ಹ್ಯಾಪಿ ನ್ಯು ಇಯರ್ 2024!: ಯಾರಿಗೆ?ಏಕೆ?ಹೊಸ ವರ್ಷ ಆಚರಿಸಬೇಕು ಯಾರು? ಏಕೆ? ಹೇಗೆ? ಎನ್ನುವ ಜಿಜ್ಞಾಸೆ ಬಗ್ಗೆ ಒಂದು ಮುಕ್ತಾವಲೋಕನ ಹಾಗೂ ಸತ್ಯಾನ್ವೇಷಣೆ ಈ ಲೇಖನದಲ್ಲಿದೆ!
ಹೊಸವರ್ಷ ಯಾರಿಗೆ?:-
ಕ್ರಿಸ್ತಶಕ 2024 ಜನವರಿ-1 ಹೊಸ ವರ್ಷದ ಆರಂಭವನ್ನು ಕ್ರೈಸ್ತರು ಆಚರಿಸುವುದು ಅವರ ಸಂಪ್ರದಾಯ, ಸಂಸ್ಕೃತಿ! ಕ್ರೈಸ್ತ ಧರ್ಮವು ಮಧ್ಯ ಪೂರ್ವ ಏಷ್ಯದಲ್ಲಿ ಹುಟ್ಟಿ, ಐರೋಪ್ಯ ರಾಷ್ಟ್ರಗಳಲ್ಲಿ ಹೆಚ್ಚು ಬೆಳೆದು, ಬ್ರಿಟನ್ ಸಾಮ್ರಾಜ್ಯದಲ್ಲಿ ಬೇರೂರಿ, ಬ್ರಿಟಿಷರ ಮೂಲಕ ಪ್ರಪಂಚ ದಾದ್ಯಂತ ಪಸರಿಸಿತು. ಪ್ರತಿಯೊಬ್ಬ ಕ್ರೈಸ್ತನು ಸಂಭ್ರಮದಿಂದ ಜನವರಿ 1 ಹೊಸ ವರ್ಷ ಆಚರಿಸುವುದು ಸಹಜ ಮತ್ತು ಪ್ರಶ್ನಾತೀತ! ಆದರೆ ಅನ್ಯ ಧರ್ಮದವರು ಅವರವರ ಸಂಸ್ಕೃತಿ ಸಂಪ್ರದಾಯ ಪದ್ಧತಿ ಮರೆತು ಕ್ರೈಸ್ತರ ಹೊಸ ವರ್ಷವನ್ನೆ ತಮ್ಮ ಹೊಸ ವರ್ಷವೆಂದು ಕ್ರೈಸ್ತರಿಗಿಂತ ಗ್ರ್ಯಾಂಡಾಗಿ ಆಚರಿಸುವುದು ಎಷ್ಟು ಸರಿ? ವ್ಯಾಪಾರಕ್ಕೆಂದು ಆಗಮಿಸಿದ ಪೋರ್ಚುಗೀಸರು ಡಚ್ಚರು ಫ್ರೆಂಚರು ಬ್ರಿಟಿಷರು ಇಲ್ಲೆ ನೆಲೆಸುವ ಸಲುವಾಗಿ ಭಾರತೀಯರನ್ನು ಒಡೆದು ಆಳುವ [ಅ]ನೀತಿ ಅನುಸರಿಸಿದ್ದಲ್ಲದೆ 400ವರ್ಷದ ಆಳ್ವಿಕೆಯಲ್ಲಿ ದೇಶದಾದ್ಯಂತ ಕ್ರೈಸ್ತ ಧರ್ಮವನ್ನು ಬಲ[ವಂತ]ವಾಗಿ ಹೇರಿದರು?
