ಕೆ ಎಂ ಪ್ರವೀಣ್ ಕುಮಾರ್ ಚಾರಿಟಬಲ್ ಟ್ರಸ್ಟ್ ಹಾಗೂ ಶಾರದಾದೇವಿನಗರ ಹಿತರಕ್ಷಣಾ ವೇದಿಕೆ ವತಿಯಿಂದ ಶಾರದಾದೇವಿ ನಗರದ ವೃತ್ತದಲ್ಲಿ ರಾಮಕೃಷ್ಣ ಪರಮಹಂಸ ರವರ ಪತ್ನಿ ಶಾರದಾ ಮಾತೆ ಯ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಶಾರದಾದೇವಿ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು
ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದ ಹಿರಿಯ ಸಮಾಜ ಸೇವಕರಾದ ರಘುರಾಂ ವಾಜಪೇಯಿ
ಸ್ವಾಮಿ ವಿವೇಕಾನಂದರ ಆಧ್ಯಾತ್ಮಿಕ ಚಿಂತನೆಗಳಿಗೆ ಶಾರದಾ ಮಾತೆ ಅವರು ಪ್ರೇರಣೆ. ಆದರೆ ಹಲವರಿಗೆ ಶಾರದಾ ಮಾತೆಯ ಪರಿಚಯವಿಲ್ಲ .
ಸ್ವಾಮಿ ವಿವೇಕಾನಂದರು ಷಿಕಾಗೋದಲ್ಲಿನ ನಡೆದ ಸರ್ವಧರ್ಮ ಸಮ್ಮೇಳನದಲ್ಲಿ ಮಾಡಿದ ಭಾಷಣ ಭಾರತದ ಚಿತ್ರಣ ಬದಲಿಸಿತ್ತು. ಸ್ವಾಮಿ ವಿವೇಕಾನಂದರ ಹಲವು ವೈಚಾರಿಕೆ ಚಿಂತನೆಗಳಿಗೆ ಶಾರದ ಮಾತೆ ಸ್ಪೂರ್ತಿಯಾಗಿದ್ದರು. ವಿವೇಕಾನಂದರು ಇಂದಿಗೂ ಪ್ರಸ್ತುತ. ಯುವಕರು ಅವರ ವಿಚಾರಗಳನ್ನು ಅಳವಡಿಸಿಕೊಳ್ಳಬೇಕಿದೆ. ವಿವೇಕಾನಂದರ ವಿಚಾರಗಳನ್ನು ಜನರಲ್ಲಿ ಜಾಗೃತಿ ಮೂಡಿಸಲು ನಗರದಲ್ಲಿ ದೇಶಾದ್ಯಂತ ರಾಮಕೃಷ್ಣ ಆಶ್ರಮ ಸ್ಥಾಪಿಸಲಾಗಿದೆ.
ಚಾಮುಂಡೇಶ್ವರಿ ಬಿಜೆಪಿ ನಗರ ಮಂಡಲ ಅಧ್ಯಕ್ಷರು ಹಾಗೂ ಶಾರದಾದೇವಿ ನಗರ ಹಿತರಕ್ಷಣಾ ವೇದಿಕೆ ಅಧ್ಯಕ್ಷರು ಬಿ ಎಂ ರಘು ಮಾತನಾಡಿ “ವಿವೇಕಾನಂದನಗರ, ರಾಮಕೃಷ್ಣನಗರದ ವೃತ್ತಗಳಲ್ಲಿರುವಂತೆ ಶಾರದಾದೇವಿನಗರದಲ್ಲಿಯೂ ಶಾರದಾಮಾತೆಯ ಪ್ರತಿಮೆ ನಿರ್ಮಾಣವಾಗಬೇಕು, ತನ್ಮೂಲಕ ಮೂವರು ಮಹನೀಯರನ್ನು ಕೊಡುಗೆಯನ್ನು ಶಾಶ್ವತವಾಗಿ ನೆನೆಯುವ ಕೆಲಸವಾಗುತ್ತದೆ ಎಂದು ತಿಳಿಸಿದರು
ನಂತರ ಮಾತನಾಡಿದ ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿ ಟಿ ಪ್ರಕಾಶ್ ಇಂದಿನ ಸ್ತ್ರೀಯರು ಕೇವಲ ಬಾಹ್ಯ ಬೆಳವಣಿಗೆಗೆ ಗಮನಕೊಡುತ್ತಿದ್ದು, ಆಂತರಿಕ ಸಂವೇದನೆ ಮತ್ತು ಮೌಲ್ಯಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಪ್ರಾಚೀನ ಮತ್ತು ಆಧುನಿಕ ಇವೆರಡಕ್ಕೂ ಆದರ್ಶದಂತಿರುವ ಮಾತೆ ಶಾರದಾದೇವಿಯವರ ಸಂದೇಶಗಳನ್ನು ಅಳವಡಿಸಿಕೊಂಡಲ್ಲಿ ತಮ್ಮ ವೈಯಕ್ತಿಕ, ಕೌಟುಂಬಿಕ, ಸಮಾಜಿಕ ಜೀವನದಲ್ಲಿ ಶಾಂತಿ–ಆನಂದ ಪಡೆಯಲು ಸಾಧ್ಯ’ ಎಂದರು.
