ಚಾಮರಾಜನಗರ: ತಾಲೂಕಿನ ಹರದನಹಳ್ಳಿ ಪ್ರಾಥಮಿಕ ಕೃಷಿಪತ್ತಿನಸಹಕಾರ ಸಂಘದ ಅಧ್ಯಕ್ಷ, ಉಪಾಧ್ಯಕ್ಚ ಸ್ಥಾನಕ್ಕಾಗಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಆರ್.ವೆಂಕಟೇಶ್, ಉಪಾಧ್ಯಕ್ಷ ಬಂಗಾರಶೆಟ್ಟಿ ಚಾಮರಾಜನಗರ ಕ್ಷೇತ್ರದ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರನ್ನು ನಗರದ ನಿವಾಸದಲ್ಲಿ ಭೇಟಿಮಾಡಿ ಅಭಿನಂದಿಸಿದರು.
ಇದೇವೇಳೆ ತಾ,ಪಂ.ಮಾಜಿ ಸದಸ್ಯ ಹೆಚ್,ಎಂ,ಮಹದೇವಶೆಟ್ಟಿ ನೇತೃತ್ವದಲ್ಲಿ ಸಂಘದ ಅಧ್ಯಕ್ಷ. ಉಪಾಧ್ಯಕ್ಷರು ಸಂಘದ ನೂತನ ಕಟ್ಟಡ ನಿರ್ಮಾಣಕ್ಕೆ ಸರಕಾರದಿಂದ ಸೂಕ್ತ ಅನುದಾನ ಮಂಜೂರು ಮಾಡಿಸಬೇಕು ಎಂಬ ಬೇಡಿಕೆ ಸೇರಿದಂತೆ ಸಂಘದ ಅಭಿವೃದ್ಧಿಗೆ ಸಂಬಂಧಪಟ್ಟ ಕೆಲವಿಚಾರಗಳನ್ನು ಶಾಸಕರ ಜತೆ ಚರ್ಚಿಸಿದರು.
ಸಂಘದ ನೂತನ ನಿರ್ದೇಶಕರಾದ ಎಚ್.ಎಂ.ಮಹದೇವಶೆಟ್ಟಿ, ಪಿ.ರವಿಕುಮಾರ್, ಎಂ.ರಾಜಣ್ಣ, ಬಂಗಾರನಾಯಕ, ಎಸ್.ಪುಟ್ಟರಾಜಶೆಟ್ಟಿ, ಎಂ.ರವಿಕುಮಾರ್, ಷಪೀಅಹಮದ್, , ಹರದನಹಳ್ಳಿ ಎಂಪಿಎಸ್ ಅಧ್ಯಕ್ಷ ರಂಗಸ್ವಾಮಿನಾಯಕ, ಗ್ರಾಪಂ ಸದಸ್ಯ ಮಂಜುನಾಥ್, ಪುಟ್ಟರಾಜು, ಕೇಶವಮೂರ್ತಿ, ಶಿವನಂಜಶೆಟ್ಟಿ, ಕಲೀಂಉಲ್ಲಾ, ಆರ್.ರಮೇಶ್,ನವೀನ್‌ಕುಮಾರ್, ಮುಖಂಡರಾದ ರಾಮಚಂದ್ರನಾಯಕ ಜಯಕುಮಾರ್,ಮಾಜಿ ತಾಪಂ,ಸದಸ್ಯ ರಾಜೇಶ್, ಗ್ರಾಪಂ ಮಾಜಿಅಧ್ಯಕ್ಷ ಕೃಷ್ಣ ನಾರಾಯಣ್, ಚನ್ನಬಸವಶೆಟ್ಟಿ.ಕೃಷ್ಣರಾಜು ರವಿ, ನಾಗೇಶ್ ಇತರರು ಇದ್ದರು.