ಈಸ್ಟ್ ಇಂಡಿಯಾ ಕಂಪನಿ ಕಾಲದಲ್ಲಿ ಮಾತ್ರವಲ್ಲದೆ ಸ್ವತಂತ್ರ ಭಾರತದಲ್ಲು ಸೌರಾಷ್ಟ್ರದಿಂದ-ಬಂಗಾಳದವರೆಗೂ ಕಾಶ್ಮೀರದಿಂದ-ಕನ್ಯಾಕುಮಾರಿವರೆಗೂ ಅಲ್ಪಸಂಖ್ಯಾತ ಹಿಂದುಳಿದವರ್ಗ ಹಾಗು ದಲಿತವರ್ಗದ ಬಡವರಿಗೆ ಆಸೆ ಆಮಿಷವೊಡ್ಡಿ ಮತಾಂತರ ಕಾರ್ಯ ಕೈಗೊಳ್ಳಲು ಕ್ರೈಸ್ತ ಮಿಶನರಿಗಳು ಹುಟ್ಟಿಕೊಂಡು ಮುಗ್ಧ ಭಾರತೀಯರನ್ನು ದುರುಪಯೋಗ ಪಡಿಸಿಕೊಂಡವು! ಕಳೆದ 50 ವರ್ಷದಿಂದೀಚೆಗೆ ಭಾರತದಲ್ಲಿ ವಿಶೇಷವಾಗಿ ಕೇರಳ ರಾಜ್ಯದಲ್ಲಿ ನಿರಂತರ ಮತಾಂತರ ನಡೆಯುತ್ತಿದ್ದು ಈ ದೇವರನಾಡಲ್ಲಿ ಹಿಂದು-ಮುಸ್ಲಿಂ ಕ್ರೈಸ್ತ ಧರ್ಮೀಯರು ಸಮಾನ ಸಂಖ್ಯೆಯಲ್ಲಿ ಇದ್ದಾರಂತೆ?
ದೇಶದಲ್ಲಿರುವ ವಿವಿಧ ಧರ್ಮಗಳಲ್ಲಿ ಕ್ರೈಸ್ತ ಧರ್ಮವೂ ಇದ್ದು ದೇಶದಲ್ಲಿ ಆಚರಿಸಲ್ಪಡುವ ಹಬ್ಬಗಳಲ್ಲಿ ಕ್ರಿಸ್ಮಸ್-ನ್ಯು- ಇಯರ್ ಹಬ್ಬವೂ ಒಂದಾಗಿದ್ದು ಭಾರತವು ಸರ್ವ ಧರ್ಮ ಸಹಿಷ್ಣುತೆಯಲ್ಲಿ, ಕೂಡಿ ಬಾಳುವುದರಲ್ಲಿ ಪ್ರಪಂಚಕ್ಕೆ ರೋಲ್ ಮಾಡೆಲ್ ಅ್ಯಂಡ್ ದಿಬೆಸ್ಟ್ ದೇಶವೆಂದು ಇವತ್ತಿಗೂ ಸಾಬೀತು ಪಡಿಸುತ್ತಿದೆ! ರಾಜ್ಯದಾದ್ಯಂತ ಕ್ರೈಸ್ತ ಹೊಸ ವರ್ಷ ಆಚರಣೆಯು ಪ್ರಮುಖ ಸ್ಥಾನಮಾನ ಪಡೆದ ಉಧಾಹರಣೆ ಬಹಳ ಕಾಲ ಇರಲಿಲ್ಲ. ಒಂದು ವೇಳೆ ಇದ್ದರೂ ಆ ಕಾಲಕ್ಕೆ ಬ್ರಿಟಿಷ್ ಅಧಿಕಾರಿಗಳ ಆಡಳಿತ ಕೇಂದ್ರವಾಗಿದ್ದ ಬೆಂಗಳೂರು ಕಂಟೋನ್ಮೆಂಟಲ್ಲಿ ಮಾತ್ರವಿತ್ತು? ಸ್ವತಂತ್ರಾನಂತರ ರಾಜ್ಯದ ರಾಜಧಾನಿಯೂ ಐಟಿಬಿಟಿ ನಗರವೂ ಆಗಿರುವುದರಿಂದ
ಬೆಂಗಳೂರಿನಲ್ಲಿ ಕ್ರಿಸ್ಮಸ್ ನ್ಯೂ ಇಯರ್ ಆಚರಣೆ ಮಾಡುವವರ ಸಂಖ್ಯೆಯೂ ಅಧಿಕ ಆಗಿರಬಹುದು? ಇಂತಹ ಜನಸಮೂಹ
1992ರಿಂದ ಅದರಲ್ಲೂ ಮಿಲೇನಿಯಂ ಇಯರ್ 2000ನೇ ಇಸವಿಯಿಂದ ನಿಧಾನವಾಗಿ ಆದರೆ ನಿಖರವಾಗಿ ಬೆಂಗಳೂರು ಮಂಗಳೂರು ಕೋಲಾರ ಮೈಸೂರು ಮುಂತಾದ ಪ್ರಮುಖ ನಗರ ಹಾಗೂ ಜಿಲ್ಲಾ ಕೇಂದ್ರಗಳಲ್ಲು ಕನ್ವರ್ಟೆಡ್ ಕ್ರಿಶ್ಚಿಯನ್ಸ್ ಸಂಖ್ಯೆಯು ಗಣನೀಯವಾಗಿ ಹೆಚ್ಚುತ್ತಿದೆ. ಆದ್ದರಿಂದ ಕ್ರೈಸ್ತ ಹೊಸವರ್ಷ ಆಚರಣೆ ಹೆಚ್ಚೆಚ್ಚು ಜನಪ್ರಿಯವಾಗುತ್ತಿದೆ!
