ಅನಾದಿಕಾಲದಿಂದಲೂ ಬಂಡವಾಳಶಾಹಿಗಳ ಐಶಾರಾಮ ಬದುಕನ್ನು ಕಟ್ಟಿಕೊಟ್ಟವರು ಕಾರ್ಮಿಕರು. ಸಿರಿವಂತರು ಚಿನ್ನದತಟ್ಟೆಯಲ್ಲಿ ತಿಂದು ಬೆಳ್ಳಿಯಲೋಟದಲ್ಲಿ ಕುಡಿದು ಸುಪ್ಪತ್ತಿಗೆಯಲ್ಲಿಮಲಗಿ ಜೀವನ ನಡೆಸಲು ಮೂಲಕಾರಣ ಶ್ರಮಿಕರು. ಒಂದುವರ್ಗವು ದುಡಿಯುವ ಶಾಪಕ್ಕೆಂದೆ ಬದ್ಧವಾಗಿದ್ದರೆ ಇನ್ನೊಂದುವರ್ಗವು ಸುಖಿಸುವ ವರಕ್ಕೆಂದೇ ಸಿದ್ಧವಾಗಿರುತ್ತದೆ. ಹಣೆಬರಹ ವಿಧಿವಿಲಾಸ ಪಾಲಿಗೆಬಂದದ್ದುಪಂಚಾಮೃತ ಮುಂತಾದ ಒಣವೇದಾಂತ ಒತ್ತಟ್ಟಿಗಿಟ್ಟು ಸೈದ್ಧಾಂತಿಕ ಸಾಮಾಜಿಕ ವೈಜ್ಞಾನಿಕ ಹಾಗೂ ತಾಂತ್ರಿಕ ಆಧಾರದಮೇಲೆ ಚಿಂತಿಸಿದಾಗ ಪ್ರಾಮಾಣಿಕ ಪರಿಣಾಮ ಲಭಿಸಿ ಸತ್ಯಫ಼ಲಿತಾಂಶ ದೊರಕುತ್ತದೆ.. ದುಡಿವ-ಕೂತುತಿನ್ನುವ ನಡುವಿನ ತಾರತಮ್ಯ ದೂರವಾಗಿ, ಬಡವ-ಬಲ್ಲಿದ ಭೇದ ಭಾವ ಮಾಯವಾಗಿ ಮಾನವೀಯತೆಯ ಉನ್ನತಧರ್ಮ ಉದಯವಾಗುತ್ತದೆ! ಹೀಗಾದಾಗ ಮಾತ್ರ ದುಡಿವ ಬಳಗಕ್ಕೆ ನ್ಯಾಯವಾಗಿ ಸಿಗಬೇಕಾದ ಲಾಭಾಂಶದ ಪಾಲು ದೊರಕುತ್ತದೆ ಸರ್ವರಿಗೂ ಸಮಪಾಲು-ಸಕಲರಿಗೂ ಸಮಬಾಳು ಅನ್ವರ್ಥವಾಗುತ್ತದೆ? ಹಂಚಿ ತಿನ್ನುವವನೆ ಮಹಾತ್ಮ!


ಅಜ್ಜಹಾಕಿದ ಆಲದಮರಕ್ಕೆ ಜೋತುಬಿದ್ದು ನೇತಾಡುವುದನ್ನು ಬದಿಗಿಟ್ಟು ಈಗಲಾದರೂ ನವಪೀಳಿಗೆ ಉದ್ಯಮಿಗಳು ಬದಲಾವಣೆ ಜಗತ್ತಿನ ನಿಯಮ ಎಂಬುದನ್ನರಿತು ತಮ್ಮನ್ನುತಾವೆ ಬದಲಾಯಿಸಿಕೊಳ್ಳುವುದು ಸರ್ವರೀತಿಯಲ್ಲು ಶ್ಲಾಘನೀಯ! ಕಾರ್ಮಿಕರು ತಮ್ಮ ಜೀವ-ಜೀವನವನ್ನು ಮುಡಿಪಾಗಿಟ್ಟು ಅವರ ಧಣಿಗಳು ಜಾಗತಿಕಮಟ್ಟದಲ್ಲಿ ಮೇಲೇರುವಂತೆ ಸರ್ವತೋಮುಖವಾಗಿ ಉದ್ಧಾರವಾಗುವಂತೆ ಬೆವರುಹರಿಸಿ ರಕ್ತಸುರಿಸಿ ದುಡಿಯುತ್ತಾರೆ. ಇಂಥ ಕಾರ್ಮಿಕರ ಜೀವನಶೈಲಿ ಮಾರ್ಪಡಿಸುವುದು ಪ್ರತಿಯೊಬ್ಬ ಮಾಲೀಕನ ಆದ್ಯಕತ್ರ್ಯವ್ಯ? ಕಾರ್ಮಿಕರ-ಮಾಲೀಕರ ನಡುವೆ ಪರಸ್ಪರ understanding,cooperation,coordination,ನಿರಂತರ ಸಾಗಿದಾಗ ಮಾತ್ರ ಕಾರ್ಮಿಕ ಸಮಾಜವು ಸಂಪೂರ್ಣ ಪ್ರಗತಿ ಸಾಧಿಸುತ್ತದೆ ಇಡೀದೇಶವು ಉನ್ನತ ಅಭಿವೃದ್ಧಿ ಹೊಂದುತ್ತದೆ!


