ಚಾಮರಾಜನಗರ: ಪ್ರತಿಷ್ಠಿತ ಖಾಸಗಿ ಶಾಲೆಗಳಲ್ಲಿ ಪರಿಶಿಷ್ಠಜಾತಿ, ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳಿಗೆ ಪ್ರವೇಶಾತಿ ವಿಳಂಬವಾಗುತ್ತಿದೆ ಎಂದು ಆರೋಪಿಸಿ ಜಿಲ್ಲಾದಲಿತಸಂಘರ್ಷ ಸಮಿತಿ ಹಾಗೂ ಪ್ರಗತಿಪರಸಂಘಟನೆಗಳ ಮುಖಂಡರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಜಿಲ್ಲಾಡಳಿತಭವನದ ಆವರಣದಲ್ಲಿ ಸಮಾವೇಶಗೊಂಡ ದಸಂಸ ಜಿಲ್ಲಾಸಮಿತಿ, ಪ್ರಗತಿಪರಸಂಘಟನೆಗಳ ಮುಖಂಡರು ಘೋಷಣೆಗಳನ್ನು ಕೂಗುತ್ತ. ಕೆಲಕಾಲ ಪ್ರತಿಭಟನೆ ನಡೆಸುವ ಮೂಲಕ ಜಿಲ್ಲಾ ಸಮಾಜಕಲ್ಯಾಣಾಧಿಕಾರಿ ಮಲ್ಲಿಕಾರ್ಜುನ ಸೇರಿದಂತೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಡಾ.ಬಿ.ಆರ್.ಅಂಬೇಡ್ಕರ್ ಸಂಘಟನೆಗಳ ಒಕ್ಕೂಟ ತಾಲೂಕು ಅಧ್ಯಕ್ಷ ಸಿ.ಕೆ.ಮಂಜುನಾಥ ದಸಂಸ (ಡಿ.ಜಿ.ಸಾಗರ್ ಬಣ) ಜಿಲ್ಲಾ ಸಂಚಾಲಕ ಸಿ.ಎಂ.ಶಿವಣ್ಣ ಮಾತನಾಡಿ, ಪ್ರತಿಷ್ಠಿತ ಖಾಸಗಿ ಶಾಲೆಗಳಲ್ಲಿ ಎಸ್‌ಸಿ, ಎಸ್ಟಿ ಸಮುದಾಯದ ೬ ನೇ ತರಗತಿಗೆ ಪ್ರವೇಶ ನೀಡಲು ಸರಕಾರದ ಆದೇಶವಿದೆ, ೬ ನೇ ತರಗತಿ ವಿದ್ಯಾರ್ಥಿಗಳು ಇಲ್ಲವಾದಲ್ಲಿ ೮ ನೇ ತರಗತಿ ವಿದಾರ್ಥಿಗಳಿಗೆ ಪ್ರವೇಶಾವಕಾಶವಿದೆ. ಆದರೆ ಸಮಾಜಕಲ್ಯಾಣ ಇಲಾಖೆಯವರು ೬ ನೇತರಗತಿಗೆ ಮಾತ್ರ ಪ್ರವೇಶನೀಡಿ, ೮ ನೇ ತರಗತಿಗಳನ್ನು ಕೈಬಿಟ್ಟು ತಾರತಮ್ಯವೆಸಗಿದ್ದಾರೆ. ೪೦ ಮಕ್ಕಳ ಪ್ರವೇಶದ ಗುರಿನೀಡಲಾಗಿದೆ. ಇವರಲ್ಲಿ ೨೦ ಮಕ್ಕಳಿಗೆ ಪ್ರವೇಶ ನೀಡಲಾಗಿದೆ. ಉಳಿದ ವಿದ್ಯಾರ್ಥಿಗಳು ಅತಂತ್ರ ಸ್ಥಿತಿ ಅನುಭವಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಈಗಾಗಲೇ ಪ್ರವೇಶಪರೀಕ್ಷೆ ನಡೆಸಿರುವ ೬ ಮತ್ತು ೮ ನೇತರಗತಿ ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸಬೇಕು, ಮ್ಯಾನೇಜ್ ಮೆಂಟ್ ಕೋಟಾದಡಿ ಪ್ರವೇಶಡೆವ ವಿದ್ಯಾರ್ಥಿಗಳಿಗೂ ಭಾರತಸರಕಾರ ವಿದ್ಯಾರ್ಥಿವೇತನ ನೀಡಬೇಕು, ಎಚ್.ಡಿ.ಫಾರೆಸ್ಟ್ ಪುಣಜನೂರು ಸ್ಟೇಟ್ ಫಾರೆಸ್ಟ್ ಸರ್ವೇನಂ ೧,೩.೫ ರಲ್ಲಿ ನಗರದ ಅಂಬೇಡ್ಕರ್ ಬಡಾವಣೆಯ ೫೦ಮಂದಿ ತಲಾ ೨ ಎಕರೆ ಅನುಭವ ಹೊಂದಿದ್ದು, ಸಾಗುವಳಿ ಮಾಡಲು ಸರಕಾರ ಅವಕಾಶ ಕಲ್ಪಿಸಬೇಕು, ಜಿಲ್ಲಾ ಎಸ್ಸಿಎಸ್ಟಿ ಹಿತರಕ್ಷಣಾ ಸಮಿತಿಸಭೆಯನ್ನು ಶೀಘ್ರದಲ್ಲೇ ಕರೆಯಬೇಕು ಎಂದು ಆಗ್ರಹಿಸಿದರು.
ಜಿ,ಎಂ ಗಾಡ್ಕರ್ ನಿಜಧ್ವನಿ ಗೋವಿಂದರಾಜು ಸಿಕೆ ಮಂಜುನಾಥ್ ಹರದನಹಳ್ಳಿರಾಮಚಂದ್ರ, ಕರ್ನಾಟಕ ಕನ್ನಡ ರಕ್ಷಣಾವೇದಿಕೆ ಅಧ್ಯಕ್ಷ ಚಾ.ಗು.ನಾಗರಾಜು, ಬಂಗಾರಸ್ವಾಮಿ ಮೂರ್ತಿ, ಉಮೇಶ್ ಕುಮಾರ್, ಆಟೋ ಉಮೇಶ್ ಕಂದಳ್ಳಿಮಾದೇವ, ಮಹದೇವಯ್ಯ, ಭೋಗಾಪುರನಾಗೇಶ್, ನಟರಾಜ್ ಸೇರಿದಂತೆ ಇತರರು ಭಾಗವಹಿಸಿದ್ದರು.