ಹೊಸ ವರ್ಷಾಚರಣೆ ಆಚರಿಸುತ್ತಿದ್ದ ಒಂದು
ಗುಂಪನ್ನು ವಿಚಾರಿಸಿದಾಗ ತಿಳಿದ ವಿಚಿತ್ರ: “ನಾವು ಕನ್ವರ್ಟೆಡ್ ಕ್ರಿಶ್ಚಿಯನ್ಸ್? ಬೈಬಲ್ ಪೂರ್ತಿ ಓದಿಲ್ಲ, ನಮ್ಗೆ ಅರ್ಥವೆ ಆಗಲ್ಲ, ಸಂಪ್ರದಾಯ ಪದ್ಧತಿ ಗೊತ್ತಿಲ್ಲ! ನ್ಯು ಇಯರ್ ಮಾಡ್ತಿರೋದು ನಮ್ ಖುಶಿಗೆ, ಜಾಲಿ ಯಾಗಿರಕ್ಕೆ?!” ಎಂದು ಆ ಗ್ಯಾಂಗ್ ಹೇಳಿದಾಗ ಆಶ್ಚರ್ಯವಾಯ್ತು! ಸ್ವಲ್ಪ ದೂರದಲ್ಲಿದ್ದ ಮತ್ತೊಂದು ಗುಂಪಿನ ಹುಡುಗರನ್ನು ವಿಚಾರಿಸಿದಾಗ ನಾವು ಕ್ರಿಶ್ಚಿಯನ್ಸ್ ಅಲ್ಲ! ಆದರೂ ನಮ್ಮ ಕ್ರಿಶ್ಚಿಯನ್ ಫ್ರೆಂಡ್ಸ್ ಗೋಸ್ಕರ ಅವರ್ಜೊತೆ ನಾವೂ ಡ್ಯಾನ್ಸ್ ಆಡ್ತೀವಿ ಕುಡಿದುತಿಂದುಮಜಾಮಾಡ್ತೀವಿ”
ಎಂದಾಗ ಶಾಕ್ ಆಯ್ತು! ಇಂಥ ಢೋಂಗಿಗಳು ಹೊಸ ವರ್ಷ ಆಚರಿಸುವುದು ಕೇವಲ ಫ್ಯಾಷನ್ಗೆ ಕುಂಟುನೆಪಕ್ಕೆ ಎಂಬ ಕಟು ಸತ್ಯ ಕ್ರೈಸ್ತ ಬಾಂಧವರಿಗೂ ತಿಳಿದಿದೆ?!
ಅನ್ಯ ಧರ್ಮದವರು ಅವರವರ ನ್ಯು ಇಯರ್ ಆಚರಿಸುವಂತೆ ಹಿಂದೂಗಳು ಸಹ ಸಂಕ್ರಾಂತಿ ಯುಗಾದಿ ದೀಪಾವಳಿ ಹಬ್ಬದಂದು ಹೊಸವರ್ಷ ಆಚರಿಸುವುದು ಸರಿ! ‘ವಿಶ್ ಯು ಹ್ಯಾಪಿ ನ್ಯು ಇಯರ್’ ಹೇಳುವಂತೆ ವಿಶ್ ಯು ಹ್ಯಾಪಿ ಸಂಕ್ರಾಂತಿ-ಯುಗಾದಿ-ದೀಪಾವಳಿ ಎಂದು ಹೇಳುವುದು ಸೂಕ್ತ, ಸಮಂಜಸ? ಬೇರೆಬೇರೆ ಧರ್ಮದವರು ತಂತಮ್ಮ ಹೊಸ ವರ್ಷದಂದು ಎಲ್ಲರಿಗು ಸಿಹಿ ಹಂಚುತ್ತ ಶುಭಾಶಯ ಹೇಳುವುದು ವಾಡಿಕೆಯಾಗಿದ್ದು ಈ ಸದಾಚಾರವು ನಿರಂತರ ಮುಂದುವರೆದರೆ ಮಾತ್ರ, ಭಾರತದಲ್ಲಿ ಸರ್ವ ಧರ್ಮೀಯರು ಸ್ವಾ[ಧರ್ಮಾ]ಭಿಮಾನಿ ಆಗಿ ಬದುಕಲು ಅವಕಾಶವಿದ್ದು, ಶಾಂತಿ ನೆಮ್ಮದಿ ಮೂಡಿಸಿ “ವಿಭಿನ್ನತೆಯಲ್ಲು ಏಕತೆ” ಇದೆಯೆಂದು ಸಾಬೀತು ಪಡಿಸಲು ಸಾಧ್ಯ!
