ಗುಂಡ್ಲುಪೇಟೆ : ತಾಲೂಕಿನ ವಿವಿಧ ಗ್ರಾಮಗಳಲ್ಲಿ ಎರಡು ಕೋಟಿ ವೆಚ್ಚದ ಕಾಂಕ್ರೀಟ್ ರಸ್ತೆ , ಸಮುದಾಯ ಭವನ , ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದ ಶಾಸಕ ಸಿ.ಎಸ್.ನಿರಂಜನ್ ಕುಮಾರ್ ಕ್ಷೇತ್ರವನ್ನ ಸಮಗ್ರವಾಗಿ ಅಭಿವೃದ್ಧಿಗೊಳಿಸುವುದೇ ನನ್ನ ಗುರಿ ಎಂದು ಹೇಳಿದರು.
ಗುಂಡ್ಲುಪೇಟೆ ತಾಲೂಕಿನ ಅರೇಪುರ ಗ್ರಾಮದ ಎಸ್ಟಿ ಸಮುದಾಯ ಭೀದಿಯಲ್ಲಿ 30 ಲಕ್ಷ ವೆಚ್ಚದ ಸಿಸಿ ರಸ್ತೆ , 20 ಲಕ್ಷ ವೆಚ್ಚದಲ್ಲಿ ಅಂಭೇಡ್ಕರ್ ಭವನ, ಬೆಳಚಳವಾಡಿ ಗ್ರಾಮದಲ್ಲಿ 20 ಲಕ್ಷ ರೂ ವೆಚ್ಚದ ಬಸವ ಭವನ, ಗುಂಡ್ಲುಪೇಟೆ ಪಟ್ಟಣದಲ್ಲಿ 80 ಲಕ್ಷ ವೆಚ್ಚದ ಸಿಸಿ ರಸ್ತೆ, ಕೋಡಹಳ್ಳಿ ಗ್ರಾಮದಲ್ಲಿ ಶಾಲಾ ಕಟ್ಟಡ ಮತ್ತು ಸಿಸಿ ರಸ್ತೆಗೆ 25 ಲಕ್ಷ, ಕಂದೇಗಾಲ ಗ್ರಾಮದ ಸಾಮಾನ್ಯ ರಸ್ತೆ ಮತ್ತು ಶಾಲಾ ಕಟ್ಟಡ ನಿರ್ಮಾಣಕ್ಕೆ 25 ಲಕ್ಷ ಸೇರಿ ಒಟ್ಟು 2 ಕೋಟಿಗೂ ಹೆಚ್ಚು ವೆಚ್ಚದ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡುತ್ತ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನ ಮಾಡಲಾಗಿದೆ ಮತ್ತು ಮುಂದುವರಿಯುತ್ತಲಿವೆ , ನಾನು ಎಲ್ಲರೊಂದಿಗೆ ಒಟ್ಟುಗೂಡಿ ಕೆಲಸ ಮಾಡುತ್ತಿದ್ದೇನೆ ಆದರೆ ಅಭಿವೃದ್ಧಿಯನ್ನ ಸಹಿಸದ ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ ಇಂತಹ ಸನ್ನಿವೇಶಗಳು ರಾಜಕಾರಣದಲ್ಲಿ ಸರ್ವೇ ಸಾಮಾನ್ಯವಾಗಿದೆ ನಾನು ಮಾಡಿರುವ ಜನಪರ ಕೆಲಸಗಳು ಕ್ಷೇತ್ರದ ಮತದಾರರಿಗೆ ತಿಳಿದಿದೆ . ಕ್ಷೇತ್ರದ ಮತದಾರರ ಹೆಬ್ಬಯಕೆಯನ್ನ ಹಂತಹಂತವಾಗಿ ಪೂರ್ಣಗೊಳಿಸಿರುವ ವಿಶ್ವಾಸ ನನ್ನಲ್ಲಿದೆ. ವಿಪಕ್ಷದವರ ಆರೋಪಗಳಿಗೆ ಟೀಕೆಗಳಿಗೆ ನಾನು ತಲೆಕೆಡಿಸಿಕೊಳ್ಳುವ ವ್ಯಕ್ತಿಯಲ್ಲ ನಾನು ಮಿತಭಾಷಿ ಕೆಲಸ ಹೆಚ್ಚು ಮಾಡಿರುವಂತ ಜವಾಬ್ದಾರಿಯುತ ಪ್ರತಿನಿದಿಯಾಗಿದ್ದೇನೆ. ಕ್ಷೇತ್ರದಲ್ಲಿನ ಅಭಿವೃದ್ಧಿಯನ್ನ ಕಣ್ತುಂಬಿಕೊಳ್ಳುವ ವ್ಯವದಾನವು ಸಹ ವಿಪಕ್ಷ ನಾಯಕರಿಗಿಲ್ಲ. ಕೆಲಸವನ್ನ ನೋಡಿ ಪೋತ್ಸಾಹಿಸುವಂತ ಸೌಜನ್ಯವನ್ನು ಸಹ ಅವರು ಕಳೆದುಕೊಂಡಿದ್ದಾರೆ , ಕ್ಷೇತ್ರದ ಜನತೆ ನನಗೆ ನೀಡಿದ ಜವಬ್ದಾರಿಯನ್ನ ಬಹಳ ಅಚ್ಚುಕಟ್ಟಾಗಿ ಪಾಲಿಸಿದ್ದೇನೆ ಇಂತಹ ಸುಭಿಕ್ಷತೆಯನ್ನ ವಿಪಕ್ಷದವರು ಸಹಿಸುವುದಿಲ್ಲ ಎಂಬುದನ್ನ ಅರಿತೆ ಉತ್ತರವನ್ನ ಕೆಲಸದ ಮೂಲಕ ಕೊಟ್ಟಿದ್ದೇನೆ ಎಂದು ವಿಪಕ್ಷದವರಿಗೆ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
ಈ ವೇಳೆ ಎಸ್ಟಿ ಮೋರ್ಚಾ ತಾ.ಅಧ್ಯಕ್ಷ ಚಿಕ್ಕಾಟಿ ಶಿವಣ್ಣ, ಚಿಕ್ಕಾಟಿ ಗ್ರಾ.ಪ.ಉಪಾಧ್ಯಕ್ಷ ಮಹದೇವಪ್ರಸಾದ್, ಎಪಿಎಂಸಿ ಅದ್ಯಕ್ಷ ರವಿ, ಹಿರಿಕಾಟಿ ಸೋಮಶೇಖರ್, ಎಲ್. ಸುರೇಶ್ , ಶಿವಾನಂದಸ್ವಾಮಿ, ಗ್ರಾಮಸ್ಥರು ಹಾಜರಿದ್ದರು.