ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ  ತಾಲ್ಲೂಕಿನ  ಬೆಟ್ಟದಪುರ ಗ್ರಾಮದ ದನಗಳ ಜಾತ್ರೆಯಲ್ಲಿ ಪ್ರಗತಿಪರ ರೈತ ಹರದೂರು ಮಲ್ಲೇಗೌಡ ಸುಮಾರು  1ಲಕ್ಷದ 50 ಸಾವಿರ ಮೌಲ್ಯದ ಹೋರಿಗಳನ್ನು ವಾದ್ಯಗೋಷ್ಠಿಯೊಂದಿಗೆ ಜಾತ್ರೆಯಲ್ಲಿ  ಪ್ರದರ್ಶನ ನಡೆಸಿದರು.


ಈ ಸಂದರ್ಭದಲ್ಲಿ ಮಾಜಿ ಸಚಿವ ಕೆ ವೆಂಕಟೇಶ್  ಮಾತನಾಡಿ ರೈತರುಗಳು ಕೃಷಿ ಚಟುವಟಿಕೆಗಳಿಗೆ  ತಮಗೆ ಇಷ್ಟವಾದ  ರಾಸುಗಳನ್ನು ಕೊಳ್ಳಲು  ದನದ ಜಾತ್ರೆಗಳು ಅನುಕೂಲವಾಗುತ್ತವೆ ಎಂದರು. ಪ್ರಗತಿಪರ ರೈತ ಹರದೂರು ಮಲ್ಲೇಗೌಡ ಮಾಧ್ಯಮದೊಂದಿಗೆ ಮಾತನಾಡಿ ಕಳೆದ 8 ವರ್ಷಗಳಿಂದ ಹೋರಿಗಳನ್ನು ಸಾಕುತ್ತಾ ಬಂದಿದ್ದೇವೆ .ಸರ್ಕಾರವು  ಮೂಲಭೂತ ಸೌಕರ್ಯ ಒದಗಿಸಿ ದನಗಳ ಜಾತ್ರೆ ಆಯೋಜನೆ ಮಾಡಬೇಕು ಕೊರೋನಾ ಇರುವುದರಿಂದ ಸರ್ಕಾರ ಯಾವುದೇ ಮೂಲಭೂತ ಸೌಕರ್ಯ ಒದಗಿಸಿಲ್ಲ ಎಂದರು . ಹೋರಿಗಳಿಗೆ ಹೂವಿನಿಂದ ಅಲಂಕಾರ ಮಾಡಿದ್ದು  ಭಾರೀ ಜಾನುವಾರು ಪ್ರಿಯರ ಗಮನ ಸೆಳೆಯಿತು.

ಕೃಷಿಕರಾದ ಜಾನುವಾರು ಪ್ರಿಯರು ಭಾರೀ ಕುತೂಹಲದಿಂದ ಪ್ರದರ್ಶನ ವೀಕ್ಷಿಸಿದರು.


 .ಈ ಸಂದರ್ಭದಲ್ಲಿ  ರೈತರಾದ   ಮೈಲಾರಿಗೌಡ ,ಗೋವಿಂದೇಗೌಡ, ಸಣ್ಣ ಕಾಳೇಗೌಡ, ಮಲ್ಲೇಶ್, ಪುಟ್ಟರಾಜು , ಅನಿತಮ್ಮ ದಿಲೀಪ್ , ಸಾರ್ವಜನಿಕರು ಹಾಜರಿದ್ದರು .