ಹೊಸ ವರ್ಷ ಏಕೆ ?:-
‘ಟೆನ್ ಕಮ್ಯಾಂಡ್ಮೆಂಟ್ಸ್’ ಪ್ರಚಾರಕ ‘ಮೋಸೆಸ್’ ನಂತರ 2023ವರ್ಷದ ಹಿಂದೆ ಡಿಸೆಂಬರ್ 24 ಮಧ್ಯರಾತ್ರಿ ಜೆರುಸೆಲಂ ಪಟ್ಟಣದಲ್ಲಿ ಜನಿಸಿದ ಯೇಸು ತನ್ನ ಪವಾಡದಿಂದ ಮೌಢ್ಯರನ್ನು ಆಕರ್ಷಿಸಿ ಯಶಸ್ವಿಯಾದ. ಗುಡ್ ಫ್ರೈಡೆಯಂದು ತನ್ನನ್ನು ಶಿಲುಬೆಗೆ ಏರಿಸಿದ ಶತ್ರುಗಳ ಬಗ್ಗೆ ದೇವರೆ ಅವರನ್ನು ಕ್ಷಮಿಸು ಎಂದು ವಿನಂತಿಸಿದ. ನಂತರ ಹೋಲಿಸ್ಯಾಟರ್ಡೆ ಯಂದು ಶವ ಸಂಸ್ಕಾರಗೊಂಡ ಮೇಲೆ ಈಸ್ಟರ್ ಸಂಡೆ ಸಾವು ಗೆದ್ದು ಎದ್ದು ಬಂದು ಕ್ರೈಸ್ತ ಧರ್ಮ ಸ್ಥಾಪಿಸಿದ!
ಕ್ರೈಸ್ತರಾದವರು ತಪ್ಪದೇ ಪ್ರತಿ ಭಾನುವಾರ ಪ್ರಾರ್ಥನೆ ಮಾಡುವಂತೆಯೂ ಪ್ರತಿವರ್ಷ ಡಿಸೆಂಬರ್ 25ರಿಂದ ಜನವರಿ1 ರವರೆಗೆ 8ದಿನವೂ ಕ್ರಿಸ್ಮಸ್ ಆಚರಿಸೋ ಮುನ್ನ ಇಡೀ ತಿಂಗಳು ಕೆರೊಲ್ಗೀತೆ ಹಾಡಲೂ, ತನ್ನ ಲಾಸ್ಟ್ ಸಪ್ಪರ್ ಗೆ ನೀಡಿದ್ದ ವೈನ್ ಅ್ಯಂಡ್ ಮೀಟ್ನ್ನು ಕ್ರೈಸ್ತರ ಮುಖ್ಯ ಆಹಾರವಾಗಿಸಿ, ಇದನ್ನೆ ಅತಿಥಿಗಳಿಗೂ ಬಡಿಸಿ ಸತ್ಕರಿಸಲೂ ತಿಳಿಸಿದ. ನೆರೆಹೊರೆಯನ್ನು ಪ್ರೀತಿಸಿ ಗೌರವಿಸಲೂ ಮತ್ತು ಎಲ್ಲ ಇರುವವರು, ಏನೂ ಇಲ್ಲದವರಿಗೆ ದಾನ ಮಾಡಲೂ ಸಹ ಬೋಧಿಸಿದ! ಅಂದಿನಿಂದ ಪ್ರತಿವರ್ಷ ಡಿಸೆಂಬರ್ 24ರ ಮಧ್ಯರಾತ್ರಿಇಂದ 31ರ ಮಧ್ಯರಾತ್ರಿ ವರೆಗೆ ಪ್ರತಿದಿನವೂ ಕ್ರಿಸ್ಮಸ್ ಆಚರಿಸಿ, ಜನವರಿ-1ರ ಹೊಸ ವರ್ಷವನ್ನು ಸ್ವಾಗತಿಸುತ್ತಾರೆ. ಬೈಬಲ್ನ ಹಳೆ ಒಡಂಬಡಿಕೆ ಮತ್ತು ಹೊಸ ಒಡಂಬಡಿಕೆ (OLD TESTAMENT & NEW TESTAMENT) ಗಳಲ್ಲು ಇದನ್ನೆ ಉಲ್ಲೇಖಿಸಿದ್ದು ಜನವರಿ-1 ಕ್ರೈಸ್ತರು ಹೊಸವರ್ಷ ಆಚರಿಸುವ ಪದ್ಧತಿ ಜಾರಿಯಲ್ಲಿದೆ.
