ಚಾಮರಾಜನಗರ: ತಾಲೂಕಿನ ಕೊತ್ತಲವಾಡಿ ಗ್ರಾಮಪಂಚಾಯಿತಿ ಉಪಾಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಸತ್ಯಾನಂದಮೂರ್ತಿ ಆಯ್ಕೆಯಾದರು.
ಸೋಮವಾರ ಗ್ರಾಮದ ಗ್ರಾಮಪಂಚಾಯಿತಿ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಉಪಾಧ್ಯಕ್ಷ ಸ್ಥಾನಕ್ಕೆ ಸತ್ಯಾನಂದಮೂರ್ತಿ, ಮೋಹನ್ಕುಮಾರ್(ಪ್ರಜ್ವಲ್) ನಾಮಪತ್ರ ಸಲ್ಲಿಸಿದ್ದರು.
ಚುನಾವಣೆಯಲ್ಲಿ ಕೆ.ಎಸ್.ಸತ್ಯಾನಂದಮೂರ್ತಿ ೧೨ ಮತಪಡೆದರೆ ಮೋಹನ್ಕುಮಾರ್(ಪ್ರಜ್ವಲ್) ೭ ಮತಪಡೆದರು.
೧೨ ಮತಪಡೆದ ಕೆ.ಎಸ್.ಸತ್ಯಾನಂದಮೂರ್ತಿ ಅವರು ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಪಂಚಾಯತ್ ರಾಜ್ ಇಲಾಖೆ ಅಧಿಕಾರಿ ಮಂಜುನಾಥ್ ಘೋಷಣೆ ಮಾಡಿದರು.
ಇದೇವೇಳೆ ಗ್ರಾಮದ ಮುಖಂಡರಾದ ಸೋಮಲಿಂಗಪ್ಪ, ತಾಪಂ ಮಾಜಿಸದಸ್ಯ ಬಾಲಚಂದ್ರಮೂರ್ತಿ, ಬಸವರಾಜು, ಗ್ರಾಪಂ ಸದಸ್ಯರು ನೂತನ ಉಪಾಧ್ಯಕ್ಷರನ್ನು ಅಭಿನಂದಿಸಿದರು.
