ಮೈಸೂರು : ಡಿ ೨೨ ಅಪರಾಧಗಳನ್ನು ನಿಯಂತ್ರಿಸುವಲ್ಲಿ ಪೊಲೀಸರಷ್ಟೆ ಪ್ರಮುಖವಾದ ಜವಾಬ್ದಾರಿ ಸಾರ್ವಜನಿಕರಿಗೂ ಇರುತ್ತದೆ ಎಂದು ಕೆ.ಆರ್.ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಮಂಜು ಹೇಳಿದರು.ಕೆ.ಆರ್ ಪೊಲೀಸ್ ಠಾಣೆ ಹಮ್ಮಿಕೊಂಡಿದ್ದ ಅಪರಾಧ ತಡೆ ಮಾಸಾಚರಣೆ ಪ್ರಯುಕ್ತ ಇಂದು ಸುಣ್ಣದಕೇರಿ ಗಂಗಾಮತಸ್ಥರ ಬೀದಿಯ ಸಾರ್ವಜನಿಕರಿಗೆ ಮೊಹಲ್ಲಾದ ನಿವಾಸಿಗಳಿಗೆ ಅಪರಾಧ ತಡೆ ಮಾಸಾಚರಣೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಬಳಿಕ ಮಾತನಾಡಿದ ಅವರು, ಠಾಣೆಯ ಸಬ್ ಇನ್ಸ್ಪೆಕ್ಟರ್ ಮಂಜು ಅಪರಾಧ ತಡೆಯುವುದು ಪ್ರತಿಯೊಬ್ಬ ನಾಗರಿಕರ ಕರ್ತವ್ಯವಾಗಿದೆ. ಅಪರಾಧ ನಿಯಂತ್ರಣಕ್ಕೆ ನಾಗರಿಕರು ಸಹಕಾರ ನೀಡಿದ್ದೇ ಆದರೆ ಸಂಪೂರ್ಣವಾಗಿ ಅಪರಾಧಗಳನ್ನು ತಡೆ ಗಟ್ಟಬಹುದಾಗಿದೆ ಹಾಗೂ ಅಪರಾಧಗಳನ್ನು ತಡೆಯುವ ಉದ್ದೇಶದಿಂದ ಉತ್ತಮವಾದ ಕಾನೂನು ಸುವ್ಯವಸ್ಥೆಯನ್ನು ಕೈಗೊಳ್ಳಲಾಗಿದೆ ಎಂದರು.ಅಪರಾಧ ಪ್ರಕರಣಗಳ ಬಗ್ಗೆ ತಿಳಿದರೆ ತಕ್ಷಣ ಅದನ್ನು ಪೊಲೀಸರಿಗೆ ಮಾಹಿತಿ ನೀಡಬೇಕು. ಇದರಿಂದ ನಾವುಗಳು ಅಪರಾಧ ಪ್ರಕರಣಗಳನ್ನು ಪತ್ತೆ ಮಾಡಿ ಆರೋಪಿತರನ್ನು ಬಂಧಿಸಲು ಸಾಧ್ಯವಾಗುತ್ತದೆ ಎಂದರು.
ಇದೇ ಸಂಧರ್ಭದಲ್ಲಿ ಮಾತಾನಾಡಿದ ಮೊಹಲ್ಲಾದ ಯಜಮಾನರು ನಮ್ಮ ಮೊಹಲ್ಲಾದಲ್ಲಿ ತಿಂಗಳಿಗೊಂದು ಮನೆ ಮುಂದೆ ರಸ್ತೆಯ ಮಧ್ಯೆ ನಿಂತು ಹುಟ್ಟು ಹಬ್ಬ ಆಚರಿಸಿಕೊಂಡು ಪಟಾಕಿ ಸಿಡಿಸುವುದು ಮನೆ ಮಂದಿಗೆ ತೊಂದರೆ ಯಾಗುತ್ತಿದ್ದು ಹಾಗೂ ರಾತ್ರಿ ಸಮಯದಲ್ಲಿ ಕುಡುಕರ ಹಾವಳಿ ಎದುರಾಗಿದೆ ಎಂದು ಅಳಲು ತೋಡಿಕೊಂಡರು.ಈ ಸಂಧರ್ಭದಲ್ಲಿ ಅಲ್ಲಿನ ಮಹಿಳೆಯರು ಸಾರ್ವಜನಿಕರು ಪಾಲ್ಗೊಂಡಿದ್ದರು ಚಿತ್ರದಲ್ಲಿ ಕಾನಸ್ಟೇಬಲ್ ನಾಗೇಶ್, ಗೋಪಣ್ಣ, ಅಶ್ವಥ್, ದಾಸಿ, ಮಹೇಶ್,ಗಂಗು ಚಂದ್ರು, ಹಾಜರಿದ್ದರು.