ಅಚ್ಚ ಕನ್ನಡಿಗ ಕೃಷ್ಣ ವರ್ಣದ ಮುದ್ದು ನಟ ಮುರಳಿ ಕನ್ನಡಮ್ಮನ ಕಂದ! ಬಂಗಾರದಮನುಷ್ಯ, ಭೂತಯ್ಯನಮಗಅಯ್ಯು, ನಮ್ಮಸಂಸಾರ, ತಾಯಿದೇವರು, ನ್ಯಾಯವೇದೇವರು, ದೂರದಬೆಟ್ಟ ಮುಂತಾದ ಡeನ್ ಗಟ್ಟಲೆ ಬ್ಲಾಕ್ ಬಸ್ಟರ್ ಚಲನಚಿತ್ರಗಳನ್ನು ನೀಡಿದ ದಕ್ಷಿಣ ಭಾರತದ ಖ್ಯಾತ ನಿರ್ದೇಶಕ ಸಿದ್ಧಲಿಂಗಯ್ಯನವರ ಪುತ್ರರತ್ನ. ಮುರಳಿಯವರ ಚೊಚ್ಚಲ ಕನ್ನಡ ಚಿತ್ರ ’ಪ್ರೇಮಪರ್ವ’ ಶತದಿನೋತ್ಸವ ಆಚರಿಸಿದ್ದಲ್ಲದೆ ತಮಿಳು ಮತ್ತು ತೆಲುಗು ಭಾಷೆಗೂ ಡಬ್ಬಿಂಗ್ ಆಯ್ತು. ಇದರಲ್ಲಿನ ಅತಿಉತ್ತಮ ಅಭಿನಯಕ್ಕೆ ರಾಜ್ಯ ಪ್ರಶಸ್ತಿಯನ್ನೂ ಪಡೆದರು. ಮುರಳಿಯವರ ಅಭಿನಯ ಕೌಶಲಕ್ಕೆ ಶರಣಾದ ಕಾಲಿವುಡ್ ಕೈ ಬೀಸಿ ಕರೆದು ಮನ್ನಣೆ ಗೌರವದ ಮಣೆ ಹಾಕಿತು. ಕನ್ನಡಕ್ಕಿಂತ ತಮಿಳು ಚಿತ್ರರಂಗದಲ್ಲೆ ಹೆಚ್ಚು ಛಾಪು ಮೂಡಿಸಿದ ಮುರಳಿಯು ೪೫ಕ್ಕೂ ಹೆಚ್ಚು ತಮಿಳ್ ಫಿಲಂಸ್‌ಗಳಲ್ಲಿ ಅಭಿನಯಿಸಿ ಧೂಳೆಬ್ಬಿಸಿದರು. ತಮಿಳುನಾಡಿನಾದ್ಯಂತ ಇವರ ಅತಿದೊಡ್ಡ ಕಟೌಟ್ ಮತ್ತು ಬೃಹತ್ ಫ್ಲೆಕ್ಸ್‌ಬೋರ್ಡ್ ರಾರಾಜಿಸಿತು.


ಕರ್ನಾಟಕ ಮತ್ತು ತಮಿಳುನಾಡು ಎರಡೂ ರಾಜ್ಯಗಳ ರಾಜ್ಯ ಪ್ರಶಸ್ತಿ, ಫಿಲಂಫೇರ್ ಪ್ರಶಸ್ತಿ, ರಾಷ್ಟ್ರ ಪ್ರಶಸ್ತಿ ಸೇರಿದಂತೆ ಅನೇಕ ಉನ್ನತ ಮಟ್ಟದ ಪ್ರಶಸ್ತಿ ಬಿರುದು ಬಹುಮಾನ ಪಡೆದಿದ್ದಾರೆ. ಮುರಳಿಯ ತವರುಮನೆ ಕನ್ನಡ ನಾಡು, ಮಾತೃ ಭಾಷೆ ಕನ್ನಡ, ಹಾಗಾಗಿ ಅವರು ಇಹಲೋಕ ತ್ಯಜಿಸುವ ಮುನ್ನ ಚಂದನವನಕ್ಕೆ ಪುನರ್ ಆಗಮನದ ನಿರೀಕ್ಷೆಯಲ್ಲಿ ಇದ್ದಾಗಲೆ ವಿಧಿಯು ಕೈಬೀಸಿ ಕರೆಯಿತು. ತತ್ಪರಿಣಾಮವೇ ಅಕಾಲದ ಮತ್ತು ಅನ್ಯಾಯದ ಮೃತ್ಯುವಿಗೆ ಬಲಿಯಾದರು ನತದೃಷ್ಟ ಯುವ ನಟ. ಸಾಯುವ ವಂiiಸ್ಸಾಗಿರದ ಮುರಳಿಯವರು ದಿನಾಂಕ ೮.೯.೨೦೧೦ರಂದು ಕೇವಲ ತಮ್ಮ ೪೫ನೆ ವಯಸ್ಸಿನಲ್ಲಿ ಅಕಾಲ ಮರಣಕ್ಕೆ ತುತ್ತಾಗಲಾಗಿ ಕನ್ನಡ ಮತ್ತು ತಮಿಳು ಚಿತ್ರರಂಗಕ್ಕೆ ಅಪಾರವಾದ ನಷ್ಟ ಉಂಟಾಯ್ತು. ದಿವಂಗತರ ಪತ್ನಿಯಾದ ಶ್ರೀಮತಿ ಶೋಭಾ ರವರು ತಮ್ಮ ಮೂವರು ಮಕ್ಕಳಾದ ಅಥರ್ವ, ಕಾವ್ಯ, ಆಕಾಶ್ ಅವರುಗಳೊಡನೆ ಸರಳವಾದ ಬದುಕು ಸಾಗಿಸುತ್ತಿದ್ದಾರೆ.
ಮುರಳಿ ನಟಿಸಿದ ಕನ್ನಡ ಚಲನಚಿತ್ರಗಳು
ಕ್ರ.ಸಂ. ಸಿನಿಮ ಕ್ರ.ಸಂ. ಸಿನಿಮ
೧ ಗೆಲುವಿನ ಹೆಜ್ಜೆ/೧೯೮೨ ೬ ತಾಯಿ ಕೊಟ್ಟ ತಾಳಿ
೨ ಪ್ರೇಮಪರ್ವ ೭ ಸಂಭವಾಮಿ ಯುಗೇ ಯುಗೇ
೩ ಬಿಳೀ ಗುಲಾಬಿ ೮ ಪದ್ಮವ್ಯೂಹ
೪ ಅಜೇಯ ೯ ಅಜಯ್ ವಿಜಯ್
೫ ಪ್ರೇಮಗಂಗೆ ೧೦ ಬಾಳೊಂದು ಚದುರಂಗ

ಕುಮಾರಕವಿ ಬಿ.ಎನ್.ನಟರಾಜ್
೯೦೩೬೯೭೬೪೭೧
ಬೆಂಗಳೂರು