ಮೈಸೂರು: ನಗರದ ಶ್ರೀ ವಾಗ್ದೇವಿ ಸೌಹಾರ್ದ ಪತ್ತಿನ ಸಹಕಾರಿ ಸಂಘ (ನಿ)ದ ಆಡಳಿತ ಮಂಡಳಿಗೆ ಇತ್ತೀಚಿಗೆ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ನಿರ್ದೇಶಕರುಗಳು ಮುಂದಿನ ಐದು ವರ್ಷಗಳಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಅಧ್ಯಕ್ಷರಾಗಿ ಈ ಬಾರಿಯೂ ಹೆಚ್.ಎನ್.ನವೀನ್, ನೂತನವಾಗಿ ಉಪಾಧ್ಯಕ್ಷರಾಗಿ ಜೆ.ಎಸ್.ಸುನೀಲ್, ನಿರ್ದೇಶಕರಾಗಿ ಆರ್.ಸಿ.ದಿಲೀಪ್, ಚಿಕ್ಕಮ್ಮ ಬಸವರಾಜ್, ಸುದರ್ಶನ್, ಸರೋಜ ಚಂದ್ರಶೇಖರ್, ಸುಜಾತ ಎನ್.ಪ್ರದೀಪ್, ಎಂ.ಬಸವರಾಜು, ಎಸ್.ಸೋಮಶೇಖರ, ಎಂ.ಭಾಗ್ಯ, ಜೆ.ಕೃಷ್ಣ, ಆರ್. ಸುರೇಂದ್ರ ಮತ್ತು ಕೆ.ಎನ್. ನಾಗರಾಜು ರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.