ಚಾಮರಾಜನಗರ: ಗಿರಿಜನರ ಆರೋಗ್ಯ ಸಮಸ್ಯೆಗಳು ಹಾಗೂ ಸುಧಾರಣೋಪಾಯಗಳ ಕುರಿತ ಹೆಚ್ಚಿನ ಅಧ್ಯಯನ ಹಾಗೂ ಕೈಗೊಳ್ಳಬೇಕಾಗ ಅಗತ್ಯ ಕ್ರಮಗಳ ಕುರಿತ ಎರಡು ದಿನಗಳ ವೈದ್ಯಕೀಯ ಕಾರ್ಯಾಗಾರಕ್ಕೆ ಇಂದು ಚಾಲನೆ ದೊರೆಯಿತು.
ನಗರದ ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿಂದು ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಸಮುದಾಯ ವೈದ್ಯಕೀಯ ವಿಭಾಗ, ಬೆಂಗಳೂರಿನ ಇನ್ಟಿಟ್ಯೂಟ್ ಆಫ್ ಪಬ್ಲಿಕ್ ಹೆಲ್ತ್ ಹಾಗೂ ಪರಿಶಿ? ವರ್ಗಗಳ ಕಲ್ಯಾಣ ಇಲಾಖೆಯ ಸಹಯೊಗದೊಂದಿಗೆ ಆಯೋಜಿಸಲಾಗಿರುವ ಕಾರ್ಯಗಾರಕ್ಕೆ ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಡೀನ್ ಹಾಗೂ ನಿರ್ದೇಶಕರಾದ ಡಾ. ಜಿ.ಎಂ. ಸಂಜೀವ್ ಚಾಲನೆ ನೀಡಿದರು.
ಇದೇ ವೇಳೆ ಮಾತನಾಡಿದ ಡಾ. ಜಿ.ಎಂ. ಸಂಜೀವ್ ರವರು ನಮ್ಮ ಜಿಲ್ಲೆಯಲ್ಲಿರುವ ಅತ್ಯಧಿಕ ಅರಣ್ಯ ಹಾಗೂ ಗಿರಿಜನರು ನಮ್ಮ ಜಿಲ್ಲೆಯ ನಿಜವಾದ ಹೆಮ್ಮೆ. ನಮ್ಮ ದೇಶದ ಪ್ರಥಮ ಪ್ರಜೆಯೇ ಆದಿವಾಸಿ ಮಹಿಳೆ ಎಂಬುದು ನಾವೆಲ್ಲರೂ ಹೆಮ್ಮೆ ಪಡಬೇಕಾದ ಸಂಗತಿ. ಇತ್ತೀಚಿನ ದಿನಗಳಲ್ಲಿ, ಆದಿವಾಸಿ ಸಮುದಾಯದಲ್ಲಿ ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿರುವುದು ಅತ್ಯಂತ ನೋವಿನ ಸಂಗತಿ, ಕೇಂದ್ರ ಹಾಗು ರಾಜ್ಯ ಸರ್ಕಾರಗಳು ಈ ಸಮಸ್ಯೆಗಳನ್ನು ಗಂಭಿರವಾಗಿ ಪರಿಗಣಿಸಿದ್ದು ಅನೇಕ ಸುಧಾರಣೋಪಾಯಗಳನ್ನು ರೂಪಿಸುತ್ತಿವೆ ಎಂದರು.
