===============================
ಕನ್ನಡ ಭಾಷಿಕರೆಲ್ಲರ ಒಂದು ರಾಜ್ಯದ ಉದಯವನ್ನು ನೆನಪಿಸುವ ಹಬ್ಬವೆ ರಾಜ್ಯೋತ್ಸವ! ಆ ಕಾರಣಕ್ಕಾಗಿ ಇದು ಶೇ.೧೦೦% ಕರ್ನಾಟಕ ರಾಜ್ಯದ ಉತ್ಸವ! ಭಾಷಾ ಶಾಸ್ತ್ರಜ್ಞರ ಪ್ರಕಾರ ಕನ್ನಡ ರಾಜ್ಯೋತ್ಸವ ಎಂದರೆ ಕನ್ನಡ+ರಾಜ್ಯದ+ಉತ್ಸವ ಎಂಬರ್ಥ-ತಾತ್ಪರ್ಯ? ಕರ್ನಾಟಕವಷ್ಟೇ ಕನ್ನಡ ರಾಜ್ಯ ಎಂದು ಸೀಮಿತ ಗೊಳಿಸುವುದು ತರವಲ್ಲ. ಐತಿಹಾಸಿಕವಾಗಿ ಸಾವಿರಾರು ವರ್ಷಕಾಲ ಇಡೀ ದಕ್ಷಿಣ ಭಾರತವೆ ಕನ್ನಡ [ಸಾಮ್] ರಾಜ್ಯವಾಗಿತ್ತು. ಇವತ್ತಿಗೂ ಕನ್ನಡಕುಲ-ಕನ್ನಡದಕಂಪು ಪ್ರಪಂಚದಾದ್ಯಂತ ಪಸರಿಸಿದೆ. ಯಾವಾಗ-ಎಲ್ಲಿಬೇಕಾದರೂ ಕನ್ನಡೋತ್ಸವವನ್ನು ನಿತ್ಯೋತ್ಸವವನ್ನಾಗಿ ಆಚರಿಸಲು ಪ್ರತಿಯೊಬ್ಬ ಕನ್ನಡಿಗನಿಗೆ ಅವಕಾಶವಿದೆ ಸ್ವತಂತ್ರವೂಇದೆ. ಆದರೆ, ಆಗಸ್ಟ್ ೧೫ರಂದೇ ಸ್ವಾತಂತ್ರ್ಯೋತ್ಸವ ಮತ್ತು ಜನವರಿ ೨೬ರಂದೇ ಗಣರಾಜ್ಯೋತ್ಸವ ಆಚರಿಸುವಂತೆ ನವೆಂಬರ್ ೧ರಂದೇ ಕರ್ನಾಟಕ ರಾಜ್ಯೋತ್ಸವ ಆಚರಿಸಿದರೆ ಅರ್ಥಪೂರ್ಣ! ಇಡೀ ತಿಂಗಳು ಮನಸೋ ಇಚ್ಚೆಯಂತೆ ಆಚರಿಸಿದರೆ ಅನರ್ಥವಲ್ಲವೆ? ಏಕೆಂದರೆ, ಕನ್ನಡದ ಉತ್ಸವವೇ ಬೇರೆ, ಕರ್ನಾಟಕರಾಜ್ಯದ ಉತ್ಸವವೇ ಬೇರೆ; ಇದು ಸಾಮಾನ್ಯಜ್ಞಾನ. ಕನ್ನಡಿಗರು ಪ್ರಜ್ಞಾವಂತರು ಗೌರವ-ಘನತೆ-ಪ್ರತಿಷ್ಟೆಯುಳ್ಳ ಕರುಣಾಮಯಿಗಳು, ಯಾವುದೆ ಉತ್ಸವವನ್ನು ಅಸಂಬದ್ಧವಾಗಿ ಎಲ್ಲೆಂದರಲ್ಲಿ ಆಚರಿಸುವವರಲ್ಲ? ‘ಕನ್ನಡರಾಜ್ಯೋತ್ಸವ’-‘ಕರ್ನಾಟಕರಾಜ್ಯೋತ್ಸವ’ ಇವೆರಡರ ನಡುವಣ ಜಿಜ್ಞಾಸೆಗೆ ಇತಿಶ್ರೀ ಹಾಡಲು ಈ ಲೇಖನ ಸಹಕಾರಿ ಆಗಬಹುದು?!