ಐತಿಹಾಸಿಕ ಹಿನ್ನೆಲೆ:-ಕ್ರಿ.ಶ.108ರಲ್ಲಿ ರೋಮ್ ಸಾಮ್ರಾಜ್ಯದ ಕೊಮ್ಮೊಡಸ್ ಚಕ್ರವರ್ತಿಯು ಮೊಟ್ಟಮೊದಲ ಕಾರ್ಮಿಕ ದಿನಾಚರಣೆ ಮೇಯುಮ ತಿಂಗಳಪೂರ್ತಿ ಆಚರಿಸಿದ ಉಲ್ಲೇಖವಿದೆ. ಕ್ರಮೇಣ ಏಪ್ರಿಲ್27ರಿಂದ ಮೇ3ವರೆಗೆ 1ವಾರ ಆಚರಿಸಲ್ಪಟ್ಟು 6ನೆ ಶತಮಾನದಿಂದ 3ದಿನಗಳಿಗೆ ಸೀಮಿತವಾಗಿತ್ತು. ಯೂರೋಪ್ ರಾಷ್ಟ್ರಗಳಲ್ಲಿ ಹಬ್ಬವನ್ನಾಗಿ ಆಚರಿಸಲು ಪ್ರಾರಂಭವಾಯ್ತು. 17ನೇ ಶತಮಾನದ ಜರ್ಮನಿಯಲ್ಲಿ ಮೇ1-ಹಿಂದಿನ-ಮುಂದಿನ ದಿನಗಳಂದು ಅಮೋಘವಾಗಿ, ಫ಼್ರಾನ್ಸ್-ರಷ್ಯ ದೇಶಗಳಲ್ಲಿ ವರ್ಣರಂಜಿತವಾಗಿ ದೇಶಗಳಲ್ಲಿ ವರ್ಣರಂಜಿತವಾಗಿ ಆಚರಿಸಲು ಶುರುವಾಯ್ತು. 1889ರಲ್ಲಿ ಪ್ಯಾರಿಸ್‍ನ ಅಂತರ್‍ರಾಷ್ಟ್ರ ಸಾಮಾಜಿಕ-ಕಾರ್ಮಿಕ ಕ್ಷೇಮಾಭಿವೃದ್ಧಿ ಮಂಡಳಿ

