ಐತಿಹಾಸಿಕ ಕೋಟೆನಾಡು ಚಿತ್ರದುರ್ಗದಲ್ಲಿ ೩೦.೭.೧೯೬೩ರಂದು ಮಧ್ಯಮವರ್ಗದ ದಂಪತಿಗಳ ಪುತ್ರರಾಗಿ ಜನಿಸಿದ ರಾಮಸ್ವಾಮಿ ತದನಂತರ ಚಿತ್ರರಂಗಕ್ಕೆ ಬಂದು ಅಭಿಜಿತ್ ಎಂದು ಮರುನಾಮಕರಣ ಪಡೆದರು. ಬಾಲ್ಯದಿಂದಲೂ ಗಾಯನ, ಚಿತ್ರಕಲೆ ಹಾಗೂ ಅಭಿನಯ ಕಲೆಯಲ್ಲಿ ಬಹಳ ಆಸಕ್ತಿ. ಇವರ ಉತ್ಸಾಹಕ್ಕೆ ಪೋಷಕರ, ಬಂಧು-ಬಳಗದವರ ಪ್ರೋತ್ಸಾಹವೂ ದೊರಕಿತು. ವಿದ್ಯಾಭ್ಯಾಸದಲ್ಲೂ ಮುಂದಿದ್ದ ಚುರುಕು ಮತ್ತು ಬುದ್ಧಿವಂತ ಹುಡುಗ ಡಬ್ಬಲ್ ಗ್ರ್ಯಾಜುಏಟ್ ಆಗಬಹುದಾಗಿತ್ತೇನೋ? ಈತ ಇಷ್ಟಪಟ್ಟು ಕೈಗೊಳ್ಳುವ ಯಾವುದೆ ಕೆಲ್ಸ-ಕಾರ್ಯವು ಎಷ್ಟೇ ಕಷ್ಟವಾದರೂ ಗುರಿಮುಟ್ಟುವ ತನಕ ಸತತ ಪ್ರಯತ್ನ ಮಾಡುವುದರ ಜತೆಗೆ ಶ್ರದ್ಧೆಯಿಂದ ಮುನ್ನುಗ್ಗುತ್ತಾರೆ. ಛಲಬಿಡದ ತ್ರಿವಿಕ್ರಮನಂತೆ ಪರಿಪೂರ್ಣವಾಗಿ ಮತ್ತು ಯಶಸ್ವಿಯಾಗಿ ಮುಗಿಸುವ ಛಲದಂಕಮಲ್ಲ ಆಗುತ್ತಾರೆ. ಕಳೆದ ೪ದಶಕಗಳಿಂದ ಚಂದನವನದ ಎಲ್ಲಾ ಆಯಾಮಗಳಲ್ಲು ತಮ್ಮ ಕೌಶಲವನ್ನು ಪ್ರದರ್ಶಿಸಿ ತಮ್ಮದೆ ಆದ ವಿಶಿಷ್ಟ ಛಾಪು ಮೂಡಿಸಿರುವ ಬಹುಮುಖ ಪ್ರತಿಭೆಯ ಹುಟ್ಟು ಕಲಾವಿದ.
ಯಾರಬಳಿ ಯಾವಾಗ ಎಲ್ಲಿಯಾವರೀತಿ ಮಾತುಕತೆ ಆಡಬೇಕು, ಹೇಗೆ ನಡೆದುಕೊಳ್ಳಬೇಕು ಎಂಬುದರ ಬಗ್ಗೆ ಎಚ್ಚರಿಕೆ ಮತ್ತು ಪೂರ್ಣಪ್ರಜ್ಞೆ ಇರುವಂಥ ಡಿಪ್ಲೊಮಾಟಿಕ್ ಜೆಂಟಲ್ಮನ್. ಇಂಥ ಮಲ್ಟಿ ಟ್ಯಾಲೆಂಟೆಡ್ ಪರ್ಸನ್ ಸ್ಯಾಂಡಲ್ವುಡ್ನಲ್ಲಿ ಸಿಗುವುದು ಬಲು ಅಪರೂಪ?! ಓರ್ವ ಆಲ್-ಇನ್-ಒನ್ ವ್ಯಕ್ತಿಶಕ್ತಿ ಅಭಿಜಿತ್?! ಇವರೊಬ್ಬ ಆಕ್ಟರ್-ಪ್ರೊಡ್ಯುಸರ್-ಡೈರೆಕ್ಟರ್-ಆಥರ್-ಮ್ಯುಸಿಕ್ ಡೈರೆಕ್ಟರ್-ಪ್ಲೇಬ್ಯಾಕ್ಸಿಂಗರ್-ಕಂಠದಾನಕಲಾವಿದ. ಇವರಿಗಿರುವ ಬಿರುದುಗಳು:-ಸಮರಸಿಂಹ, ಡೇರ್ಕಿಂಗ್, ಫ್ಯಾಮಿಲಿಸ್ಟಾರ್, ಅಭಿನವಚತುರ, ಇತ್ಯಾದಿ. ಹಲವಾರು ಸಿನಿಮಾಗಳಲ್ಲಿ ನೀಡಿದ ಉತ್ತಮ ಅಭಿನಯಕ್ಕೆ ರಾಜ್ಯ ಪ್ರಶಸ್ತಿ, ಫಿಲಂಫೇರ್ ಪ್ರಶಸ್ತಿ ಹಾಗೂ ಸೈಮಾ ಪ್ರಶಸ್ತಿ ಲಭಿಸಿದೆ. ಕನ್ನಡ ತುಳು ಕೊಂಕಣಿ ಕೊಡವ ತೆಲುಗು ತಮಿಳು ಮರಾಠಿ ಹಿಂದಿ ಚಿತ್ರಗಳಲ್ಲಿ ಅಭಿನಯಿಸಿ ದೇಶಾದ್ಯಂತ ಜನಪ್ರಿಯತೆ ಗಳಿಸಿದ್ದರೂ ಇವತ್ತಿಗೂ ತಾವಾಯಿತು ತಮ್ಮ ಕಾಯಕವಾಯಿತು ಎಂಬಂತೆ ಬೆಳ್ಳಿತೆರೆ-ಕಿರುತೆರೆ ಎರಡೂ ಕ್ಷೇತ್ರಗಳಲ್ಲಿ ಪ್ರಾಮಾಣಿಕ ಸೇವೆ ಸಲ್ಲಿಸುತ್ತ ಎಲೆಮರೆಕಾಯಂತೆ ಸಾರ್ಥಕ ಜೀವನ ಸಾಗಿಸುತ್ತಿದ್ದಾರೆ. ಸುಮಾರು ೧೦೦ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಅಭಿಜಿತ್ ಇತ್ತೀಚೆಗೆ ಧಾರಾವಾಹಿಗಳಲ್ಲೂ ನಟಿಸುತ್ತಿದ್ದಾರೆ. ಇವರ ಮಡದಿ ರೋಹಿಣಿ ಸುಸಂಸ್ಕೃತಗೃಹಿಣಿ-ಕಲಾಭಿಮಾನಿ. ಇವರ ಮಕ್ಕಳು ಕಾರ್ತಿಕೇಯ, ಬಾಲಾಜಿ ಹಾಗೂ ಶಿಲ್ಪಶ್ರೀ. ಅಭಿಜಿತ್ ಅಭಿನಯದ ಪ್ರಮುಖ ಕನ್ನಡ ಫಿಲಮ್ಸ್ :-
೧ ಪ್ರಾಯ ಪ್ರಾಯ ಪ್ರಾಯ/೧೯೮೨ ೧೯ ಓಂ ನಮಃಶಿವಾಯ
೨ ಮಾರ್ಜಾಲ ೨೦ ಅಪರೂಪದ ಅತಿಥಿಗಳು
೩ ಭಯಂಕರ ಭಸ್ಮಾಸುರ ೨೧ ಭೈರವಿ
೪ ಬ್ರಹ್ಮಗಂಟು ೨೨ ಆಂತರ್ಯ
೫ ಕಾಲೇಜ್ ಹೀರೋ ೨೩ ಯಜಮಾನ
೬ ಮಾಂಗಲ್ಯ ೨೪ ಕೋಟಿಗೊಬ್ಬ
೭ ಚೈತ್ರದ ಪ್ರೇಮಾಂಜಲಿ ೨೫ ಮಹಾಶಕ್ತಿ ಮಾತೆಯರು
೮ ಸಿಂಧೂರ ತಿಲಕ ೨೬ ವೈರಿ
೯ ಮನ ಮೆಚ್ಚಿದ ಸೊಸೆ ೨೭ ಸಮರಸಿಂಹ ನಾಯಕ
೧೦ ಸಪ್ತಪದಿ ೨೮ ಶತ್ರು
೧೧ ನಗರದಲ್ಲಿ ನಾಯಕರು ೨೯ ಭಕ್ತಶಂಕರ
೧೨ ಜೀವನಚೈತ್ರ ೩೦ ಸಂತ ಶಿಶುನಾಳಷರೀಫ಼
೧೩ ಸರ್ವರ್ ಸೋಮಣ್ಣ ೩೧ ಭಕ್ತ ಸಿರಿಯಾಳ
೧೪ ಭೂತಾಯಿಯ ಮಕ್ಕಳು ೩೨ ವಿಷ್ಣು
೧೫ ರಂಜೀತಾ ೩೩ ಅಮರೇಶ್ವರ ಮಹಾತ್ಮೆ
೧೬ ರಶ್ಮಿ ೩೪ ಅಭಿಮನ್ಯು
೧೭ ಮುದ್ದಿನಮಾವ ೩೫ ಸಿ.ಬಿ.ಐ.ಸತ್ಯ
೧೮ ತುಂಬಿದಮನೆ ೩೬ ಶಿವಯೋಗಿ ಶ್ರೀಪುಟ್ಟಯ್ಯಜ್ಜ

ಕುಮಾರಕವಿ ಎನ್.ನಟರಾಜ್
(೯೦೩೬೯೭೬೪೭೧)
ಬೆಂಗಳೂರು-೫೬೦೦೭೨