“I came and saw under the Sun that the race is not to the swift; nor battle to the strong neither Yet bread to the wise, nor yet riches to men of understanding, nor yet favor to men of skill, but time and chance happenth to them all”
-OLD TESTAMENT
ಇದರ ಕನ್ನಡಾನುವಾದ: –
“ನಾನು ಬಂದನಂತರ ಸೂರ್ಯನ ಅಡಿಯಲ್ಲಿರುವ ಈ ಜಗತ್ತನ್ನು ಕಂಡಾಗ ನನಗೆ ಅರಿವಾದುದು: ಓಟದಲ್ಲಿ ಯಾವಾಗಲು ಗೆಲುವು ಸಾಧಿಸುವವರು ಕೇವಲ ವೇಗ ಪಡೆದವರಲ್ಲ; ಯುದ್ಧದಲ್ಲಿ ಯಾವಾಗಲು ಗೆಲುವು ಸಾಧಿಸುವವರು ಕೇವಲ ಬಲ ಇದ್ದವರಲ್ಲ. ಪ್ರಪಂಚದಲ್ಲಿ ಯಾವಾಗಲೂ ಅನ್ನ ದೊರಕುವುದು ಪಾಂಡಿತ್ಯ ಉಳ್ಳವರಿಗೆ ಮಾತ್ರವಲ್ಲ, ಅರಿತವರಿಗೆ ಮಾತ್ರವೆ ಧನಕನಕವಲ್ಲ, ನಿಪುಣರಿಗೆ ಮಾತ್ರ ಸಂಭಾವನೆಯಲ್ಲ. ಹಾಗಾಗಿ, ಸಮಯ ಮತ್ತು ಅವಕಾಶ ಪ್ರತಿಯೊಬ್ಬರಿಗೂ ದೊರಕುತ್ತದೆ -ಹಳೆ ಒಡಂಬಡಿಕೆ”
ಕ್ರೈಸ್ತ ಧರ್ಮಕ್ಕೂ ಮುಂಚೆ ಸಾವಿರಾರು ವರ್ಷಗಳ ಹಿಂದೆಯೇ ಗೀತಾಚಾರ್ಯನು ಭಗವದ್ಗೀತೆಯಲ್ಲಿ ಉಪದೇಶಿಸಿದ್ದು: ಪರೋಪಕಾರಾರ್ಥಪುಣ್ಯಾಯ, ಪಾಪಾಯ ಪರಪೀಡನಾಂ, ದುಷ್ಟಶಿಕ್ಷಣಾಂ ಶಿಷ್ಟರಕ್ಷಣಾಂ, ಯದಾಯದಾಹಿ ಧರ್ಮಸ್ಯಃ….ಧರ್ಮ ಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇಯುಗೇ.” ಎಂಬ ಶ್ಲೋಕದ ಭಾವಾರ್ಥವನ್ನೆ ಕಾಕತಾಳೀಯವೆಂಬಂತೆ? ಯೇಸುಕ್ರಿಸ್ತನ ಸುವಾರ್ತೆಯಲ್ಲೂ ಉಪದೇಶಿಸಲಾಗಿದೆ, ಹೀಗೆ :-
“ಎಲ್ಲವೂನಾನೆ, ನಾನೇ ಪುನರುತ್ಥಾನವೂ ಜೀವವೂಆಗಿದ್ದೇನೆ ನನ್ನಲ್ಲಿ ವಿಶ್ವಾಸ ಇಟ್ಟವರು ಸತ್ತರೂ ಬದುಕುವರು[ಯೋವಾನ್ನ:11:25]. ಆದಿಯಿಂದಲೂ ಲೋಕದಲ್ಲಿ ಹುಟ್ಟು ಕುರುಡಂಗೆ ದೃಷ್ಟಿ ನೀಡಿದ್ದನ್ನು ಯಾರೊಬ್ಬರು ಕೇಳಿದ್ದಿಲ್ಲ ಕಂಡಿದ್ದಿಲ್ಲ. ಯೇಸುಕ್ರಿಸ್ತನು ದೇವರಿಂದ ಬಂದವನಲ್ಲದಿದ್ದರೆ ಇಂಥದ್ದೇನೂ ಮಾಡಲು ಸಾಧ್ಯವಾಗುತ್ತಿರಲಿಲ್ಲ [ಯೋವಾನ್ನ:9:32-33]” ಯೇಸುವಿನ ಈ ಸುವಾರ್ತೆಗಳನ್ನು ಕ್ರಿಸ್ಮಸ್ ಅವಧಿಯಲ್ಲಿ ಅಳವಡಿಸಿಕೊಳ್ಳಲು ಟ್ರು ಕ್ರಿಶ್ಚಿಯನ್ ಪ್ರಯತ್ನಪಡುವನೆಂದೂ, ಕ್ರೈಸ್ತರ ಬೇಡಿಕೆಗಳನ್ನು ಯೇಸು ಈಡೇರಿಸುವನೆಂದೂ ನಂಬಿರುವ ಕ್ರೈಸ್ತರು ಜನವರಿ 1 ಕ್ರೈಸ್ತ ಹೊಸ ವರ್ಷ ಆಚರಿಸುವುದರಲ್ಲಿ ಅರ್ಥವಿದೆ! ಹಿಂದೂಗಳಿಗೆ ಹೊಸ ವರ್ಷ ಏಕೆ? ಹೇಗೆ? ಎಂಬ ಪ್ರಶ್ನೆ ಉದ್ಭವಿಸುವುದು ಸಹಜ? ಬದಲಿಗೆ ನಿಗಧಿತವಾದ ಸಂಕ್ರಾಂತಿ, ಯುಗಾದಿ, ದೀಪಾವಳಿಯಂದು ಹೊಸ ವರ್ಷ ಆಚರಿಸುವುದು ಸ್ವಾಭಾವಿಕ!
ಸತತ 8ದಿನ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸುವ ಹಿಂದೂ ಧರ್ಮದ ಬಗ್ಗೆ ಗೌರವ ನಂಬಿಕೆ ಭಕ್ತಿ ವೃದ್ಧಿಸಿಕೊಂಡು ನಮ್ಮದು ಅಲ್ಲದ ಜನವರಿ-1ರ ಆಕರ್ಷಣೆ ವ್ಯಾಮೋಹದಿಂದ ಅಥವಾ ಅನ್ಯರ ದಾಕ್ಷಿಣ್ಯದಿಂದ ಕ್ರೈಸ್ತ ಹೊಸವರ್ಷ ಆಚರಿಸುವುದರಲ್ಲಿ ಅರ್ಥವಿಲ್ಲ! ಆಯಾಯ ಧರ್ಮದ ಸಂಸ್ಕೃತಿ ಸಂಪ್ರದಾಯ ಹಬ್ಬ ಆಚರಣೆ ಅವರವರಿಗೆ ಅಗತ್ಯವೂ ಶ್ರೇಷ್ಠವೂ ಹೌದು! ಆದ್ದರಿಂದ ಭಾರತದಂಥ ದೇಶದಲ್ಲಿ ಎಲ್ಲರು ಸೇರಿ ಸದ್ಭಾವನೆಯಿಂದ ಕ್ರೈಸ್ತ ಹೊಸ ವರ್ಷ2024 ಸ್ವಾಗತಿಸುವುದರಲ್ಲಿ ಯಾವುದೇ ಅಭ್ಯಂತರವಿಲ್ಲ?!
ಹೊಸ ವರ್ಷ ಹೇಗೆ?ಆಚರಿಸಬಾರದು!:-
ಹೊಸವರ್ಷಾಚರಣೆ ಹೆಸರಲ್ಲಿ ಡೌಲು ಢಂಬಾಚಾರ ಮೋಸ ವಂಚನೆ ಸುಳ್ಳು ಕಳ್ಳತನ ಹಾದರ ದ್ರೋಹ ಇರಬಾರದು. ಅಧಿಕಾರ ಆಸ್ತಿ ಅಂತಸ್ತು ಸ್ನೇಹ ಸಂಬಂಧ ಅಗತ್ಯ ವಸ್ತುಗಳ ದುರುಪಯೋಗ ಇರಲೇಬಾರದು. ಅನ್ನ,ಬಟ್ಟೆ, ವಿದ್ಯೆ,ಸೇವೆ,ದಾನ,ಧರ್ಮ ಯಾವುದೂ ವೇಸ್ಟ್ ಮಾಡಬಾರದು. ಅಶ್ಲೀಲ ನೃತ್ಯ ಅಥವ ಅಸಹ್ಯ ಕುಣಿತ, ಕರ್ಕಶ ಸಂಗೀತ/ಆರ್ಕೆಷ್ಟ್ರ, ಮುಂತಾದ ಕೀಳು ಮನರಂಜನೆ ಇರಬಾರದು. ಮಕ್ಕಳು-ಮಹಿಳೆ-ವೃದ್ಧರೊಡನೆ ಅಸಭ್ಯವಾಗಿ ನಡೆದುಕೊಳ್ಳಬಾರದು.ದುಷ್ಟರ ಮತ್ತು ದುಶ್ಚಟದ ದಾಸರಾಗದೆ, ಡ್ರಗ್ಸ್, ಕಾಕ್ಟೇಲ್ ಪಾರ್ಟಿ, ವೀಲಿಂಗ್ ಮಾರಕಪಟಾಕಿ ಇತ್ಯಾದಿ ಪರಿಸರಮಾಲಿನ್ಯ ನಿಯಮಬಾಹಿರ ಹೇಯಕೃತ್ಯಕ್ಕೆ ಅವಕಾಶ ಇರಬಾರದು. ಕಾನೂನು-ಸುವ್ಯವಸ್ಥೆಗೆ ಧಕ್ಕೆಯಾಗುವಂತೆ, ಕೋಮುಗಲಭೆಗೆ ಅವಕಾಶನೀಡುವಂತೆ, ಅನ್ಯಧರ್ಮದವರನ್ನು ನಿಂದಿಸುವಂತೆ, ಸರ್ಕಾರಿ/ಖಾಸಗಿ/ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ-ನಷ್ಟಆಗುವಂತೆ ಆಚರಿಸ ಬಾರದು. ಆರ್ಥಿಕ ರಾಜಕೀಯ ಮಾನವ ಸಂಪನ್ಮೂಲ, ರಾಷ್ಟ್ರೀಯ ಅಥವ ಪಾರಂಪರಿಕ ಸಂಪತ್ತು ಹಾಳಾಗುವಂತೆ ಹಾಗೂ ಪೊಲೀಸ್ ಸೂಚನೆ ಮತ್ತು ಆದೇಶ ಉಲ್ಲಂಘಿಸಿ ಆಚರಿಸಬಾರದು. ಕಾನೂನು ಕೈಗೆ ತೆಗೆದುಕೊಂಡು ಕ್ರಿಮಿನಲ್ ಆಗಿ ಜೈಲು ಸೇರುವಂತೆ ಆಚರಿಸಬಾರದು?!
ಹೇಗೆ ಆಚರಿಸಬೇಕು:-
ಹಿಂದೂಧರ್ಮ(ಗುರು)ಪ್ರತಿಪಾದಿಸುವ ಮಾನವಧರ್ಮಕ್ಕಿಂತ ಮಿಗಿಲಾದಧರ್ಮ ಇನ್ನೊಂದಿಲ್ಲ! ಎಂಬ ಸಿದ್ಧಾಂತ/ವೇದಾಂತ ವನ್ನೇ ಬೇರೆಲ್ಲಾ ಧರ್ಮ ಸಂಸ್ಥಾಪಕರು ಪುನರುಚ್ಛರಿಸಿದ್ದಾರೆ! ಈ(ಕಹಿ)ಸತ್ಯವನ್ನು ಧರ್ಮಾಂಧ ಭಯೋತ್ಪಾದಕರು ಮಾತ್ರ ಒಪ್ಪಿಕೊಳ್ಳುತ್ತಿಲ್ಲ? ತಮ್ಮ ಸ್ವಾರ್ಥ[ಧರ್ಮ]ಕ್ಕೆ ಅನ್ಯಾಯವಾಗಿ ಅನ್ಯಧರ್ಮೀಯರ ಮಾರಣಹೋಮ ಮಾಡುತ್ತಾ ಮಾನವ- ಮಾನವ ನಡುವೆ ರಕ್ತದ ನದಿ ಹರಿಸುತ್ತಿದ್ದಾರೆ! ಇಂಥ ರಕ್ಕಸರನ್ನು ಯಾವ ಕಾರಣಕ್ಕೂ ಕ್ಷಮಿಸದೇ ಎಲ್ಲರೂ, ಎಲ್ಲ ಧರ್ಮದವರೂ ಬಹಿಷ್ಕರಿಸಲೇಬೇಕು?!
