ಚಾಮರಾಜನಗರ: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹರ್ ಘರ್ ತಿರಂಗಾ ಅಭಿಯಾನಕ್ಕೆ ಕರೆ ನೀಡಿದ್ದು, ಈ ಹಿನ್ನೆಲೆಯಲ್ಲಿ ಹರ್ ಘರ್ ಮೇ ತಿರಂಗಾ ಮೈಸೂರು ನಗರ ಎಸ್‌ಟಿ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾದ ಕೃಷ್ಣಕುಮಾರ್ ಅವರು ವಾರ್ಡ್ ನಂಬರ್ ೫೦ರ ನಿವಾಸಿಗಳಿಗೆ ಭಾರತದ ತ್ರಿವಣ ಧ್ವಜವನ್ನು ವಿತರಿಸಲಾಯಿತು. ತಮ್ಮ ಮನೆಗಳಲ್ಲಿ ತಿರಂಗಾ ಹಾರಿಸುವ ಮೂಲಕ ಗೌರವ ಸಲ್ಲಿಸಿದರು. ಶನಿವಾರ ತಮ್ಮ ತಮ್ಮ ಮನೆಯ ಮೇಲೆ ತ್ರಿವರ್ಣ ಧ್ವಜ ಹಾರಿಸುವ ಮೂಲಕ ಸ್ವಾತಂತ್ರ್ಯೋತ್ಸವದ ೭೫ನೇ ವರ್ಷದ ಅಮೃತ, ಮಹೋತ್ಸವವನ್ನು ಸಂಭ್ರಮದಿಂದ ಆಚರಿಸಿದರು.
ಈ ಸಂದರ್ಭದಲ್ಲಿ ನಗರ ಕಾರ್ಯದರ್ಶಿಯಾದ ನಂದಕುಮಾರ್ ಅವರು, ನಗರದ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾದ ಭರತ್.ಎಸ್ ರವರು, ಯುವ ಮುಖಂಡರಾದ ಜಗದೀಶ್ ರವರು, ಸುಪ್ರೀತ್ ಅವರು, ಸತೀಶ್ ರವರು ಉಪಸ್ಥಿತರಿದ್ದರು.