ಕಳೆದ 8 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಹಳೆಯ ಕಳುವು ಪ್ರಕರಣದ ಆರೋಪಿಗಳನ್ನು ಬಂಧಿಸುವಲ್ಲಿ ಮಂಡಿ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.
ಡಿಸೆಂಬರ್ 18 ರಂದು ರಾತ್ರಿ ಮಂಡಿ ಪೊಲೀಸ್ ಠಾಣಾ ಸರಹದ್ದಿನ ಲಷ್ಕರ್ ಮೊಹಲಾ,್ಲ ಮನೆಯೊಂದರ ಬಾಗಿಲನ್ನು ಮುರಿದ್ದು ಚಿನ್ನ, ಡೈಮಂಡ್, ಪ್ಲಾಟಿನಂ ಆಭರಣಗಳು ಮತ್ತು ಗೃಹೋಪಯೋಗಿ ವಸ್ತುಗಳು ಕಳ್ಳತನವಾಗಿದ್ದು, ಈ ಸಂಬಂದ ಮಂಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ತನಿಖೆ ಕೈಗೊಂಡ ಮಂಡಿ ಠಾಣಾ ಪೊಲೀಸರು ಪ್ರಕರಣದಲ್ಲಿ ದೊರೆತ ಸುಳಿವುಗಳ ಆಧಾರದ ಮೇರೆಗೆ ಕಳೆದ 8 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಹಳೆಯ ಕಳುವು ಪ್ರಕರಣದ ಆರೋಪಿ – 1) ಮುಜ್ಜು ಅಹಮ್ಮದ್ @ ಮುಜ್ಜು @ ಕಾಣ @ ಮುಜಾಹಿದ್ @ ಸಲೀಂ @ ಮುಜಾಮಿಲ್ ಅಹಮ್ಮದ್ ಬಿನ್ ಮುಜೀಬ್ ಅಹಮ್ಮದ್ @ ಅಬ್ದುಲ್ ಗನಿ, 35 ವರ್ಷ, ಅಬು ಅಕೀಲ್ ಮಸೀದಿ ಹತ್ತಿರ, ಬೀಡಿ ಕಾಲೋನಿ, ಅಜೀಜ್ ಸೇಠ್ ನಗರ, ಮೈಸೂರು ಹಾಗೂ ಈತನ ಸಹಚರ2)ಮುಜಾಮಿಲ್ ಅಹಮ್ಮದ್ @ ಬಾಬು ಬಿನ್ ನೂರ್ ಅಹಮ್ಮದ್, 40 ವರ್ಷ, ಅಜೀಜ್ ಸೇಠ್ ನಗರ, ಬೀಡಿ ಕಾಲೋನಿ, ಮೈಸೂರು ಎಂಬುವವರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗಿ, ಇವರುಗಳು ಲಷ್ಕರ್ ಮೊಹಲ್ಲಾದ ಮನೆಯಲ್ಲಿ ಕಳ್ಳತನ ಮಾಡಿರುವ ಬಗ್ಗೆ ತಿಳಿಸಿದ್ದು, ಆರೋಪಿಗಳಿಂದ ರೂ. 8 ಲಕ್ಷ ಬೆಲೆ ಬಾಳುವ 225 ಗ್ರಾಂ ತೂಕದ ಚಿನ್ನದ ಆಭರಣಗಳು, ಡೈಮಂಡ್ ಮತ್ತು ಪ್ಲಾಟಿನಂ ಆಭರಣಗಳು ಹಾಗೂ ಗೃಹೋಪಯೋಗಿ ವಸ್ತುಗಳಾದ ಎಲ್.ಸಿ.ಡಿ ಟಿವಿ, ಸೆಟಪ್ ಬಾಕ್ಸ್, ಡಿವಿಡಿ ಪ್ಲೆಯರ್ ಹಾಗೂ ಕೃತ್ಯಕ್ಕೆ ಬಳಸಿದ್ದ ಮಾರುತಿ 800 ಕಾರನ್ನು ಅಮಾನತ್ತುಪಡಿಸಿಕೊಂಡಿರುತ್ತಾರೆ.
ಈ ಪತ್ತೆ ಕಾರ್ಯವನ್ನು ಮೈಸೂರು ನಗರ ಡಿ.ಸಿ.ಸಿ.ರವರಾದ ಗೀತಪ್ರಸನ್ನ, ನರಸಿಂಹರಾಜ ವಿಭಾಗದ ಎಸಿಪಿ ರವರಾದ ಶಿವಶಂಕರ್.ಎಂ ರವರುಗಳ ಮಾರ್ಗದರ್ಶನದಲ್ಲಿ, ಮಂಡಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‍ಪೆಕ್ಟರ್ ರವರಾದ ನಾರಾಯಣಸ್ವಾಮಿ.ವಿ ಪಿ.ಎಸ್.ಐಗಳಾದ ಶಭರೀಶ.ವಿ.ಆರ್, ಶಿವಕುಮಾರ್, ಎ.ಎಸ್.ಐ ಕೆ.ಎಸ್.ಗುರುಸ್ವಾಮಿ ಸಿಬ್ಬಂದಿಗಳಾದ ಜಯಪಾಲ, ರಾಜೇಂದ್ರ.ಜಿ.ಸಿ, ಸಂತೋಷ್ ಕುಮಾರ್, ರವಿಗೌಡ, ಶಂಕರ ಟಿ ಬಂಡಿವಡ್ಡರ್, ಹನುಮಂತ ಕಲ್ಲೇದ, ಕರಿಯಪ್ಪ, ಸಮೀರ್ ರವರುಗಳು ಪತ್ತೆ ಮಾಡಿರುತ್ತಾರೆ.
ಈ ಪತ್ತೆ ಕಾರ್ಯವನ್ನು ಮೈಸೂರು ನಗರದ ಪೊಲೀಸ್ ಆಯುಕ್ತರವರಾದ ಡಾ: ಚಂದ್ರಗುಪ್ತ, ಐ.ಪಿ.ಎಸ್. ರವರು ಪ್ರಶಂಸಿಸಿದ್ದಾರೆ.

By admin