
ಅಚ್ಚ ಕನ್ನಡಿಗ ಹೊನ್ನಪ್ಪ ಭಾಗವತರ್ ‘ಅಂಬಿಕಾಪತಿ’ ತಮಿಳು ಫ಼ಿಲಂ ಮೂಲಕ ಸಿನಿಮಾರಂಗ ಪ್ರವೇಶ ಮಾಡಿ, ಈ ಮೊದಲೇ ಕಾಲಿವುಡ್ನಲ್ಲಿ ಖ್ಯಾತರಾಗಿದ್ದ ತಮಿಳು ನಟ ತ್ಯಾಗರಾಜ ಭಾಗವತರ್ಗೆ ನೇರ ಸ್ಫರ್ಧಿಯಾದರು! ತದನಂತರ, ಸುಭದ್ರ್ರಾ ಕನ್ನಡ ಫ಼ಿಲಮ್ ಮೂಲಕ ಚಂದನವನಕ್ಕೆ ಪಾದಾರ್ಪಣೆ ಮಾಡಿದರು. ಆ ಕಾಲಕ್ಕೆ ಸ್ಫುರದ್ರೂಪಿ ನಾಯಕನಟನಾಗಿದ್ದ ಇವರು ಪೌರಾಣಿಕ ಮತ್ತು ಐತಿಹಾಸಿಕ ಸಿನಿಮಾ ವಿಶೇಷವಾಗಿ ಭಕ್ತಿಪ್ರಧಾನ ಸಿನಿಮಾಗಳಿಗೆ ಹೇಳಿ ಮಾಡಿಸಿದಂತಿದ್ದ ಸೌಮ್ಯ ಕಲಾವಿದ. ತಮಿಳು ಚಿತ್ರರಂಗದ ಅಂದಿನ ದಿಗ್ಗಜ ನಟ ತ್ಯಾಗರಾಜಭಾಗವತರ್ಗೆ ರೈವಲ್ ಆದರು. ದ.ಭಾರತದ ಇಬ್ಬರು ಭಾಗವತರ್ & ಭಾಗವತರ್ ನಟರಿಂದಾಗಿ, ಸಿನಿಮಾಕ್ಕೆಂದು ಹೊರಟ ಪ್ರೇಕ್ಷಕರು ಎಷ್ಟೋಸಲ ಕನ್ಫ಼್ಯುಸ್ಆಗಿ, ತ್ಯಾಗರಾಜರ ಫ಼ಿಲಂ ಅಂದುಕೊಂಡು ಹೊನ್ನಪ್ಪನವರ ಫ಼ಿಲಂ [ಮತ್ತು ವೈಸ್-ವರ್ಸ] ನೋಡಿದ ಅನೇಕ ಉದಾಹರಣೆ ಉಂಟು!

ತಮಿಳ್ ಚಿತ್ರರಂಗದ ತ್ಯಾಗರಾಜ ಭಾಗವತರ್ ಮೀರಿಸುವಂತೆ ಕನ್ನಡ ತೆಲುಗು ಮತ್ತು ತಮಿಳು ಚಿತ್ರಗಳಲ್ಲಿ ನಟಿಸಿ ದಕ್ಷಿಣ ಭಾರತದ ಹೀರೋಆಗಿ ದಾಖಲೆ ಮಾಡಿದ್ದರು. ಅನೇಕಬಾರಿ ತ್ಯಾಗರಾಜ ಭಾಗವತರ್ ಅವರಿಂದಲೇ ಸಾರ್ವಜನಿಕ ಸಮಾರಂಭ/ ಕಾರ್ಯಕ್ರಮದಲ್ಲಿ ಹೊಗಳಿಸಿಕೊಂಡ ಅಪರೂಪ ಕಲಾವಿದ. ಹೊನ್ನಪ್ಪ ಭಾಗವತರ್ ನಟಿಸಿದ ಪ್ರತಿಯೊಂದು ಸಿನಿಮಾದ ಅವರ ಹಾಡಿನ ದೃಶ್ಯಕ್ಕೆ ಅವರೇ ಹಿನ್ನೆಲೆಗಾಯಕ-ಸಂಗೀತನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ವಿಶಿಷ್ಟ ಹೀರೊ! ತ್ರಿಭಾಷಾ ಚಿತ್ರರಂಗದ ಪ್ರಪ್ರಥಮ ಭಕ್ತಿರಸ ನಾಯಕನಟ-ಕಂ-ಗಾಯಕ ಎಂಬುದು ಅವತ್ತಿನ ನೂತನ ದಾಖಲೆ! ಸುಮಾರು ೫೦ ವರ್ಷಕಾಲ ‘ಲಲಿತಕಲಾ ಫ಼ಿಲಂಸ್’ ಬ್ಯಾನರ್ ಅಡಿಯಲ್ಲಿ ಕನ್ನಡ-ತೆಲುಗು-ತಮಿಳು ೩ ಭಾಷೆಗಳ ಚಲನಚಿತ್ರ ನಿರ್ಮಾಪಕ-ನಿರ್ದೇಶಕ-ಸಂಗೀತನಿರ್ದೇಶಕರಾಗಿ ಒಟ್ಟು ೩೨ ಫ಼ಿಲಂಸ್ ಬೆಳ್ಳಿತೆರೆಗೆ ಅರ್ಪಿಸಿದ್ದ ಧೀಮಂತ ಕನ್ನಡಿಗ! ಹೊನ್ನಪ್ಪ ಭಾಗವತರ್ ಬೆಂಗಳೂರಿನ ನೆಲಮಂಗಲ ಬಳಿಯ ಚೌಡಸಂದ್ರದಲ್ಲಿ ೧೪ನೇ ಜನವರಿ ೧೯೧೫ರಂದು ಜನಿಸಿದ್ದರು. ರಂಗ ಕಲಾವಿದನಾಗಿ ವೃತ್ತಿ ಪ್ರಾರಂಭಿಸಿ ನಾಟಕ-ಸಿನಿಮ ಎರಡೂ ಕ್ಷೇತ್ರದಲ್ಲಿ ಪ್ರಭುದ್ಧ ನಟ ಎನಿಸಿದ್ದರು. ಶ್ರೀಮನ್ ಮಹಾರಾಜರಿಂದ ಗೌರವ ಸಂಪಾದಿಸಿದ್ದ, ೩ರಾಜ್ಯಗಳಲ್ಲಿ ಜನಪ್ರಿಯತೆ ಗಳಿಸಿದ್ದ, ಸಕಲಕಲಾವಲ್ಲಭ!
ಇವರಿಗೆ ಸಂದ ಪದವಿ ಪ್ರಶಸ್ತಿ ಬಿರುದು ಬಹುಮಾನ ಸನ್ಮಾನ:-
* ೧೯೫೫ : ಮಹಾಕವಿ ಕಾಳಿದಾಸ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ [ನಿರ್ಮಾಪಕ-ನಟ-ಗಾಯಕ-ಸಂಗೀತ ನಿರ್ದೇಶಕ]
* ೧೯೫೬ : ಪಂಚರತ್ನ ಚಿತ್ರದ ಅಭಿನಯಕ್ಕೆ ಮದ್ರಾಸ್ ಚಲನಚಿತ್ರ ಅಭಿಮಾನಿ ಸಂಘದಿಂದ ‘ದ.ಭಾರತದ ಅತ್ಯುತ್ತಮ ನಟ’ ಪ್ರಶಸ್ತಿ
* ೧೯೫೯ : ಜಗಜ್ಯೋತಿ ಬಸವೇಶ್ವರ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ [ರಾಜ್ಕುಮಾರ್ ಪೋಷಕ/ಅತಿಥಿನಟನಾಗಿ ಬಿಜ್ಜಳನ ಪಾತ್ರವಹಿಸಿದ್ದರು]
* ೧೯೬೦ : ನಾದಬ್ರಹ್ಮ ಸಂಗೀತ ವಿದ್ಯಾಲಯದ ಸಂಸ್ಥಾಪಕಅಧ್ಯಕ್ಷ ಹಾಗೂ ಪ್ರಾಚಾರ್ಯನಿರ್ದೇಶಕ
* ೧೯೬೧ : ಕನ್ನಡ ಫ಼ಿಲಂಸ್ ಸಲಹಾ ಸಮಿತಿ ಸದಸ್ಯರಾಗಿ ಅನುಪಮ ಸೇವೆ
* ೧೯೬೨ : ಕರ್ನಾಟಕ ಸಂಗೀತ ನೃತ್ಯ ಅಕ್ಯಾಡೆಮಿ ಸದಸ್ಯರಾಗಿ ಅಮೋಘ ಸೇವೆ