ಸರ್ವಸದಸ್ಯರಾಷ್ಟ್ರಗಳ ಸಭೆಯಲ್ಲಿ ‘ಮೇ-1 ಇಂಟರ್ ನ್ಯಾಶನಲ್ ಲೇಬರ್ ಡೇ’ ಅಧಿಕೃತವಾಗಿ ಘೋಷಣೆಯಾದ ನಂತರ 1890ರಿಂದ 108ದೇಶಗಳು ಮೇ-ಡೇ ಆಚರಣೆ ಮಾಡುತ್ತಲಿದ್ದವು. 20ನೆ ಶತಮಾನದಿಂದ ಲೀಗ್‍ಆ¥sóïನೇಶನ್ಸ್ ಸೂಚನೆಯಂತೆ ಪ್ರತಿವರ್ಷ ಮೇ1 ರಂದು ವಿಶ್ವದ ಬಹುತೇಕ ಎಲ್ಲರಾಷ್ಟ್ರಗಳೂ ಮೇ-ದಿನಾಚರಣೆಯನ್ನು ವಿಜೃಂಭಣೆಯಿಂದ ಅರ್ಥಪೂರ್ಣವಾಗಿ ಆಚರಿಸುತ್ತಿವೆ. ವಿಶ್ವಸಂಸ್ಥೆ ಅಸ್ತಿತ್ವಕ್ಕೆ ಬಂದನಂತರ ಅಂತಾರಾಷ್ಟ್ರೀಯ ಕಾರ್ಮಿಕರ ಸಮಸ್ಯೆಗಳಿಗೆ ಮೀಸಲಾದ ವಿಶ್ವಕಾರ್ಮಿಕ ನ್ಯಾಯಾಲಯ, ವಿಶ್ವಕಾರ್ಮಿಕ ಕ್ಷೇಮಾಭಿವೃದ್ಧಿಸಂಸ್ಥೆ, ವಿಶ್ವಕಾರ್ಮಿಕ ಕಾಯಿದೆ,ನಿಯಮಾವಳಿ,ಕಾನೂನು, ಮುಂತಾದವು ಜಾರಿಗೆಬಂದವು. ತತ್ಪರಿಣಾಮವಾಗಿ, ಇತೀಚಿನ ವರ್ಷಗಳಲ್ಲಿ ಕಾರ್ಮಿಕನೂಸಹ ಆಡಳಿತವರ್ಗದ/ ಮಾಲೀಕತ್ವಮಂಡಲಿಯ ಕಷ್ಟಸುಖ-ಲಾಭನಷ್ಟ ಇತ್ಯಾದಿಗಳಲ್ಲಿ ಪಾಲುದಾರನಾಗಿರುವುದು ಮೆಚ್ಚುವಂತಾದ್ದು.


ಭಾರತ ದೇಶದಲ್ಲಿ ಮೊಟ್ಟಮೊದಲ ಮೇ-ದಿನಾಚರಣೆಯು ‘ಲೇಬರ್ ಕಿಸಾನ್ ಪಾರ್ಟಿ ಆಫ಼್ ಹಿಂದೂಸ್ತಾನ್’ ವತಿಯಿಂದ 1.5.1923ರಂದು ಮದ್ರಾಸಿ[ಚೆನ್ನೈ]ನಲ್ಲಿ ಆಚರಿಸಲ್ಪಟ್ಟಿತು! ಇದೇದಿನ ಪ್ರಪ್ರಥಮ ಬಾರಿಗೆ ಕಾರ್ಮಿಕರ ಚಿಹ್ನೆಯಾಗಿ ಕೆಂಪು ಬಾವುಟವನ್ನು ಉಪಯೋಗಿಸಲ್ಪಟ್ಟಿತು. ತದನಂತರವಷ್ಟೆ ಕಮ್ಯುನಿಸ್ಟ್ ಪಕ್ಷಗಳು ಈಕೆಂಪು ಬಾವುಟವನ್ನು ತಮ್ಮ ರಾಜಕೀಯ ಪಕ್ಷದ ಗುರುತನ್ನಾಗಿಸಿಕೊಂಡವು. ಮೇ ದಿನಾಚರಣೆಯಲ್ಲಿ ಕಾರ್ಮಿಕರ ಶ್ರಮ, ಅವರ ಮಡದಿ-ಮಕ್ಕಳ ಸಾಧನೆ, ಮುಂತಾದವುಗಳನ್ನು ಗುರುತಿಸಿ ಸನ್ಮಾನಿಸಿ/ಬಹುಮಾನಿಸಿ ಗೌರವಿಸುವ ಪದ್ಧತಿ ಪ್ರಾರಂಭವಾಯ್ತು. ಭಾರತದಲ್ಲು ಕೇಂದ್ರ-ರಾಜ್ಯ ಸರ್ಕಾರವು ಮೇ-1 ರಂದು ‘ಅಂತರ್ರಾಷ್ಟ್ರೀಯ ಶ್ರಮಿಕ್ ದಿವಸ್’ ಆಚರಿಸೆ ಸಾರ್ವಜನಿಕ ರಜೆದಿನ ಘೋಷಿಸಿತು. ಕನ್ನಡದಲ್ಲಿ ‘ಕಾರ್ಮಿಕರ ದಿನಾಚರಣೆ’ ಹಿಂದಿಯಲ್ಲಿ ‘ಕಾಮ್ಗರ್ ದಿನ್’ ಎಂದೂ ಆಚರಿಸಲ್ಪಡುತ್ತದೆ. ಜೈಕಾರ್ಮಿಕ! ಜೈಭಾರತ್!!

 ಕುಮಾರಕವಿ ನಟರಾಜ್ [೯೦೩೬೯೭೬೪೭೧]
            ಬೆಂಗಳೂರು-೫೬೦೦೭೨