ಗಂಗ ಕದಂಬ ಚಾಲುಕ್ಯ ರಾಷ್ಟ್ರಕೂಟ ಹೊಯ್ಸಳ ಯಾದವ ಬಲ್ಲಾಳ ವಿಜಯನಗರ ಯವನರ ಕಾಲದ ‘ಕರ್ನಾಟಕ ಸಾಮ್ರಾಜ್ಯ’ ಕಾಲಕ್ರಮೇಣ ‘ಮೈಸೂರು ಸಂಸ್ಥಾನ’ ಆಯ್ತು. ಡಚ್ಚ್-ಪೋರ್ಚುಗೀಸ್-ಫ್ರೆಂಚ್-ಬ್ರಿಟಿಷ್ ಆಳ್ವಿಕೆಯಲ್ಲಿ ‘ಮೈಸೂರು ಪ್ರಾಂತ್ಯ’ ಎಂದು ಕರೆಯಲ್ಪಟ್ಟಿತು. ಸ್ವಾತಂತ್ರ್ಯಾನಂತರ ರಾಜ್ಯ ಏಕೀಕರಣ ಹೋರಾಟದ ಪರಿಣಾಮವಾಗಿ ಬಾಂಬೆ-ಹೈದ್ರಾಬಾದ್-ಮದ್ರಾಸ್-ಕೇರಳ ಪ್ರಾಂತ್ಯದಲ್ಲಿದ್ದ ಕನ್ನಡಿಗರ ನಾಲ್ಕು ಭೂ-ಪ್ರದೇಶಗಳನ್ನು ‘ಹಳೇ ಮೈಸೂರು ರಾಜ್ಯ’ಕ್ಕೆ ಸೇರಿಸಲ್ಪಟ್ಟು ದಿನಾಂಕ ೧.೧೧.೧೯೫೬ರಿಂದ ವಿಶಾಲ ಮೈಸೂರು ರಾಜ್ಯ(ಓeತಿ ಒಥಿsoಡಿe Sಣಚಿಣe) ಉದಯವಾಯಿತು. ೧೭ವರ್ಷದ ನಂತರ ೧೯೭೩ರಲ್ಲಿ ದಿ||ಡಿ.ದೇವರಾಜಅರಸು ಮುಖ್ಯಮಂತ್ರಿ ಆಗಿದ್ದಾಗ ‘ಕರ್ನಾಟಕ’ ರಾಜ್ಯವೆಂದು ಪುನರ್ ನಾಮಕರಣಗೊಂಡಿತು. ೧೯೫೬ರಿಂದ ‘ಕನ್ನಡ ರಾಜ್ಯೋತ್ಸವ’ ಎಂದು ಆಚರಣೆಯಲ್ಲಿತ್ತು. ೧೯೭೩ರಿಂದ ‘ಕರ್ನಾಟಕ ರಾಜ್ಯೋತ್ಸವ’ ಎಂದು ಆಚರಿಸಲ್ಪಡುತ್ತಿದೆ. ದಿನಾಂಕ 1:11:2022 ರಂದು 67ನೇ ರಾಜ್ಯೋತ್ಸವ ಆಚರಿಸಲಾಗುತ್ತದೆ.
ಪ್ರತಿವರ್ಷ ನವೆಂಬರ್ ಮೊದಲತೇದಿಯಂದು ರಾಜ್ಯಸರ್ಕಾರ/ಜಿಲ್ಲಾಡಳಿತ ವತಿಯಿಂದ ಸಾಂಕೇತಿಕವಾಗಿ/ಯಾಂತ್ರಿಕವಾಗಿ ಕರ್ನಾಟಕ ರಾಜ್ಯೋತ್ಸವ ಆಚರಿಸಲಾಗುತ್ತದೆ. ಕನ್ನಡ ಸಂಘ-ಸಂಸ್ಥೆಗಳು ಸಾರ್ವಜನಿಕರಿಂದ ಹಣ ಸಂಗ್ರಹಿಸಿ ವೈಭವದಿಂದ ಕನ್ನಡ ರಾಜ್ಯೋತ್ಸವ ಆಚರಿಸುತ್ತವೆ.