* ೧೯೭೬ : ‘ಗಾನಕಲಾಭೂಷಣ’ ಪ್ರಶಸ್ತಿ ಪ್ರದಾನ ಅದ್ಧೂರಿ ಸನ್ಮಾನ; ಪಿಟೀಲ್ ಚೌಡಯ್ಯ ಭವನ ಬೆಂಗಳೂರು
* ೧೯೭೮ : ‘ಗಾನಕಲಾಗಂಧರ್ವ’ ತಾಮ್ರ ಪತ್ರ ಮತ್ತು ನಗದು ಬಹುಮಾನ, ಕರ್ನಾಟಕ ಸಂಗೀತ ವಿದ್ವನ್ಮಣಿಗಳಿಂದ

* ೧೯೮೦ : ‘ಗಾನಾಭಿನಯಚಂದ್ರ’ ಬಿರುದು ಸನ್ಮಾನ, ಕನ್ನಡ ಚಲನಚಿತ್ರ ಅಭಿಮಾನಿಗಳು, ಮದ್ರಾಸ್
* ೧೯೮೬ : ‘ರಾಜ್ಯೋತ್ಸವ ಪ್ರಶಸ್ತಿ’ ಕರ್ನಾಟಕ ಸರ್ಕಾರ
* ೧೯೮೭ : ‘ನಟನಾಚಾರ್ಯ’ ಬಿರುದು ಸನ್ಮಾನ, ಸೌತ್ ಇಂಡಿಯನ್ ಫ಼ಿಲಂ ಫ಼್ಯಾನ್ಸ್ ಅಸೋಸಿಯೇಶನ್, ಹೈದ್ರಾಬಾದ್
* ೧೯೯೦ : ಭಾರತದ ರಾಷ್ಟ್ರಪತಿಗಳಿಂದ ಕೇಂದ್ರ ‘ಸಂಗೀತ ನಾಟಕ ಅಕ್ಯಾಡೆಮಿ’ ಪ್ರಶಸ್ತಿ
* ೧೯೯೧ : ‘ವರ್ಷದ ಅತ್ಯುತ್ತಮ ಸಂಗೀತಗಾರ’ ಪ್ರಶಸ್ತಿ, ರಾಷ್ಟ್ರೀಯ ಸಂಗೀತ&ನಾಟಕ ಅಕ್ಯಾಡೆಮಿ, ನವದೆಹಲಿ
ಸರಸ್ವತಿಪುತ್ರ ಹೊನ್ನಪ್ಪ ಸಿ. ೨ನೆ ಅಕ್ಟೋಬರ್ ೧೯೯೨ರಂದು ೭೭ನೇ ವಯಸ್ಸಲ್ಲಿ ಬೆಂಗಳೂರಲ್ಲಿ ದೈವಾಧೀನರಾದರು!
ಹೊನ್ನಪ್ಪ ಭಾಗವತರ್ ಅಭಿನಯದ ಕನ್ನಡ ಚಲನಚಿತ್ರಗಳು:-
ಕ್ರ.ಸಂ. | ಫ಼ಿಲಂ ಹೆಸರು/ಇಸವಿ | |
೧ | ಸುಭದ್ರಾ [ಕನ್ನಡ+ತೆಲುಗು] / ೧೯೪೧ | |
೨ | ಹೇಮರೆಡ್ಡಿ ಮಲ್ಲಮ್ಮ / ೧೯೪೫ | |
೩ | ಭಕ್ತ ಕುಂಬಾರ / ೧೯೪೯ | |
೪ | ಗುಣಸಾಗರಿ / ೧೯೫೩ | |
೫ | ಮಹಾಕವಿ ಕಾಳಿದಾಸ / ೧೯೫೫ | |
೬ | ಆಷಾಢಬೂತಿ / ೧೯೫೫ | |
೭ | ಪಂಚರತ್ನ / ೧೯೫೬ | |
೮ | ಜಗಜ್ಯೋತಿ ಬಸವೇಶ್ವರ / ೧೯೫೯ | |
೯ | ಕಠಾರಿವೀರ / ೧೯೬೬ |
೧೦ | ಸದಾನಂದ / ೧೯೭೯ |

ಕುಮಾರಕವಿ ನಟರಾಜ್[೯೦೩೬೯೭೬೪೭೧]
ಬೆಂಗಳೂರು-೫೬೦೦೭೨