ಆದಿವಾಸಿ ಆರೋಗ್ಯ ಸುಧಾರಣೆಯಾಗಬೇಕಿದ್ದಲ್ಲಿ ಆ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಅಧ್ಯಯನ ಹಾಗೂ ಸಂಶೋಧನೆಗಳಾಗಬೇಕು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ವಿಶೇ? ಅನುದಾನದಡಿಯಲ್ಲಿ ಆದಿವಾಸಿಗಳು ನೆಲೆಸಿರುವ ಚಾಮರಾಜನಗರ ಜಿಲ್ಲೆಯೂ ಸೇರಿದಂತೆ ರಾಜ್ಯದ ೮ ಜಿಲ್ಲೆಗಳ ವೈದ್ಯಕೀಯ ಕಾಲೇಜುಗಳಲ್ಲಿ ಆದಿವಾಸಿ ಆರೋಗ್ಯ ಕೋಶ ಸ್ಥಾಪನೆ ಮಾಡಲು ಅನುಮತಿ ದೊರಕಿರುವುದು ಅದರಲ್ಲೂ ಬುಡಕಟ್ಟು ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿರುವ ನಮ್ಮ ಜಿಲ್ಲೆಗೆ ನಿಜಕ್ಕೂ ಸಂತಸದ ವಿ?ಯ. ಇದನ್ನು ಸಂಶೋಧನಾ ವಿದ್ಯಾರ್ಥಿಗಳು ಸದುಪಯೊಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಚಾಮರಾಜನಗರ ಜಿಲ್ಲೆಯು ಸದ್ಯದಲ್ಲೇ ಈ ಯೋಜನೆಯನ್ನು ಅನು?ನಗೊಳಿಸಿದ ಪ್ರಥಮ ಜಿಲ್ಲೆಯಾಗಲಿದೆ. ಅಲ್ಲದೇ ಆದಿವಾಸಿ ಆರೋಗ್ಯ ವಿ?ಯದ ಹೆಚ್ಚಿನ ಸಂಶೋಧನೆಗೆ ಸಂಬಂಧಪಟ್ಟಂತೆ, ಸದ್ಯದಲ್ಲೇ ಜೆ.ಎಸ್.ಎಸ್ ಸಂಸ್ಥೆ, ಇನ್ಟಿಟ್ಯೂಟ್ ಆಫ್ ಪಬ್ಲಿಕ್ ಹೆಲ್ತ್ ಸೇರಿದಂತೆ ಇತರೆ ಸಂಘ ಸಂಸ್ಥೆಗಳೊಡನೆ ಒಪ್ಪಂದ ಮಾಡಿಕೊಳ್ಳಲಾಗುತ್ತಿದೆ. ಸದ್ಯದಲ್ಲೇ ಸರ್ಕಾರ ಅನುಮೋದನೆ ನೀಡಿರುವಂತೆ, ಜಿಲ್ಲಾ ಮಟ್ಟದಲ್ಲಿ ವಿವಿದೆಡೆಯಿಂದ ಬರುವ ಆದಿವಾಸಿ ರೋಗಿಗಳ ಸಂಬಂಧಿಕರಿಗೆ ಆಸ್ಪತ್ರೆಯ ಸಮೀಪದಲ್ಲೆ ಉಳಿಯಲು ಸುಸಜ್ಜಿತ ಧರ್ಮಶಾಲಾ ವ್ಯವಸ್ಥೆಗೆ ಚಾಲನೆ ನೀಡಲಾಗುವುದು ಎಂದರು.
ಕಾರ್ಯಕ್ರಮದ ಅತಿಥಿಗಳಾಗಿ ಭಾಗವಹಿಸಿದ್ದ ರಾಜ್ಯ ಮೂಲ ಆದಿವಾಸಿಗಳ ವೇದಿಕೆಯ ಕಾರ್ಯದರ್ಶಿಗಳಾದ ಮುತ್ತಯ್ಯ ಮಾತನಾಡಿ, ಆದಿವಾಸಿಗಳೆಂದರೆ ಜಾತಿಯಲ್ಲ. ಅದು ಒಂದು ಸಮುದಾಯ ಜೀವನ. ಸರ್ಕಾರ ನಮ್ಮ ಆರೋಗ್ಯ ಸಂಬಂಧಿತ ಸಮಸ್ಯೆಗಳ ಸುಧಾರಣೆಯ ನಿಟ್ಟಿನಲ್ಲಿ ಅನೇಕ ಯೋಜನೆಗಳನ್ನು ನೀಡುತ್ತಾ ಬಂದಿದೆ. ಆದರೆ ತಳಮಟ್ಟದಲ್ಲಿ ಇದರ ಅನು?ನ ಸರಿಯಾಗಿ ಆಗಬೇಕು. ನಮ್ಮ ಸಮುದಾಯದಲ್ಲಿ ಆರೋಗ್ಯ ಸಂಬಂಧಿತ ವಿ?ಯಗಳ ಜಾಗೃತಿಯ ಕೊರತೆ ಇದೆ, ನಾವು ಆರೋಗ್ಯ ವಿ?ಯದಲ್ಲಿ ಹೆಚ್ಚಿನ ಜಾಗೃತರಾಗಬೇಕು, ಜಿಲ್ಲಾ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಉದ್ಘಾಟನೆಗೊಳ್ಳಲಿರುವ ಆದಿವಾಸಿ ಆರೋಗ್ಯ ಕೋಶ ನಮ್ಮ ಜನರ ಆರೋಗ್ಯ ಸುಧಾರಣೆಗೆ ಹೆಚ್ಚಿನ ಕೊಡುಗೆ ನೀಡಲಿದೆ ಎಂಬ ಆಶಯವಿದೆ ಎಂದರು.
