್ರಸ್ಟ್ನ ಅಧ್ಯಕ್ಷರಾದ ಕೆ.ಎಂ ನಿಶಾಂತ್ರವರ ಈ ಕಾರ್ಯವನ್ನು ಮುಕ್ತ ಕಂಠದಿಂದ ಪ್ರಶಂಸಿದರು.
ನಂತರ ಮಾತನಾಡಿದ ಬೆಳಕು ಚಾರಿಟಬಲ್ ಟ್ರಸ್ಟ್ನ ಅಧ್ಯಕ್ಷರಾದ ಶ್ರೀ ಕೆ.ಎಂ ನಿಶಾಂತ್ರವರು ಪ್ರತಿದಿನ ನಮ್ಮ ಮನೆ ಮುಂದೆ ಬರುವ ಹಣ್ಣು ತರಕಾರಿ ವ್ಯಾಪಾರಿಗಳು, ಚಪ್ಪಲಿ ಹೊಲಿಯುವವರು, ನಮ್ಮ ವಾಹನ ಗಳಿಗೆ ಪಂಕ್ಚರ್ ಹಾಕುವವರಿರಬಹುದು, ಚಾಟ್ ಸೆಂಟರ್ಗಳನ್ನು ನಡೆಸುವವರು, ಮಕ್ಕಳ ಆಟಿಕೆಗಳ ವ್ಯಾಪಾರಸ್ತರು ಹೀಗೆ ಪ್ರತಿನಿತ್ಯ ಒಂದಲ್ಲಾ ಒಂದು ರೀತಿಯಲ್ಲಿ ನಮ್ಮ ದೈನಂದಿನ ಜೀವನದಲ್ಲಿ ಹಾಗೂ ದೇಶದ ಆರ್ಥಿಕತೆಯ ಭಾಗವಾಗಿರುವ ರಸ್ತೆಬದಿ ವ್ಯಾಪಾರಿಗಳು ಕೋವಿಡ್19 ಲಾಕ್ಡೌನ್ನ ಸಂದರ್ಭದಲ್ಲಿ ವ್ಯಾಪಾರ ವಹಿವಾಟು ನಡೆಸಲಾಗದೆ ಆರ್ಥಿಕಸಂಕಷ್ಟಕ್ಕೀಡಾಗಿದ್ದರು. ನಮ್ಮಂತಹ ಕೆಳ ಮತ್ತು ಮಧ್ಯಮ ವರ್ಗದವರಿಗೆ ಕಡಿಮೆ ದರದಲ್ಲಿ ಅವಶ್ಯಕತೆಗಳನ್ನು ಪೂರೈಸುವ ಇವರ ಜೀವನ ಸಂಕಷ್ಟಕ್ಕೀಡಾಯಿತು. ಅದನ್ನು ಅರಿತ ನಮ್ಮ ದೇಶದ ಪ್ರಧಾನ ಮಂತ್ರಿಗಳಾದ ಶ್ರೀನರೇಂದ್ರಮೋದಿಯವರು ಆತ್ಮನಿರ್ಭರ ಯೋಜನೆಯೊಂದನ್ನು ಪ್ರಕಟಿಸಿ ಅದರ ಮೂಲಕ ರಸ್ತೆಬದಿ ವ್ಯಾಪಾರಿಗಳಿಗೆ ಬಡ್ಡಿರಹಿತ ಸಲಾದ ಮೂಲಕ 10000ರೂಗಳ ಬಂಡವಾಳವನ್ನು ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸುವ ಯೋಜನೆಯನ್ನು ಘೋಷಿಸಿದರು. ಅದನ್ನು ಆನ್ ಲೈನ್ಮೂಲಕ ಅರ್ಜಿಸಲ್ಲಿಸಬೇಕಿದ್ದುದರಿಂದ ಆ ಸಂದರ್ಭದಲ್ಲಿ ಬೆಳಕು ಚಾರಿಟಬಲ್ ಟ್ರಸ್ಟ್ ನ ಜನಸೇವಾ ಕೇಂದ್ರದಿಂದ ಇವರೆಲ್ಲರಿಗೂ ಆನ್ಲೈನ್ಮುಖಾಂತರ ಅರ್ಜಿ ಸಲ್ಲಿಸಲಾಗಿತ್ತು. ಅದರಂತೆ ಅವರೆಲ್ಲರಿಗೂ 10000 ರೂ ಗಳು ತಲುಪಿದ್ದು, ಸರ್ಕಾರದ ಒಂದು ಯೋಜೆನಯನ್ನು ಫಲಾನುಭವಿಗಳಿಗೆ ತುಲುಪಿಸಿದ ಸಾರ್ಥಕತೆ ಮೂಡಿದೆ. ಈ ಹಿಂದೆಯೂ ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ, ಕ್ಷೌರಿಕರಿಗೆ, ಮಡಿವಾಳರಿಗೆ ಮತ್ತು ನೇಕಾರರಿಗೂ ಸರ್ಕಾರ 5ಸಾವಿರ ರೂ ಸಹಾಯಧನವನ್ನು ಘೋಷಿಸಿದಾಗಲೂ ಸಹ ನಮ್ಮ ಸಂಸ್ಥೆಯವತಿಯಿಂದ ಅರ್ಜಿಗಳನ್ನು ಆನ್ಲೈನ್ಮುಖಾಂತರ ಸಲ್ಲಿಸುವ ಸಹಾಯಕೇಂದ್ರವನ್ನು ತಾತ್ಕಾಲಿಕವಾಗಿ ತೆರೆಯಲಾಗಿತ್ತು. ಇದರಲ್ಲಿ ಅನೇಕರಿಗೆ ಹಣ ವಾವತಿಯಾಗಿದೆ. ಯಾರಿಗೆ ಅರ್ಜಿ ಸಲ್ಲಿಸಿದ್ದರೂ ಹಣ ತಲುಪಿಲ್ಲವೋ ಅವರು ಅರ್ಜಿಯ ಸ್ವೀಕೃತಿ ಪತ್ರವನ್ನು ನಮ್ಮ ಜನಸೇವಾ ಕೇಂದ್ರಕ್ಕೆ ತಂದು ತಲುಪಿಸಿದ್ದಲ್ಲಿ ಅದನ್ನು ಸರ್ಕಾರದೊಂದಿಗೆ ಚರ್ಚಿಸಿ ಹಣ ತಲುಪಂತೆ ಮಾಡಲು ಪ್ರಯತ್ನಿಸಲಾಗುವುದೆಂದು ತಿಳಿಸಿದರು.
ಈ ಸಂಧರ್ಬದಲ್ಲಿ ಸಂಸ್ಥೆಯ ಸಂಚಾಲಕ ಎಂ.ಎನ್ ಧನುಷ್, ಆದಿಕರ್ನಾಟಕ ರಸ್ತೆ ಬದಿ ವ್ಯಾಪಾರಿಗಳ ಸಂಘದ ರವಿಕುಮಾರ್, ಬಿ ಜೆ ಪಿ ಮುಖಂಡರಾದ ವಾಣೀಶ್, ಜಯರಾಮ್,ಸುದರ್ಶನ್, ರಂಗನಾತಥ್, ಪ್ರಸಾದ್, ಮಧು, ಹೇಮಂತ್, ಪ್ರಜ್ವಲ್, ಸಂತೋಷ್, ನಿಕಿಲ್, ಆಟೋಚಾಲಕರ ಸಂಘದ ನಂಜುಂಡಸ್ವಾಮಿ, ನಂಜಪ್ಪ, ಸತೀಶ್, ದೇವರಾಜ್ ಹಾಗು ಹತ್ತಾರು ಜನ ರಸ್ತೆ ಬದಿ ವ್ಯಾಪಾರಿಗಳು ಉಪಸ್ಥಿತರಿದ್ದರು.