ಚಮಕ್, ಅಯೋಗ್ಯ, ಬೀರ್ ಬಲ್, ಬುದ್ದಿವಂತ 2 ಸೇರಿದಂತೆ ಅನೇಕ ಯಶಸ್ವೀ ಚಿತ್ರಗಳ ನಿರ್ಮಾಪಕರಾದ ಕ್ರಿಸ್ಟಲ್ ಪಾರ್ಕ್ ಸಿನಿಮಾಸ್ ನ ಡಾ|| ಟಿ.ಆರ್. ಚಂದ್ರಶೇಖರ್ ಅವರನ್ನು ಮೈಸೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರನಾಗಿ ಕರ್ನಾಟಕ ರಾಜ್ಯದ ಘನತೆವೆತ್ತ ರಾಜ್ಯಪಾಲರಾದ ಶ್ರೀ ತಾವರ್ ಚಂದ್ ಗೆಹ್ಲೋಟ್ ರವರು ಮೂರು ವರ್ಷಗಳ ಅವಧಿಗೆ ನೇಮಕ ಮಾಡಿದ್ದಾರೆ.ಹಲವು ಯಶಸ್ವಿ ಚಿತ್ರಗಳ ನಿರ್ಮಾಪಕರಾಗಿರುವ ಡಾ|| ಟಿ.ಆರ್ ಚಂದ್ರಶೇಖರ್, ಮೂಲತಃ ಎಂಜಿನಿಯರಿಂಗ್ ಹಾಗೂ ಪಿ ಹೆಚ್ ಡಿ ಪದವೀದರರಗಿದ್ದಾರೆ.ಪ್ರಸ್ತುತ ಹೆಮ್ಮೆಯ ಮೈಸೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರಾಗಿ ಡಾ||ಟಿ.ಆರ್.ಚಂದ್ರಶೇಖರ್ ರವರು, ಮೂರು ವರ್ಷಗಳ ಕಾಲ ಕಾರ್ಯ ನಿರ್ವಹಿಸಲಿದ್ದಾರೆ‌.