ಕೆ ಎಂಪಿಕೆ ಚಾರಿಟಬಲ್ ಟ್ರಸ್ಟ್ ವತಿಯಿಂದ ಬೀದಿಬದಿಯಲ್ಲಿ ಜೀವನಸಾಗಿಸಿ ರಾತ್ರಿಹೊತ್ತು ರಸ್ತೆಯಲ್ಲಿ ಮಲಗುವ ನಿರ್ಗತಿಕರು, ಬೀದಿಬದಿವ್ಯಾಪಾರಸ್ಥರು ಮುಂಜಾನೆಯೇ ಸ್ವಚ್ಛತೆ ಮಾಡುವ ಪೌರಕಾರ್ಮಿಕರು ಹಾಗೂ ಬಡವರ್ಗದವರಿಗೆ ಚಳಿಗಾಲ ಹಾಗೂ ವಿಪರೀತ ತಂಡೀಗಾಳಿ ವಾತಾವರಣದ ಪರಿಣಾಮ ಆರೋಗ್ಯ ಸಮಸ್ಯೆ ಬರದಂತೆ “ಹೊದಿಕೆ ವಿತರಣಾ ಅಭಿಯಾನ’ಕ್ಕೆ ಚಾಮುಂಡಿ ಬೆಟ್ಟದ ಮುಂಭಾಗ ಕರ್ನಾಟಕ ರಾಜ್ಯ ಮಹಿಳಾ ಅಯೋಗದ ಅಧ್ಯಕ್ಷೆ ಪ್ರಮೀಳಾ ನಾಯ್ಡು ರವರು ಪೌರಕಾರ್ಮಿಕರಿಗೆ ಹೊದಿಕೆ ನೀಡುವ ಮೂಲಕ ಚಾಲನೆ ನೀಡಿದರು,

ಇದೇ ಸಂಧರ್ಭದಲ್ಲಿ ಹೊದಿಕೆ ವಿತರಣಾ ಅಭಿಯಾನಕ್ಕೆ ಚಾಲನೆ ನೀಡಿದ ಕರ್ನಾಟಕ ರಾಜ್ಯ ಮಹಿಳಾ ಅಯೋಗದ ಅಧ್ಯಕ್ಷೆ ಪ್ರಮೀಳಾ ನಾಯ್ಡು ರವರು ಮಾತನಾಡಿ ಕೊರೊನಾ ತಡೆಯಲು ಇಡೀ ದೇಶವೇ ಕರ್ಫ್ಯೂ ಇದ್ದಾಗ ನಾವೆಲ್ಲರೂ ಮನೆಯೊಳಗೆ ಬಂದಿಯಾಗಿದ್ದೆವು ಆದರೆ ಜೀವದಭಯ ಬಿಟ್ಟು ನಮ್ಮೆಲ್ಲರ ರಕ್ಷಣೆಗಾಗಿ ಪಣತೊಟ್ಟು ನಿಂತವರು ಸ್ವಚ್ಛತಾಸೇನಾನಿ ಪೌರಕಾರ್ಮಿಕರು ಅವರ ಯೋಗಕ್ಷೇಮವು ಸಹ ಪ್ರತಿಯೊಬ್ಬ ನಾಗರೀಕರ ಕರ್ತವ್ಯ, ರಾಜ್ಯ ಸರ್ಕಾರ ಬೀದಿಬದಿವ್ಯಾಪರಸ್ಥರು ನಿರಾಶ್ರಿತರಿಗೆ ಹಲವಾರು ಯೋಜನೆಗಳನ್ನು ನೀಡಿದೆ ಅದನ್ನು ಉಪಯೋಗ ಮಾಡಿಕೊಳ್ಳಲು ಮುಂದಾಗಬೇಕು ಎಂದರು,