ಪ್ರತಿಯೊಬ್ಬ ಆಧುನಿಕ ಸ್ತ್ರೀ, ನಮ್ಮ ಭಾರತೀಯ ಸಂಸ್ಕೃತಿ ಮತ್ತು ಸ್ತ್ರೀ ಆದರ್ಶವನ್ನು ಎಂದಿಗೂ ಕಡೆಗಣಿಸಬಾರದು. ಭೋಗಭೂಮಿಯಾದ ಪಾಶ್ಚಿಮಾತ್ಯ ದೇಶದ ಸ್ತ್ರೀಯು ಆದರ್ಶ ಪತ್ನಿಯಾದರೆ, ಯೋಗ ಭೂಮಿಯಾದ ಭಾರತೀಯ ಸ್ತ್ರೀಯು ಆದರ್ಶ ಮಾತೆ’
ಸಾಮಾಜಿಕ ಪರಿವರ್ತನೆಗೆ ಮಹಿಳೆಯರು ಮನಸ್ಸು ಮಾಡಬೇಕು. ಭೂಮಿ, ನದಿಗಳನ್ನು ಸ್ತ್ರೀ ರೂಪದಲ್ಲಿ ಕಂಡು ಆರಾಧಿಸುವುದಕ್ಕೆ ಮಾತೃವಾತ್ಸಲ್ಯವೇ ಕಾರಣ ಎಂದರು.ಇದೇ ಸಂದರ್ಭದಲ್ಲಿಪರಮಪೂಜ್ಯ ಶ್ರೀ ಇಳೈ ಆಳ್ವಾರ್ ಸ್ವಾಮೀಜಿ , ಹಿರಿಯ ಸಮಾಜ ಸೇವಕರಾದ ಕೆ ರಘುರಾಂ ವಾಜಪೇಯಿ,ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿ ಟಿ ಪ್ರಕಾಶ್ , ಬಿಜೆಪಿ ಚಾಮುಂಡೇಶ್ವರಿ ನಗರ ಮಂಡಲ ಅಧ್ಯಕ್ಷರಾದ ಬಿ ಎಂ ರಘು ,ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಸದಸ್ಯರಾದ ಲಕ್ಷ್ಮೀದೇವಿ ,ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕರಾದ ಗಿರೀಶ್ ,ಕರ್ನಾಟಕ ಸರ್ಕಾರದ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ನಿರ್ದೇಶಕರಾದ ಎಂ ಆರ್ ಬಾಲಕೃಷ್ಣ, ಮೈಸೂರು ಬ್ರಾಹ್ಮಣ ಯುವ ವೇದಿಕೆ ಅಧ್ಯಕ್ಷರಾದ ಎಚ್ ಎನ್ ಶ್ರೀಧರ್ ಮೂರ್ತಿ ,ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷರಾದ ವಿಕ್ರಂ ಅಯ್ಯಂಗಾರ್ ,ಅಜಯ್ ಶಾಸ್ತ್ರಿ , ರಾಕೇಶ್ ಭಟ್ ,ರಾಕೇಶ್ ಕುಂಚಿಟಿಗ, ಎಸ್ ಎನ್ ರಾಜೇಶ್ ,ಶಾರದಾದೇವಿ ನಗರದ ಹಿತರಕ್ಷಣಾ ವೇದಿಕೆಯ ಸದಸ್ಯರುಗಳಾದ ,ಎಚ್ ಜಿ ರಾಜಮನಿ ,ಕೆ ಎಂ ಪುಟ್ಟಸ್ವಾಮಿ, ಚಿಕ್ಕಣ್ಣ ,ವಿನೋದ್, ಶುಭಶ್ರೀ,ಶಶಿಕಾಂತ್, ರಾಜಶೇಖರ್,ಸುಚೀಂದ್ರ , ಚಕ್ರಪಾಣಿ ,ಹಾಗೂ ಇನ್ನಿತರರು ಹಾಜರಿದ್ದರು