ಢಿಕ್ಕಿ

ಎರಡು ಗಾಡಿಗಳು ಡಿಕ್ಕಿಯಾದಾಗ ಸೇರುವುದು

ಗ್ಯಾರೇಜ್

ಎರಡು ಬಾಡಿಗಳು ಡಿಕ್ಕಿಯಾದಾಗ ಆಗುವುದು ಮ್ಯಾರೇಜ್?

*ಕುಮಾರಕವಿನಟರಾಜ್

ಸೌಧ

  ಸತ್ತರೂ ಬದುಕಿರುವವರು

ಅಮರ ಸೌಧದಲ್ಲಿ ಇದ್ದರೆ!

ಬದುಕಿಯೂ ಸತ್ತಂತಿರುವವರು

ವಿಧಾನ ಸೌಧದಲ್ಲಿ ಇದ್ದಾರೆ?

*ಕುಮಾರಕವಿನಟರಾಜ್

ಬದಲಾವಣೆ

ಬದಲಾವಣೆಯು ಜಗದ ನಿಯಮ

ಮಾಡಲು ಸಾಧ್ಯವೇನು ನೀ ಯಮ?

ಬದಲಿಸಿ ಒಬ್ಬರಿಂದೊಬ್ಬರಿಗೆ ಪ್ರಾಣ

ಅಥವ ಮಾಡಿ ಅತ್ತಿಂದಿತ್ತ

ಜೀವಹರಣ..! *

ಕುಮಾರಕವಿನಟರಾಜ್

ಜೀವಾ…

. ಜೀವದ ಗೆಳೆಯ ಎಂದರೇನು?

ಜೀವವನ್ನು ತೆಗೆ[ಕೊಡು]ವವನೇನು..!

ಬಾಳಿನ ಸಂಗಾತಿ ಅಂದರೇನು?

ಸಂಗಾತಿಯೊಡನೆ ಓ[ಕೂ]ಡಿದವಳೇನು..!

*ಕುಮಾರಕವಿನಟರಾಜ್

ಅವಳು

ಹಿಂಭಾಗದಿಂದ ನೋಡಿದರೆ ಸಿನಿಮಾ ತಾರೆ

ಮುಂಭಾಗದಿಂದ ನೋಡಲಾಗದು ಅವಳ ಮೋರೆ

ಆದರೂ ಹುಡುಗರೆಲ್ಲ ಅನುದಿನ ಕರೆಯುತ್ತಾರೆ

ಹೋಟೆಲ್-ಸಿನಿಮಾಗೆ ಹೋಗೋಣ ಬಾರೆಬಾರೆ

*ಕುಮಾರಕವಿನಟರಾಜ್

ಸಂಕ್ರಮಣ

 ಸೂರ್ಯ ಬದಲಿಸಿದಾ ಪಥ ಸಂಚಲನ

ಚುಮುಚುಮು ಚುರುಚುರು ಸಮ್ಮಿಲನ

ಭೂಮಿಯು ವಾಲಿದಾ ನವ ಸಂಕ್ರಮಣ

ಹೊಸಅಕ್ಕಿ ಬಿಸಿಬೆಲ್ಲದ ಸಿಹಿಸಿಹಿ ಹೂರಣ

*ಕುಮಾರಕವಿನಟರಾಜ್

ರೈತ-ಬಸವಣ್ಣ

ಬೆವರುಸುರಿಸಿ ಬೆತ್ತಿಬೆಳೆವನು ಹೊಸಫ಼ಸಲು

ದೇಶದ ಬೆನ್ನೆಲುಬಾಗಿರುವ ನಮ್ಮ ರೈತಣ್ಣ

ರಕ್ತಸುರಿಸಿ ಉತ್ತಿದುಡಿವನು ಹೊಲಗದ್ದೆಬಯಲು

ರೈತನ ಉಸಿರಾಗಿರುವ ನಂದಿನಿ ