ವೇದ ಜ್ಯೋತಿಷ್ಯದ ಜ್ಞಾನವನ್ನು ಉತ್ತೇಜಿಸಲು ಮತ್ತು ಉಪನ್ಯಾಸಗಳು ಮತ್ತು ವಿಶೇಷ ಕೋರ್ಸ್ ಮೂಲಕ ಪ್ರಾಚೀನ ವಿಜ್ಞಾನದ ಅರಿವನ್ನು ಹೆಚ್ಚಿಸುವ ಗುರಿಯಿ೦ದ ಏಪ್ರಿಲ್ 17 ಮತ್ತು 18 ರಂದು ಮೈಸೂರಿನಲ್ಲಿ ರಾಷ್ಟ್ರಮಟ್ಟದ ವೇದ ಜ್ಯೋತಿಷ್ಯ ಸಮ್ಮೇಳನ ಏರ್ಪಡಿಸಲಾಗಿದೆ.
ಮೈಸೂರಿನ ಶ್ರೀ ಮಾಯಕರ ಗುರುಕುಲವು, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ಮತ್ತು ಕರ್ನಾಟಕ ರಾಜ್ಯ ಜ್ಯೋತಿಷ್ಯ ಮತ್ತು ಜ್ಯೋತಿಷ್ಯ ಬೋಧನಾ ಒಕ್ಕೂಟ ದ ಸಹಯೋಗದೊಂದಿಗೆ ರಾಷ್ಟ್ರೀಯ ಸಮ್ಮೇಳನದ ನಾಲ್ಕನೇ ಆವೃತ್ತಿ ಯನ್ನು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ (ಕೆಎಸ್‌ಒಯು) ಆವರಣದಲ್ಲಿರುವ ಕಾವೇರಿ ಸಭಾಂಗಣದಲ್ಲಿ ಆಯೊಜಿಸಿದೆ.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಶ್ರೀ ಮಾಯಕರ ಗುರುಕುಲ ಸಂಸ್ಥಾಪಕ ಡಾ ಮೂಗೂರು ಮಧು ದೀಕ್ಷಿತ್, ವೇದ ಜ್ಯೋತಿಷ್ಯ ನೀಡುವ ಆಳವಾದ ಆಧ್ಯಾತ್ಮಿಕ ಅಂಶಗಳನ್ನು, ಶಾಸ್ತ್ರದ ಮಹತ್ವವವನ್ನು ತಿಳಿಸುವ ಉದ್ದೇಶವನ್ನು ಸಮ್ಮೇಳನವು ಹೊಂದಿದೆ.
“ವೇದ ಜ್ಯೋತಿಷ್ಯಕ್ಕೆ ಸಂಬಂಧಿಸಿದ ವೈವಿಧ್ಯಮಯ ವಿಷಯಗಳ ಕುರಿತು ವಿಶೇಷ ಉಪನ್ಯಾಸ ನೀಡುವ ಸಮ್ಮೇಳನಕ್ಕೆ ಹೆಸರಾಂತ ಭಾಷಣಕಾರರನ್ನು ಆಹ್ವಾನಿಸಲಾಗಿದೆ. ನಾಡಿ ರಹಸ್ಯ, ಸಂಖ್ಯಾಶಾಸ್ತ್ರ, ವೈದ್ಯಕೀಯ ಜ್ಯೋತಿಷ್ಯ, ರಾಜಯೋಗ, ಸ್ವರಾಭಾನು, ದೈವ ಶಾಪ ಶಲ್ಯ ದೋಷ, ಶಂಕು ಸ್ಥಪಾನೆ ಮತ್ತು ಇತರ ವಿಷಯಗಳ ಕುರಿತು ಸಮಾವೇಶದಲ್ಲಿ ಚರ್ಚಿಸಲಾಗುವುದು ”ಎಂದು  ಮೂಗೂರು ಮಧು ದೀಕ್ಷಿತ್ ಹೇಳಿದರು.
