ಚಾಮರಾಜನಗರ: ತಾಲೂಕಿನ ಉಮ್ಮತ್ತೂರು ಗ್ರಾಮದಲ್ಲಿ ‘ಬಾ ನಲ್ಲೆ ಮದುವೆಗೆ ಚಿತ್ರೀಕರಣಕ್ಕೆ ಚಾಲನೆ ನೀಡಲಾಯಿತು.
ಗ್ರಾಮದ ಭುಜಂಗೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಮುಂಭಾಗ ಚಿತ್ರ ನಿರ್ಮಾಪಕ ಎಂ ಯೋಗೇಶ್ ಅವರ ತಾಯಿ ಕೆಂಪಮ್ಮ ಮಹದೇವಯ್ಯ ಚಾಲನೆ ನೀಡಿದರು.
ಕರ್ನಾಟಕ ರಕ್ಷಣಾ ಸೇನೆ ಜಿಲ್ಲಾಧ್ಯಕ್ಷ ಮಿಂಚುನಾಗೇಂದ್ರ ಮಾತನಾಡಿ, ಬಾನಲ್ಲೆ ಮದುವೆಗೆ ಚಿತ್ರದ ನಿರ್ಮಾಪಕರು ನಮ್ಮ ಜಿಲ್ಲೆಯವರೇ ಆಗಿದ್ದು, ಚಿತ್ರದ ಚಿತ್ರೀಕರಣ ನಡೆಯುವ ಸ್ಥಳಗಳಲ್ಲಿ ಜಿಲ್ಲೆಯ ಜನತೆ ಸಂಪೂರ್ಣ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಚಿತ್ರದ ನಿರ್ಮಾಪಕ ನಿದೇಶಕ ಎಂ.ಯೋಗೇಶ್ ಮಾತನಾಡಿ ಚಿತ್ರದ ಚಿತ್ರೀಕರಣ ಚಾಮರಾಜನಗರದ ಚಾಮರಾಜೇಶ್ವರ ದೇವಾಲಯ ಸೇರಿದಂತೆ ವಿವಿಧಡೆ ನಡೆಯಲಿದ್ದು, ಜಿಲ್ಲೆಯ ಸಿನಿಪ್ರೇಕ್ಷಕರು ಕನ್ನಡಚಿತ್ರಗಳನ್ನು ವೀಕ್ಷಿಸುವ ಮೂಲಕ ಪ್ರೋತ್ಸಾಹ ನೀಡಬೇಕು ಎಂದು ಮನವಿ ಮಾಡಿದರು.
ಚಿತ್ರ ನಟ ಅರ್ಜುನ್, ನಟಿ ಸುಭಾ. ಪ್ರೊಡಕ್ಷನ್ ಅಸಿಸ್ಟೆಂಟ್ ಕುಮಾರ್ ಈಶ್ವರ್. ಛಾಯಾಗ್ರಾಹಕ ಪ್ರಸನ್ನ ಕುಮಾರ್. ಸಹಾಯಕ ಪ್ರದೀಪ್ ಮಾಜಿ ಗ್ರಾ.ಪಂ. ಅಧ್ಯಕ್ಷೆ ಗೀತಾ ರವೀಶ್ ಕರ್ನಾಟಕ ರಕ್ಷಣಾ ಸೇನಾ ಪ್ರಧಾನ ಕಾರ್ಯದರ್ಶಿ ರುದ್ರ, ನಗರ ಘಟಕ ಪ್ರದಾನ ಕಾರ್ಯದರ್ಶಿ ಶ್ರೀನಿವಾಸ್ ಹಾಗೂ ಚಿತ್ರೀಕರಣದ ತಂಡದ ಕಲಾವಿದರು ಸೇರಿದಂತೆ ಇತರರು ಹಾಜರಿದ್ದರು.