ಕೇಂದ್ರ ಸರ್ಕಾರದ ಕಛೇರಿ-ಸಂಸ್ಥೆಯಲ್ಲಿ ಉದ್ಯೋಗದಲ್ಲಿರುವ ಕನ್ನಡಿಗರು ಸಾಂಘಿಕವಾಗಿ-ಅಲ್ಪಸಂಖ್ಯಾತರಾಗಿ ಆಚರಿಸಿದರೆ, ಶಾಲಾ-ಕಾಲೇಜುಗಳಲ್ಲಿ ಐತಿಹಾಸಿಕವಾಗಿ ಆಚರಿಸುತ್ತಾರೆ. ಖಾಸಗಿಯಾಗಿ ಬಸ್ಸು ಲಾರಿ ಕಾರು ರಿಕ್ಷ ಅಂಗಡಿ ವರ್ಕ್ಶಾಪ್ ಗ್ಯಾರೇಜ್ ಹೊಟೇಲ್ ಟಾಕೀಸ್ ನಾಟಕಕಂಪನಿ ದೂರದರ್ಶನ ಬೆಳ್ಳಿ[ಕಿರು]ತೆರೆ ಕಲಾವಿದರು ಆದಿಯಾಗಿ ಇನ್ನಿತರೆ ಕ್ಷೇತ್ರಗಳಲ್ಲಿ ಕನ್ನಡಿಗರು, ಅನ್ಯಭಾಷಿಗರು ಯಥಾಶಕ್ತಿ ರಾಜ್ಯೋತ್ಸವ ಆಚರಿಸುತ್ತಾರೆ. ಈ ಹಬ್ಬವು ಇಷ್ಟಕ್ಕೇ ಸೀಮಿತವಾಗದೆ ರಾಜ್ಯದ ಪ್ರತಿಯೊಬ್ಬ ಕನ್ನಡಿಗರ ಕನ್ನಡೇತರರ ಮನ ಮನೆಗಳಲ್ಲಿ ಆಚರಿಸಿದಾಗಲೇ ಜನನಿ ಜನ್ಮಭೂಮಿಯ ಋಣ ತೀರುತ್ತದೆ. ಆಗಿನ ಕಾಲದ ನಿಸ್ವಾರ್ಥ ಕನ್ನಡ ಚಳುವಳಿಗಾರರಾದ ಅ.ನ.ಕೃ. ತ.ರಾ.ಸು.ಹುಯಿಲುಗೋಳು ನಾರಾಯಣರಾವ್, ಮ.ರಾಮಮೂರ್ತಿ,
ಕಟ್ಟೀಮನಿ, ಪಾ.ಪು, ಚಂ.ಪಾ, ನಾಡಗೌಡ, ಜಿ.ನಾರಾಯಣ, ಡಾ.ರಾಜ್ಕುಮಾರ್, ವಾಟಾಳ್ನಾಗರಾಜ್, ಮುಂತಾದವರು ಏಕೀಕರಣಕ್ಕಾಗಿ, ಆಡಳಿತ ಭಾಷೆಗಾಗಿ ಗೋಕಾಕ್ ವರದಿ ಜಾರಿಗಾಗಿ ಹೋರಾಟ ನಡೆಸಿದ್ದು ಅವಿಸ್ಮರಣೀಯ, ಅಜರಾಮರ! ಈಗಲೂ ಇವರ ಹಾದಿಯಲ್ಲಿ ಸಾಗುತ್ತಿರುವವರು ಅಪಾರ ಸಂಖ್ಯೆಯಲ್ಲಿದ್ದಾರೆ. ಆದರೆ ಕೆಲವು ಕಿಡೆಗೇಡಿಗಳು ಅಗ್ರ-ವ್ಯಗ್ರ-ಉಗ್ರ ಚಳುವಳಿಗಾರರೆಂದು ತಾವೆ ಬೆನ್ನು ತಟ್ಟಿಕೊಂಡು ರಾಜ್ಯೋತ್ಸವದ ಹೆಸರಲ್ಲಿ ಸಾರ್ವಜನಿಕರ ಸುಲಿಗೆ-ಶೋಷಣೆ ಮಾಡುತ್ತ ಧನ-ಧಾನ್ಯ ಸಂಗ್ರಹಿಸಿ ಸ್ವಾರ್ಥಕ್ಕೆ ಉ[ದುರು]ಪಯೋಗಿಸಿಕೊಂಡು ಕನ್ನಡ ನಾಡು-ನುಡಿ-ಜನ-ಸಂಸ್ಕೃತಿ-ನಾಗರಿಕತೆ-ಸಂಸ್ಕಾರ-ಇತಿಹಾಸದ ಪವಿತ್ರತೆಗೆ ಮಸಿ ಬಳಿಯುತ್ತಿದ್ದಾರೆ. ಇಂಥವರನ್ನು ಪ್ರೋತ್ಸಾಹಿಸದೆ ಕಾನೂನು ರೀತ್ಯ ಶಿಕ್ಷೆಗೆ ಒಳಪಡಿಸಲು ದಿಟ ಕನ್ನಡ ವೀರರು ದಿಟ್ಟ ಹೆಜ್ಜೆ ಇಡಬೇಕು! ಹತ್ತು ವರ್ಷದಿಂದೀಚೆಗೆ ಪ್ರತಿರಾಜ್ಯೋತ್ಸವ ಆಚರಣೆಯು ಕನ್ನಡಿಗರನ್ನು ಸಶಕ್ತರನ್ನಾಗಿಸಿ ಎಚ್ಚೆತ್ತುಕೊಳ್ಳುವಂತೆ ಮಾಡುತ್ತಿದೆ. ಮುಂದಿನ ವರ್ಷಗಳಲ್ಲಿ ಪ್ರತಿಯೊಬ್ಬ ಕನ್ನಡಿಗನು ಸ್ವಾಭಿಮಾನಿ ಮಾತೃಭಾಷಾಭಿಮಾನಿ ಆಗುವಂತೆ ರೂಪಿಸಲಿದೆ! ಭಾರತಾಂಬೆಯ ಮಕ್ಕಳಲ್ಲಿ ಭುವನೇಶ್ವರಿಯೂ
ಓರ್ವಳೆಂಬ ಮಮತೆ ಗೌರವ ಪ್ರತಿಯೊಬ್ಬ ಅನ್ಯಭಾಷಿಗನಿಗೂ ಮನದಟ್ಟಾಗುವಂತೆ, ಕೇಂದ್ರ ಸರ್ಕಾರದ ಮಲತಾಯಿ ಧೋರಣೆಗೆ ಮುಕ್ತಿ ಸಿಗುವಂತೆ, ಬಹುಕಾಲದ ಕನ್ನಡಿಗರ ಕನಸು ನನಸಾಗುವ ಸುದಿನ ಬರುವಂತೆ ಕನ್ನಡ ಚಳುವಳಿ
ಇರಬೇಕು ಕನ್ನಡಿಗ ಹೋರಾಡಬೇಕು; ಆಗ ಮಾತ್ರ ಕನ್ನಡವೇ ಪುಣ್ಯ! ಕನ್ನಡಿಗನೇ ಧನ್ಯ!!
ಕರ್ನಾಟಕವೇ ಮಾನ್ಯ!
ಕರ್ನಾಟಕ ಸರ್ಕಾರದ ಆದ್ಯ ಕರ್ತವ್ಯ:- ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ-ಸಂಸ್ಕೃತಿಇಲಾಖೆ, ಸೇರಿದಂತೆ ಕನ್ನಡದ ಇನ್ನಿತರೆ ಶೈಕ್ಷಣಿಕ, ಸಾಮಾಜಿಕ ಇಲಾಖೆಯೊಡನೆ ಸಂಪರ್ಕ ಇಟ್ಟುಕೊಂಡು ಹಲವಾರು [ಉಪ]ಸಮಿತಿ ರಚಿಸಿಕೊಳ್ಳಬೇಕು. ಕನ್ನಡದ-ಕನ್ನಡಿಗರ ಸರ್ವತೋಮುಖ ಅಭಿವೃದ್ಧಿ ಬಗ್ಗೆ ಸಭೆಗಳಲ್ಲಿ ಗಂಭೀರ ಚರ್ಚೆ ನಡೆಸುವ ಮೂಲಕ ಕನ್ನಡ ಬಳಕೆ ಸಾಹಿತ್ಯ ಪ್ರಕಟಣೆ ಪುಸ್ತಕ ಪ್ರದರ್ಶನ ಸಂಸ್ಕೃತಿ-ಇತಿಹಾಸದ ವಸ್ತುಪ್ರದರ್ಶನ ಸಾಕ್ಷ್ಯಚಿತ್ರ ಪ್ರದರ್ಶನ ಮುಂತಾದ ಬಹೋಪಯೋಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಕನ್ನಡವನ್ನು ವ್ಯವಹಾರ-ಆಡಳಿತ-ಜಾಹೀರಾತು ಭಾಷೆಯನ್ನಾಗಿ ಶೇ.