ತಮ್ಮ ಮಾಯಕರ ಗುರುಕುಲ ಈವರೆಗೆ 100 ಕ್ಕೂ ಹೆಚ್ಚು ಜ್ಯೋತಿಷ್ಯ ಕಾರ್ಯಾಗಾರಗಳು, ನಾಲ್ಕು ಜ್ಯೋತಿಷ್ಯ ಸಮಾವೇಶಗಳು, ಎರಡು ಪುರೋಹಿತ ಶಿಬಿರಗಳು ಎರಡು ಆಯುರ್ವೇದ ಶಿಬಿರಗಳು ಮತ್ತು ಎರಡು ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾವಳಿಗಳನ್ನು ಆಯೋಜಿಸಿದೆ ಎಂದು  ಹೇಳಿದರು.
ಸಮಾವೇಶವನ್ನು ಏಪ್ರಿಲ್ 17 ರಂದು ವಸತಿ ಸಚಿವ ಮತ್ತು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ವಿ ಸೋಮಣ್ಣ ಉದ್ಘಾಟಿಸಲಿದ್ದು, ಸ್ಮರಣ ಸಂಚಿಕೆಯನ್ನು  ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ನಿರ್ದೇಶಕ ಡಾ.ಪ್ರಕಾಶ್ ಆರ್ ಪಾಗೋಜಿ ಬಿಡುಗಡೆ ಮಾಡಲಿದ್ದಾರೆ. ಪ್ರೊಫೆಸರ್ ಗಜೇಂದ್ರ, ಎಚ್.ಎಸ್.ರಮೇಶ್ ಹಂದನ್ಹಳ್ಳಿ.ಅವರ ಸಮ್ಮುಖದಲ್ಲಿ ಸಮ್ಮೇಳನದ ಅಧ್ಯಕ್ಷತೆಯನ್ನು ಡಾ.ಕೆ.ಜಿ.ಪುಟ್ಟಹೊನ್ನಯ್ಯ ವಹಿಸಲಿದ್ದಾರೆ.
ಈ ಸಂದರ್ಭದಲ್ಲಿ ಖ್ಯಾತ ಸಂಗೀತ ಸಂಯೋಜಕ ಅರ್ಜುನ್ ಜನ್ಯಾಗೆ ಸಂಗೀತ ತಪೋನಿಧಿ ಪ್ರಶಸ್ತಿ ನೀಡಲಿದ್ದರೆ, ಗೀತರಚನೆಕಾರ ಡಾ.ವಿ.ನಾಗೇಂದ್ರ ಪ್ರಸಾದ್ ಅವರಿಗೆ ಸಾಹಿತ್ಯ ತಪೋನಿಧಿ ಮತ್ತು ನಟ ತಬಲಾ ನಾನಿ ಅವರಿಗೆ ಕಲಾ ತಪೋನಿಧಿ, ಟಗರು ಸಿನಿಮಾ ಖ್ಯಾತಿಯ ರುಷಿಕರಾಜ್ (ಸರೋಜಾ) ಅವರಿಗೆ ಕಲಾಸೇವಾರತ್ನ ಪ್ರಶಸ್ತಿ ಪ್ರದಾನ ನಡೆಯಲಿದೆ. ಬೇರೆ ಬೇರೆ ಕ್ಷೇತ್ರದ ಅನೇಕ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಪತ್ರಿಕಾ ಗೋಷ್ಠೀಯಲ್ಲಿ ಸಂಸ್ಥೆಯ ಡಾ. ಮೂಗೂರು ಮಧುದೀಕ್ಷಿತ್, ರಾಮನಾಥ ಗುಪ್ತ, ಸಾಗರ್.ಎಸ್, ಜೆ.ಇ. ಶಿವಕುಮಾರ್, ಟಿ.ಡಿ.ಶರತ್, ಸರ್ಪಭೂಷಣ್ ಸ್ವಾಮಿ, ಸುಗುಣ್ ಉಪಸ್ಥಿತರಿದ್ದರು.

By admin