ಪರಿಸ್ಥಿತಿ ಅರಿತು ಪ್ರಜ್ಞಾವಂತರಾಗಿ ಕೆರೋಲ್ ಗೀತೆ ಬೈಬಲ್ ಪ್ರವಚನ ಪಠನ ಕ್ರಿಸ್ಮಸ್ ಟ್ರೀ ಸಂಪ್ರದಾಯ ನೃತ್ಯ, ಸತ್ಸಂಗ ಸುವಾರ್ತೆ ಪ್ರಾರ್ಥನೆ ಕ್ಯಾಂಡ್ಲ್ ಪೂಜೆ ಗುಂಪು ಗಾಯನ ಅತಿಥಿ ಸತ್ಕಾರ ಸಾಮೂಹಿಕ ಭೋಜನ ಕೇಕ್ ವೈನ್ ಕ್ವಿಜ್ ಕ್ರೀಡೆ ಮುಂತಾದ ಸ್ಪರ್ಧೆ-ಪ್ರದರ್ಶನ ಏರ್ಪಡಿಸುವಾಗ; ಸಾಂತಕ್ಲಾಸ್ ಮೂಲಕ ಬಣ್ಣಬಣ್ಣದ ಪೀಪಿಟೋಪಿ ಗ್ರೀಟಿಂಗ್ಸ್ ಸ್ವೀಟ್ಸ್ ಹಂಚುವಾಗ; ಗೃಹಪ್ರವೇಶ ಮದುವೆ ನಾಮಕರಣ ಇತ್ಯಾದಿ ಜತೆಗೇ ಸ್ಥಳೀಯ(ರ) ಭಾಷೆ ಸಂಸ್ಕೃತಿ ಕಾನೂನು ಕಾಯ್ದೆ ಅನು ಗುಣವಾಗಿ ಮಹಿಳೆ ಮಕ್ಕಳು ವೃದ್ಧರನ್ನು ಗೌರವಿಸುತ್ತ ಪರಿಸರ ಆರೋಗ್ಯ ಶುಚಿತ್ವ ಹಾಳಾಗದಂತೆ ಸ್ನೇಹ ಶಾಂತಿ ಪ್ರೀತಿ ವಿಶ್ವಾಸದಿಂದ ದುಂದು ವೆಚ್ಚ ಮಾಡದಂತೆ ಆಚರಿಸಬೇಕು? ಪ್ರಸ್ತುತ ಯುದ್ಧದ ಭೀತಿ ಆವರಿಸಿ ದೇಶದ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಸಂಕಷ್ಟ-ನಷ್ಟದ ದುಷ್ಟ [ರ] ಕಾಲ ವಕ್ಕರಿಸಿರುವಾಗ! 2024(ಅನ್ ಹ್ಯಾಪಿ?) ನ್ಯು ಇಯರ್ ಗಾಗಿ ದುಂದುವೆಚ್ಚ ಮಾಡುವುದು ಅನಗತ್ಯ? ರೈತ ಯೋಧ ವೈದ್ಯ ಶಿಕ್ಷಕ ಆರಕ್ಷಕ ಆರೋಗ್ಯ ಕಾರ್ಯಕರ್ತ ಮುಂತಾದ ನಿಸ್ವಾರ್ಥ ಸಾಮಾಜಿಕ ಸೇವಕರಿಗೆ ಸಾಥ್ ನೀಡೋಣ! ತ್ಯಾಗ ಮತ್ತು ಬಲಿದಾನ ಮನೋಭಾವವುಳ್ಳ ಪ್ರತಿಯೊಬ್ಬ ಭಾರತೀಯನಿಗೂ ಹ್ಯಾಟ್ಸಾಫ್ ಮಾಡೋಣ!
ಭಾರತೀಯರಾದ ನಾವು ಪ್ರಸ್ತುತ ಪರಿಸ್ಥಿತಿ ಅರ್ಥ ಮಾಡಿಕೊಂಡು ಮಿತಿಯಾಗಿ ಖರ್ಚು ಮಾಡಿ ಸಾರ್ಥಕ ರೀತಿಯಲ್ಲಿ ಹೊಸ ಕ್ರೈಸ್ತ ವರ್ಷ ಆಚರಿಸೋಣ? ಎಲರಿಗೂ 2024ರ ಶುಭಾಶಯಗಳು!
ಕುಮಾರಕವಿ ಬಿ.ಎನ್.ನಟರಾಜ್
9036976471
ಬೆಂಗಳೂರು 560072