೧೦೦ರಷ್ಟು ಅನುಷ್ಟಾನಗೊಳಿಸಬೇಕು. ಈ ದಿಶೆಯಲ್ಲಿ ಆಗಾಗ್ಗೆ ಸರ್ಕಾರಿ ಆದೇಶ ಹೊರಡಿಸುತ್ತ ಕನ್ನಡವನ್ನು ಉಳಿಸಿ-ಬೆಳೆಸುವ ಕೈಂಕರ್ಯ ಪ್ರಾಮಾಣಿಕವಾಗಿ ಸಾಗಬೇಕು. ಹೊಸದಾಗಿ ಪ್ರಾರಂಭಿಸುವ ಕನ್ನಡ ದಿನಪತ್ರಿಕೆ-ನಿಯತಕಾಲಿಕೆಗಳಿಗೆ, ಕನ್ನಡಲೇಖಕ-ಪ್ರಕಾಶಕರಿಗೆ, ಆರ್ಥಿಕ-ಆಡಳಿತಾತ್ಮಕ ನೆರವು ನೀಡಬೇಕು. ಪ್ರತಿಘಳಿಗೆ ಕನ್ನಡ ನೆಲ-ಜಲ-ನಾಡು-ನುಡಿಯ ಏಳಿಗೆಗಾಗಿ ಒಗ್ಗಟ್ಟಿನಿಂದ ಶಾಂತಿಯುತವಾಗಿ ಕಾನೂನು-ಸುವ್ಯವಸ್ಥೆ ಚೌಕಟ್ಟಿನಲ್ಲಿ ಸರೋಜಿನಿ ಮಹಿಷಿ ವರದಿ ಜಾರಿಗೆ ಬ[ತ]ರುವಂತೆ ಹೋರಾಡುವವರನ್ನು ಹುರಿದುಂಬಿಸಬೇಕು. ಜಾಗತಿಕ ಮಟ್ಟದ ಕನ್ನಡಿಗರ ಅಧಿಕಾರ [ವಿ]ಜ್ಞಾನ ಶ್ರಮ ಹಾಗೂ ಹಣ ಸದ್ವಿನಿಯೋಗ ಆಗುವಂತೆ ನೋಡಿಕೊಳ್ಳಬೇಕು.ಕರ್ನಾಟಕದಲ್ಲಿರುವ
ಅನ್ಯರಾಜ್ಯದ ತಿಳಿಗೇಡಿಗಳ [ವಿತಂಡ]ವಾದ:- ನಾವೆಲ್ಲ ಭಾರತೀಯರು. ಭಾಷೆ-ರಾಜ್ಯದ ಭೇದಭಾವ ಏಕೆ? ಎಂದೆಲ್ಲ ಪ್ರಶ್ನಿಸುತ್ತ ಕಪಟ ದೇಶಪ್ರೇಮ ಪ್ರದರ್ಶಿಸುತ್ತ ಕರುಣಾಮಯಿ ಕನ್ನಡಿಗರನ್ನು ಸಂತೈಸುತ್ತಾರೆ?! ಆದರೆ ಅನ್ಯರಾಜ್ಯದ[ಗಡಿನಾಡ]ಲ್ಲಿರುವ ಕನ್ನಡಿಗರನ್ನು ಆಯಾರಾಜ್ಯದಲ್ಲಿ ಪ್ರೀತಿ-ಸ್ನೇಹ-ವಿಶ್ವಾಸದಿಂದ ಕಾಣದೆ, ಸಮಾನತೆಗೆ-ನೆಮ್ಮದಿಗೆ ಅವಕಾಶ ನೀಡದೆ, ಅಗೌರವದಿಂದ ನಡೆಸಿ ಕೊಳ್ಳುವುದು ಯಾವ ಧರ್ಮ? ನ್ಯಾಯ? ಭಾರತೀಯತೆ? ಇದು ಇವತ್ತಿಗೂ ಕಾಡುತ್ತಿರುವ ಗಡಿನಾಡು/ಅನ್ಯರಾಜ್ಯ ಕನ್ನಡಿಗರ ದಾರುಣ ಪ್ರಶ್ನೆ? ಈಯಕ್ಷಪ್ರಶ್ನೆಗೆ ಸಂವಿಧಾನಾತ್ಮಕ ಉತ್ತರ ನೀಡುವಂಥ ಅಥವಾ ಹೊರರಾಜ್ಯದಲ್ಲಿ ನೊಂದ ಕನ್ನಡಿಗರನ್ನು ಸಂತೈಸುವಂಥ ಭಾರತೀಯ ಎಲ್ಲಿದ್ದಾರೆ, ಯಾರಿದ್ದಾರೆ?