ನಂತರ ಸಮಾಜಸೇವಕ ಡಿಟಿ. ಪ್ರಕಾಶ್ ರವರು ಮಾತನಾಡಿ ಸಾಂಸ್ಕೃತಿಕ ನಗರಿ ಎಲ್ಲರಿಗೂ ಆಶ್ರಯ ನೀಡಿದೆ, ಕೆಲವರ ಜೀವನದಲ್ಲಿ ವಿಧಿಯಾಟ ಕೆಲವು ಸನ್ನಿವೇಶಗಳು ನೆಮದಿಯಿಲ್ಲದಿದ್ದಾಗ ಕೆಲವರು ತೊಂದೆರೆಯಲ್ಲಿರುತ್ತಾರೆ, ಮಳೆ ಚಳಿ ಎನ್ನದೇ ಬಸ್ ನಿಲ್ದಾಣ, ರೈಲ್ವೇನಿಲ್ದಾಣ ದೇವಸ್ಥಾನ, ಚಿತ್ರಮಂದಿರ ಸರ್ಕಾರಿ ಕಟ್ಟಡಗಳ ಮುಂಭಾಗ ರಾತ್ರಿಹೊತ್ತು ಆಶ್ರಯಕ್ಕಾಗಿ ರಾತ್ರಿ ಕಳೆಯಲು ಮಲಗಿರುತ್ತಾರೆ ಮೈಸೂರಿನಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ನಿರಾಶ್ರಿತರಿದ್ದು, ಮಾನವೀಯತೆ ದೃಷ್ಟಿಯಿಂದ ಚಳಿ ಮಳೆಯಿಂದ ನಿರಾಶ್ರಿತರ ರಕ್ಷಣೆ ಸಾರ್ವಜನಿಕರ ಹೊಣೆ ಎನ್ನುವ ಸಂಕಲ್ಪದೊಂದಿಗೆ ಅವರಿರುವ ಜಾಗಕ್ಕೆ ಹೋಗಿ ಇಂದು ಹೊದಿಕೆ ನೀಡುವ ಕೆ.ಎಂಪಿಕೆ ಟ್ರಸ್ಟ್ ಆಯೋಜಿಸಿರುವ ಅಭಿಯಾನಕ್ಕೆ ಸಾರ್ವಜನಿಕರು ಕೈಜೋಡಿಸಿ ನೆರವು ನೀಡಲು 9880752727 ಸಂಪರ್ಕಿಸಬಹುದು ಎಂದರು

ನಂತರ ಯುವಮುಖಂಡ ಎನ್. ಎಮ್ ನವೀನ್ ಕುಮಾರ್ ರವರು ಮಾತನಾಡಿ ಸರ್ಕಾರಗಳು ಹಲವಾರು ಯೋಜನೆಗಳನ್ನು ಬೀದಿಬದಿ ವ್ಯಾಪರಸ್ಥರಿಗೆ ಅಶಕ್ತರಿಗೆ ನಿರಾಶ್ರಿತರ ನೆರವಿಗೆ ತಂದರು ಸಹ ಸಮರ್ಪಕವಾಗಿ ತಲಪುತ್ತಿಲ್ಲ ಇತ್ತ ಸಂಬಂಧಪಟ್ಟ ಅಧಿಕಾರಿಗಳು ಪಲನಾಭಾವಿಗಳಿಗೆ ತಲುಪುವವರೆಗೂ ಶ್ರಮಿಸಬೇಕು, ನಗರಮಟ್ಟದಲ್ಲಿ ನಿರ್ಮಿತಿ ಕೇಂದ್ರಗಳು ಕೇವಲ ಬಂದಿಖಾನೆ ಎಂಬ ಕಲ್ಪನೆ ನಿರಾಶ್ರಿತರಲ್ಲಿ ಬರಬಾರದು ಅದೊಂದು ಮನಃಪರಿವರ್ತನ ಕೇಂದ್ರವಾಗಿ ಕಾಣುವ ಮಟ್ಟದಲ್ಲಿ ಯೋಜನೆಗಳನ್ನು ರೂಪಿಸಬೇಕಿದೆ, ಇಂದಿನ ಆರ್ಥಿಕ ಪರಿಸ್ಥಿತಿ ಕುಗ್ಗಿರುವ ಸಂಧರ್ಭದಲ್ಲಿ ನಿರಾಶ್ರಿತರು ದೇವಸ್ಥಾನಗಳ ಅನ್ನದಾಸೋಹದ ಮೇಲೆ ಅವಲಂಭಿತರಾಗಿದ್ದರು ಆದರೆ ಅದಕ್ಕೂ ಕೊರೊನಾ ನಿಯಮಾನುಸಾರ ಸ್ಥಗಿತವಾಗಿದೆ ಹಾಗಾಗಿ ಸರ್ಕಾರವೇ ಗಂಜೀಕೇಂದ್ರಗಳ ನಿರ್ಮಾಣ ಹೆಚ್ಚಿಸಬೇಕಿದೆ ಮಾನವೀಯತೆ ಸೇವಮನೋಭಾವದ ಮೂಲಕ ಶ್ರಮಿಸುವ ಸಂಘಸಂಸ್ಥೆಗಳನ್ನ ನಗರಪಾಲಿಕೆ ಪಟ್ಟಿ ಮಾಡಿ ಸ್ವಯಂ ಸೇವಕರ ತಂಡಗಳನ್ನು ವಲಯಮಟ್ಟದಲ್ಲಿ ರಚಿಸಿ ಕಷ್ಟದಲ್ಲಿರುವ ನಿರಾಶ್ರಿತರಿಗೆ ಬಡವರಿಗೆ ಸ್ಥಳಕ್ಕೆ ಹೋಗಿ ಸವಲತ್ತು ಸಹಕಾರ ಕೊಡಿಸುವಂತೆ ನಗರಪಾಲಿಕೆ ಯೋಜನೆ ರೂಪಿಸಬೇಕು ಎಂದರು,

