ಕೂಲಿ ಕಾರ್ಮಿಕರು ಕೆಲಸ ಬಿಟ್ಟು ಆಹಾರ ಪಡಿತರ ಪಡೆಯಲು ದೂರದ ಊರುಗಳಿಗೆ  ಅಲೆಯುವುದನ್ನು ತಪ್ಪಿಸುವ ಉದ್ದೇಶದಿಂದ ತಮ್ಮ ತಮ್ಮ ಗ್ರಾಮಗಳಲ್ಲಿ ಪಡಿತರ ಉಪ ಕೇಂದ್ರವನ್ನು ತೆರೆಯಲಾಗುತ್ತಿದೆ ಎಂದು ಶಾಸಕ ಕೆ. ಮಹದೇವ್ ತಿಳಿಸಿದರು.


  ಪಿರಿಯಾಪಟ್ಟಣ ತಾಲ್ಲೂಕಿನ ತರಿಕಲ್ ಗ್ರಾಮದಲ್ಲಿ   ಪಡಿತರ  ಉಪಕೇಂದ್ರವನ್ನು ಗುರುವಾರ  ಉದ್ಘಾಟಿಸಿ ಮಾತನಾಡಿ ಕಳೆದ 4 ವರ್ಷಗಳಲ್ಲಿ ತಾಲ್ಲೂಕಿನಲ್ಲಿ  40 ಪಡಿತರ ಉಪಕೇಂದ್ರಗಳನ್ನು ಉದ್ಘಾಟಿಸಿದ್ದೇನೆ.ಇದು ಸಾರ್ವಜನಿಕರಿಗೆ ಅನುಕೂಲವಾಗ ಬೇಕು ಎಂದರು.


  ಸಾರ್ವಜನಿಕರು ಸರ್ಕಾರಿ ಬೀಳು, ಸರ್ಕಾರಿ ಭೂಮಿ, ಸರಕಾರಿ ಗೋಮಾಳ  ಜಮೀನುಗಳಲ್ಲಿ ಅಕ್ರಮವಾಗಿ ಮನೆ ನಿರ್ಮಿಸಿಕೊಂಡಿದ್ದಾರೆ 94 ಸಿ ನಲ್ಲಿ ಸಕ್ರಮಗೊಳಿಸಲಾಗುವುದು.ಮಾರ್ಚ್ 31 ಒಂದರ ಒಳಗೆ  ಕಂದಾಯ ಇಲಾಖೆಗೆ ದಾಖಲಾತಿ ಸಲ್ಲಿಸುವಂತೆ ತಿಳಿಸಿದರು. 


ಕಳೆದ 40  ವರ್ಷಗಳಲ್ಲಿ ತಾಲ್ಲೂಕಿನಲ್ಲಿ ಆಗದ ಅಭಿವೃದ್ಧಿ ಕೆಲಸಗಳನ್ನು  4 ವರ್ಷಗಳಲ್ಲಿ ಅಭಿವೃದ್ಧಿ ಮಾಡಿದ್ದೇನೆ.ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನನ್ನನ್ನು ಮತ್ತೊಮ್ಮೆ ಆಯ್ಕೆ ಮಾಡುವಂತೆ ಮನವಿ ಮಾಡಿದರು.  

 ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಯಾಸ್ರಿಪ್ ಪಾಷಾ, ಆಹಾರ ಶಿರಸ್ತೇದಾರ್ ಸಣ್ಣಸ್ವಾಮಿ, ಆಹಾರ ನಿರೀಕ್ಷಕ ಮಂಜುನಾಥ್ , ಜಿಲ್ಲಾ ಸಹಕಾರ ಬ್ಯಾಂಕ್ ನಿರ್ದೇಶಕ ರವಿ , ತಾಲೂಕು ಜೆಡಿಎಸ್ ಅಧ್ಯಕ್ಷ ಅಣ್ಣಯ್ಯ ಶಟ್ಟಿ, ಕಂದಾಯ ನಿರೀಕ್ಷಕ ಪ್ರದೀಪ್, ಪಿಡಿಒ ನಾರಾಯಣ್,  ತಾಲೂಕು ಪಂಚಾಯಿತಿ ಮಾಜಿ ಸದಸ್ಯ ರಘುನಾಥ್ ,ಗ್ರಾಮ ಪಂಚಾಯಿತಿ ಸದಸ್ಯ ಆನಂದನಗರ ಗಣೇಶ್, ಕುಬೇರ್, ಎಂಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ಶಿವಕುಮಾರ್ ,ಚಿಕ್ಕ ನೇರಳೆ  ಪ್ರಾಥಮಿಕೃಷಿ ಪತ್ತಿನ ಸಹಕಾರ ಸಂಘದ ಸಿಇಒ ಮಂಜುನಾಥ್ ‘ಜೆಡಿಎಸ್ ಯುವ ಮುಖಂಡ ಪುಟ್ಟಸ್ವಾಮಿ, ಸುಂದ್ರೇಗೌಡ, ಸುರೇಶ್  ಹಾಜರಿದರು.