ಕರ್ನಾಟಕದಲ್ಲಿರುವ ಕನ್ನಡೇತರರಿಗೆ ನಾವು ಸ್ಪಂದಿಸುವಂತೆ, ಬೇರೆ ರಾಜ್ಯದಲ್ಲಿರುವ ಕನ್ನಡಿಗರಿಗಾಗಿ ಅಲ್ಲಿನ ಜನರು ಸ್ಪಂದಿಸುವುದಿಲ್ಲ ಏಕೆ? ಇನ್ನು ಮುಂದಾದರೂ ಸೌಹಾರ್ಧಯುತವಾಗಿ ನಡೆದುಕೊಳ್ಳಲಿ, ಮನಃಪರಿವರ್ತನೆ ಮಾಡಿಕೊಂಡು ಮನಸ್ಸು-ಹೃದಯದ ಪಕ್ವತೆಯೆಡೆಗೆ ಸಾಗಲಿ ಎಂದು ಪ್ರತಿಯೊಬ್ಬ ಕನ್ನಡಿಗನೂ ಭಾರತಾಂಬೆಯನ್ನು ಪ್ರಾರ್ಥಿಸುತ್ತೇವೆ! ನಮ್ಮ ರಾಜ್ಯದಲ್ಲಿ ಅನ್ಯಭಾಷಿಕರ ನೆಲೆಸುವಿಕೆಯಿಂದ ನಾವು ಸಂತಸ ಪಡುವಂತೇ ಅನ್ಯರಾಜ್ಯಗಳಲ್ಲಿ ಕನ್ನಡಿಗರು ನೆಲೆಸಿದಾಗ ಅಲ್ಲಿನವರು ಸೌಹಾರ್ಧತೆ ಕಾಪಾಡಲಿ ಎಂಬುದೆ ಕನ್ನಡಿಗರ ಕಳಕಳಿಯ ಮನವಿ. ಒಂದುವೇಳೆ ಹಾಗಾಗದಿದ್ದರೆ ಕೊಡು-ಕೊಳ್ಳು ಪದ್ಧತಿಗೆ ತಿಲಾಂಜಲಿ ಇತ್ತು ಏಕಮುಖ ಪದ್ಧತಿಗೆ ಎಡೆಮಾಡಿಕೊಟ್ಟಂತೆ? ಬದುಕು-ಬದುಕಲು ಬಿಡು ತತ್ವವನ್ನು ಜೀವಂತ ಸಮಾಧಿ ಮಾಡಿದಂತೆ? ಆದ್ದರಿಂದ ‘ದ್ವಿಮುಖ ಮೈತ್ರಿ ಸೂತ್ರ ಪದ್ಧತಿ’ ದೇಶದಾದ್ಯಂತ ಜಾರಿಗೆ ತ[ಬ]ರಲೆಂದು ಕನ್ನಡಿಗರೆಲ್ಲರ ಹಕ್ಕೊತ್ತಾಯದ ಸಿಂಹಕೂಗು!
ಕರ್ನಾಟಕದ ರಾಜಧಾನಿ ಬೆಂಗಳೂರಲ್ಲಿ ಅಂದಾಜು ೧೨ ಕನ್ನಡೇತರ (ಪರ)ಭಾಷೆಗಳ ದಿನಪತ್ರಿಕೆ-ನಿಯತಕಾಲಿಕೆ ಇತ್ಯಾದಿ ಅನ್ಯಭಾಷಾ ಓದುಗರಿಗೆ ಸರಾಗವಾಗಿ ಸಿಗುತ್ತದೆ! ಆದರೆ ನಮ್ಮ ಪಕ್ಕದಲ್ಲೆ ಇರುವ ಗೋವ ಪೂನ ಹೈದ್ರಾಬಾದ್ ಕಣ್ಣಾನೂರು ಕೊಯಮತ್ತೂರ್ ತಿರುಪತಿ ನಗರಗಳಲ್ಲಿ ಕನ್ನಡ ದಿನಪತ್ರಿಕೆ-ನಿಯತಕಾಲಿಕೆಯ ಒಂದೇಒಂದು ಸಂಚಿಕೆಯೂ ಅಲ್ಲಿನ ಕನ್ನಡಿಗರಿಗೆ ದೊರಕುತ್ತಿಲ್ಲ! ಹೀಗೇಕೆ? ಕನ್ನಡಿಗರು ಸ್ನೇಹ ಸಹನಾಶೀಲ ಹಾಗೂ ವಿಶಾಲ ಮನೋಭಾವದವರೆ ಹೊರತು ಅವರಂತೆ ಸಂಕುಚಿತ ಭಾವನೆ/ಚಿಂತನೆ ಉಳ್ಳವರಲ್ಲ! ಮಹಾನ್ ಹೃದಯವಂತರು! ಅಕ್ಕಪಕ್ಕದ ರಾಜ್ಯದವರಂತೆ ಭಾಷಾಂಧಾಭಿಮಾನಿ-ದುರಭಿಮಾನಿಗಳಲ್ಲ! ಕೆಲವೊಂದು ನಗರದಲ್ಲಿ ಬೆರಳೆಣಿಕೆಯಷ್ಟು ‘ನವೆಂಬರ್-ನಾಯಕರು’ ಇರಬಹುದೇನೊ?
