ಮೈಸೂರು: ತೇರಾಪಂತ್ ಯುವಕ ಪರಿಷತ್ ಹಾಗೂ ರೋಟರಿ ಸಂಸ್ಥೆ ಹಾಗೂ ಆರ್  ಜಿ ಎಸ್ ಮೈಸೂರು ಹ್ಯೂಮನ್ ಟಚ್ ವತಿಯಿಂದ ಜೀವಧಾರ ರಕ್ತನಿಧಿ ಕೇಂದ್ರದ ಸಹಯೋಗದೊಂದಿಗೆ  ಬೃಹತ್ ರಕ್ತದಾನ ಶಿಬಿರವನ್ನು ಎಂ ಜಿ ರಸ್ತೆಯಲ್ಲಿರುವ ತೇರಾಪಂಥ್ ಭವನದಲ್ಲಿ 100 ಕ್ಕೂ ಹೆಚ್ಚು ಜನರು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಿದರು.

ರಕ್ತದಾನ ಶಿಬಿರಕ್ಕೆ ಶಾಸಕ  ಎಸ್. ಎ ರಾಮದಾಸ್ ಚಾಲನೆ ನೀಡಿ ಮಾತನಾಡಿ ರಕ್ತದಾನಿಗಳು   ಕೊರೊನಾ ಸೊಂಕಿಗೆ ಹೆದರುವ ಅವಶ್ಯಕತೆಯಿಲ್ಲ. ಇಂದಿನ  ರಕ್ತದಾನ ಶಿಬಿರ ರಕ್ತದಾನಿಗಳಲ್ಲಿ ಆತ್ಮಸ್ಥೈರ್ಯ ತುಂಬಿದೆ, ಶಸ್ತ್ರ ಚಿಕಿತ್ಸೆ ಮತ್ತು ಹೆರಿಗೆಯ ಸಂದರ್ಭದಲ್ಲಿ ರಕ್ತದ ಅವಶ್ಯಕತೆಯಿದೆ. ರಕ್ತನಿಧಿ ಕೇಂದ್ರಗಳಲ್ಲೂ ಸಹ ರಕ್ತ ಶೇಖರಿಕೆ  ಪ್ರಮಾಣ ಕುಂದುತ್ತಿದೆ. ಹಾಗಾಗಿ ರಕ್ತ ದಾನಿಗಳು ಸ್ವಯಂ ಪ್ರೇರಿತರಾಗಿ ಮುಂದಾದರೆ ನಮ್ಮ ತಂಡದ ವತಿಯಿಂದ ಮನೆಯಿಂದಲೇ ಕರೆದುಕೊಂಡು ಹೋಗಿ ಸುರಕ್ಷಿತವಾಗಿ ಬಿಡುವ ವ್ಯವಸ್ಥೆ ಮಾಡಲಾಗುವುದು.

ಕೃಷ್ಣರಾಜ ಕ್ಷೇತ್ರ ವ್ಯಾಪ್ತಿಯಲ್ಲಿ   ಜೂನ್ 16 ರಂದು  ಸ್ಥಳೀಯ ಬೂತ್ ಮಟ್ಟದಲ್ಲಿ ಕೋವಿಡ್ ಪರೀಕ್ಷೆ ಮಾಡಲಾಗುವುದು. ಮತ್ತು ಜೂನ್ 21ರಂದು 18ವರ್ಷದ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ಕೊಡುವ ಕಾರ್ಯಕ್ಕೆ ಮುಂದಾಗುತ್ತಿದ್ದು, ಸಾರ್ವಜನಿಕರು ಇದರ ಸೇವೆಯನ್ನು ಬಳಸಿಕೊಳ್ಳಬೇಕು ಎಂದರು

ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷರಾದ ಹೇಮಂತ್ ಕುಮಾರ್ ಗೌಡ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿರ್ದೇಶಕರಾದ ರೇಣುಕರಾಜ, ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕ  ಗಿರೀಶ್ , ಆರ್. ಜಿ. ಎಸ್. ಗ್ರೂಪ್ ಅಧ್ಯಕ್ಷ ದೇವೇಂದ್ರ ಪರಿಹಾರಿಯ, ಪರಿಸರ ಜಾಗೃತಿ ಅಧ್ಯಕ್ಷ ಬನ್ನೂರು  ಮಹೇಂದ್ರ ಸಿಂಗ್ ಕಾಳಪ್ಪ, ಅಖಿಲ ಭಾರತೀಯ ತೇರಾಪಂಥ್ ಯುವ ಪರಿಷತ್ ಅಲೋಕ್ ಚಾಜೇಡ್, ಸಂಜಯ್, ದಿನೇಶ್ ಮಾರುತಿ, ದಿನೇಶ್ ದಕ್, ಪೃಥ್ವಿ ಸಿಂಗ್ ಚಂದಾವತ್ ಮೊದಲಾದವರು ಇದ್ದರು.

By admin