ನಂತರ ಜಿ.ಎಸ್.ಎಸ್ ಫೌಂಡೇಶನ್ ಅಧ್ಯಕ್ಷರಾದ ಶ್ರೀಹರಿರವರು ಮಾತನಾಡಿ ನಮ್ಮ ಮೈಸೂರಲ್ಲಿ ನಿರಾಶ್ರಿತರು ಅಶಕ್ತರಲ್ಲಿ ಸ್ವಾಭಿಮಾನಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಆದ ಕಾರಣ ಕಷ್ಟದಲ್ಲಿದ್ದೇವೆ ಸಹಾಯ ಮಾಡಿ ಎಂದು ಸಂಘಸಂಸ್ಥಗಳಿಗೆ ಅಥವಾ ಸರ್ಕಾರಕ್ಕೆ ಅರ್ಜಿ ಹಾಕಲ್ಲ ಅಥವಾ ಸರ್ಕಾರದವರೇ ಎಲ್ಲವನ್ನು ಸರಿದಾರಿಗೆ ತರೋಕು ಆಗುವುದಿಲ್ಲ ಸಮಾಜವನ್ನ ಸರಿಪಡಿಸಲು ಸಂಘ ಸಂಸ್ಥೆಗಳ ಮತ್ತು ಸಾರ್ವಜನಿಕರ ಪಾತ್ರ ಬಹಳಮುಖ್ಯ, ಅಶಕ್ತರಿರುವ ಸ್ಥಳಕ್ಕೆ ಹೋಗಿ ಹೊದಿಕೆ ವಿತರಣೆ ಕಾರ್ಯಕ್ರಮ ನಡೆಯುವ ಮಾದರಿಯಲ್ಲೆ ಅವರಿಗೆ ಆರೋಗ್ಯ ತಪಾಸಣೆ ಮಾಡಿಸಲು ಶ್ರಮಿಸೋಣ ಎಂದರು ಇದೇ ಸಂದರ್ಭದಲ್ಲಿ ಮಹಿಳಾ ಆಯೋಗದ ಅಧ್ಯಕ್ಷರಾದ ಪ್ರಮೀಳಾ ನಾಯ್ಡು ,ಡಿಟಿಎಸ್ ಫೌಂಡೇಶನ್ ಅಧ್ಯಕ್ಷರಾದ ಡಿ ಟಿ ಪ್ರಕಾಶ್ ,ಜಿ ಎಸ್ ಎಸ್ ಫೌಂಡೇಶನ್ ಅಧ್ಯಕ್ಷರಾದ ಶ್ರೀಹರಿ ದ್ವಾರಕನಾಥ್ ,ಯುವ ಮುಖಂಡರಾದ ಎನ್ ಎಂ ನವೀನ್ ಕುಮಾರ್ ,ಮಾಜಿ ನಗರ ಪಾಲಿಕಾ ಸದಸ್ಯರಾದ ಎಂ ಡಿ ಪಾರ್ಥಸಾರಥಿ ,ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕರಾದ ಗಿರೀಶ್ ,ಉದ್ಯಮಿ ಅಪೂರ್ವ ಸುರೇಶ್ ,ಕೆ ಎಂ ಪಿ ಕೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷರಾದ ವಿಕ್ರಂ ಅಯ್ಯಂಗಾರ್ ,ಅಜಯ್ ಶಾಸ್ತ್ರಿ ,ಜೋಗಿ ಮಂಜು, ರಾಕೇಶ್ ಭಟ್ ,ಎಸ್ ಎನ್ ರಾಜೇಶ್ ,ಹರೀಶ್ ನಾಯ್ಡು ,ಕಡಕೋಳ ಜಗದೀಶ್ , ಜಿ ರಾಘವೇಂದ್ರ,ರಾಕೇಶ್ ಕುಂಚಿಟಿಗ ,ಸುಚೇಂದ್ರ ,ನವಿಲು ನಾಗರಾಜ್ ಚಕ್ರಪಾಣಿ ಹಾಗೂ ಇನ್ನಿತರರು ಹಾಜರಿದ್ದರು

By admin