ಸಮಾಜಕ್ಕೆ ಕಷ್ಟನಷ್ಟ ತರುವಂಥ, ಭಾಷಾ ದ್ವೇಷಾಸೂಯೆ ಬೀರುವಂಥ ದುಷ್ಟರು ಇಲ್ಲವೇ
ಇಲ್ಲ! ಅಕಸ್ಮಾತ್ ಇಂತಹ ಅನಿಷ್ಠ ಗುಣವು ಯಾರಲ್ಲಾದರು ಇದ್ದರೆ, ಈಗಲೆ ಅದನ್ನು ನಾಶಗೊಳಿಸಿ ರಾಜ್ಯದ-ರಾಷ್ಟ್ರದ ಅಭಿವೃದ್ಧಿಗೆ ಕಟಿ ಬದ್ಧರಾಗಬೇಕು. ರಾಷ್ಟ್ರ[ರಾಜ್ಯ]ದ ಹಿತ ಕಾಪಾಡುವಲ್ಲಿ ವಿವಿಧ ಉಪಯುಕ್ತ ಕಾರ್ಯಕ್ರಮ
ಹಮ್ಮಿಕೊಂಡು ಕರ್ನಾಟಕದ ಉದ್ದಗಲಕ್ಕೂ
ರಾಜ್ಯೋತ್ಸವ ಆಚರಿಸಬೇಕು!
ಭಾರತದಲ್ಲಿ/ವಿಶ್ವದಲ್ಲಿ ಕನ್ನಡದ ಸ್ಥಾನಮಾನ ಎಂಬ ವಿಷಯದ ಬಗ್ಗೆ, ನಾಡು-ನುಡಿ-ಇತಿಹಾಸದ ಬಗ್ಗೆ ಚರ್ಚಾ/ಪ್ರಬಂಧ/ಸಾಮಾನ್ಯಜ್ಞಾನ ಕ್ರೀಡಾಸ್ಪರ್ಧೆ,ವಿಚಾರಸಂಕಿರಣ/ಗೋಷ್ಠಿ,ಚಿತ್ರಗೀತೆ,ಭಾವಗೀತೆ,ದೇಶ[ನಾಡ]ಭಕ್ತಿಗೀತೆ,ಜಾನಪದಗೀತೆ,ಕುಸ್ತಿಪಂದ್ಯಾವಳಿ. ವರ್ಣ/ಛಾಯಾ/ಕಿರುಚಿತ್ರ, ಚಲನಚಿತ್ರ, ಪ್ರದರ್ಶನ ಇರಲಿ. ಕನ್ನಡ ಭಾಷೆ ನೆಲ ಜಲ ಸಾಹಿತ್ಯ ಸಂಸ್ಕೃತಿ ಪರಂಪರೆ ಪುಸ್ತಕ ಪತ್ರಿಕೆ ನಿಯತಕಾಲಿಕೆ ಮಾಧ್ಯಮದ ಬಗ್ಗೆ ಅರಿವು ಮೂಡಿಸಲಿ. ಭರತನಾಟ್ಯ, ಯಕ್ಷಗಾನ, ಕರ್ನಾಟಕ ಸಂಗೀತ, ಜಾನಪದ ಸಂಗೀತ ವೈಭವೀಕರಿಸಲಿ. ರಾಜ್ಯ ಅಂತಾ ರ್ರಾಷ್ಟ್ರ ಮಟ್ಟದಲ್ಲಿ ಕನ್ನಡಿಗರ ಕೊಡುಗೆ ಸಾಧನೆ, ಹೆಗ್ಗಳಿಕೆ, ಪ್ರಶಸ್ತಿ, ಬಿರುದು, ಬಹುಮಾನ, ಕವಿ-ವಿದ್ವಾಂಸ-ಕಲಾವಿದರ ಬಗ್ಗೆ ಬಿಂಬಿಸಲಿ. ಭಾರತೀಯ[ಕರ್ನಾಟಕ] ಆಡಳಿತ ಸೇವೆ ಯಲ್ಲಿದ್ದ ದಿಗ್ಗಜರ, ಗಣ್ಯಾತಿಗಣ್ಯರ, ರಾಜಕೀಯಮುತ್ಸದ್ದಿ, ಮಠ-ಪೀಠಾಧಿಪತಿ, ಶಿಕ್ಷಣ-ದಾಸೋಹ, ಆಧ್ಯಾತ್ಮಿಕ-ದೇವಾಲಯ-ಶ್ರೀಕ್ಷೇತ್ರ, ಪ್ರಸಿದ್ಧ ಪ್ರೇಕ್ಷಣೀಯ ಸ್ಥಳ, ಶಿಲ್ಪಿಗಳ, ಶಿಲ್ಪಕಲೆಗಳ, ಸೃಷ್ಟಿ-ಶೈಲಿ ವೈವಿಧ್ಯದ ಬಗ್ಗೆ, ಉಪಯುಕ್ತ ಮಾಹಿತಿ ಮಂಡಿಸಲಿ. ಮಕ್ಕಳು-ಮಹಿಳೆ-ವೃದ್ಧರು-ಮುಜುಗರ ಇಲ್ಲದಂತೆ ಒಟ್ಟಿಗೆ ಕುಳಿತು ಆನಂದಿಸುವಂತೆ ಕಾರ್ಯಕ್ರಮಗಳನ್ನು ಸಜ್ಜುಗೊಳಿಸಬೇಕು.