ಸಮುದಾಯ ವೈದ್ಯಕೀಯ ವಿಭಾಗದ ಮುಖ್ಯಸ್ಥರಾದ ಡಾ. ದಮಯಂತಿ ಅವರು ಮಾತನಾಡಿ ಕಾರ್ಯಾಗಾರದಲ್ಲಿ ಭಾಗವಹಿಸಿರುವ ೧೫೦ಕ್ಕೂ ಹೆಚ್ಚು ವೈದ್ಯರು, ಸಂಶೋಧನಾ ವಿದ್ಯಾರ್ಥಿಗಳು, ವಿವಿಧ ಸಂಘಸಂಸ್ಥೆಗಳ ಪ್ರತಿನಿಧಿಗಳಿಗೆ ನಾಳೆ ಇನ್ಟಿಟ್ಯೂಟ್ ಆಫ್ ಪಬ್ಲಿಕ್ ಹೆಲ್ತ್ ನ ವತಿಯಿಂದ ಹೆಚ್ಚಿನ ಅಧ್ಯಯನಕ್ಕಾಗಿ ಬುಡಕಟ್ಟು ಜೀವನವನ್ನು ಪರಿಚಯಿಸುವ ನಿಟ್ಟಿನಲ್ಲಿ ಬಿಳಿಗಿರಿರಂಗನ ಬೆಟ್ಟದ ವಿವಿಧ ಆದಿವಾಸಿ ಪೋಡುಗಳಿಗೆ ಕ್ಷೇತ್ರ ಬೇಟಿಗೆ ಕರೆದೊಯ್ಯಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಿಮ್ಸ್ ನ ಪ್ರಾಂಶುಪಾಲರಾದ ಡಾ. ವಿ. ಗಿರೀಶ್, ಆರ್.ಎಂ.ಒ. ಡಾ. ಮಹೇಶ್, ಸಮುದಾಯ ಆರೋಗ್ಯ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ. ಗಿರೀಶ್, ಇನ್ಟಿಟ್ಯೂಟ್ ಆಫ್ ಪಬ್ಲಿಕ್ ಹೆಲ್ತ್ ಬೆಂಗಳೂರಿನ ಉಪನಿರ್ದೇಶಕರಾದ ಡಾ. ಎನ್.ಎಸ್. ಪ್ರಶಾಂತ್, ಡಾ. ತಾನ್ಯ ಶೇಷಾದ್ರಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಡಾ. ರವಿಕುಮಾರ್, ಜಿಲ್ಲಾ ಪರಿಶಿ? ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಮಂಜುಳಾ, ಜಿಲ್ಲಾ ಬುಡಕಟ್ಟು ಗಿರಿಜನ ಅಭಿವೃದ್ಧಿ ಸಂಘದ ಅಧ್ಯಕ್ಷರಾದ ಸಿ. ಮಹದೇವ, ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್ ನ ಡಾ. ಡೆನ್ನಿಸ್ ಚೌಹಾಣ್, ವಿಜಿಕೆಕೆಯ ಸಂಯೋಜಕರಾದ ಡಾ. ಅರುಣ್ ಕುಮಾರ್ ಇತರರು ಉಪಸ್ಥಿತರಿದ್ದರು.