ಸಂಸ್ಕೃತಿ-ನಾಗರಿಕತೆಗೆ ಮಸಿ ಬಳಿಯುವಂಥ ಅಶ್ಲೀಲಭಿತ್ತಿ/ಚಲನ/ಛಾಯಾ ವರ್ಣ ಚಿತ್ರ ನೃತ್ಯ,ನಾಟಕ,ಏಕಪಾತ್ರಾಭಿನಯ ಏರ್ಪಡಿಸಬಾರದು. ಶಬ್ಧಮಾಲಿನ್ಯದ ಕರ್ಕಶ ಆರ್ಕೇಷ್ಟ್ರ ಆಯೋಜಿಸಬಾರದು. ಕೊಳಕು ರಾಜಕೀಯದ ಉದ್ರೇಕ-ಶಾಂತಿಭಂಗದ ಡಬ್ಬಲ್ ಮೀನಿಂಗ್ ಸಂಭಾಷಣೆ-ಭಾಷಣ ಹಮ್ಮಿಕೊಳ್ಳಬಾರದು. ಮೆರವಣಿಗೆಯಲ್ಲಿ ಸಮಾಜಘಾತುಕ ವಿಧ್ವಂಸಕ ಕೃತ್ಯ ನಡೆಯದಂತೆ ಎಚ್ಚರಿಕೆ ವಹಿಸಬೇಕು. ಸರ್ಕಾರಿ/ಖಾಸಗಿ ಆಸ್ತಿ ಪಾಸ್ತಿ ಹಾನಿಯಾಗದಂತೆ ಜಾಗರೂಕತೆ ವಹಿಸಬೇಕು. ವೈಯಕ್ತಿಕ, ಪಕ್ಷ, ರಾಜ್ಯ,ರಾಷ್ಟ್ರ, ಪರಿಸರ ಹಾಗೂ ಪ್ರಕೃತಿ ಸಂಪತ್ತುಗಳನ್ನು ಸಂರಕ್ಷಿಸಲು ಪಣತೊಟ್ಟ ಕನ್ನಡಿಗ ಎನಿಸಿಕೊಳ್ಳುವಂತೆ ಕರ್ತವ್ಯ ನಿಭಾಯಿಸಬೇಕು.
ಸಚ್ಚಾರಿತ್ರ್ಯ ತಿಳುವಳಿಕೆಯಿಂದ ರಾಜ್ಯೋತ್ಸವ ಆಚರಿಸೋಣ!
ಇನ್ನುಮುಂದೆ ನವೆಂಬರ್ನಿಂದ ನವೆಂಬರ್ವರೆಗೆ ವರ್ಷವಿಡೀ ಆಚರಿಸಲ್ಪಡುವ ನಿತ್ಯೋತ್ಸವಆಗಲೆಂದು ಹಾರೈಸೋಣ?! ಆಗಮಾತ್ರ ಕನ್ನಡ ತಾಯಿ ಭುವನೇಶ್ವರಿಗೆ ಆನಂದ-ತೃಪ್ತಿ ಸಿಗುತ್ತದೆ! ಈಬಗ್ಗೆ ಎಲ್ಲರಿಗೂ ಸಾವಧಾನವಾಗಿ ಮನರಂಜನಾತ್ಮಕವಾಗಿ ಮನವರಿಕೆ ಮಾಡಿಕೊಡೋಣ. ಜೈ ಕನ್ನಡಿಗ! ಜೈ ಕರ್ನಾಟಕ!!

ಕುಮಾರಕವಿ ಬಿ.ಎನ್.ನಟರಾಜ್ [೯೦೩೬೯೭೬೪೭೧] ಬೆಂಗಳೂರು ೫೬೦೦೭೨
ReplyReply allForward |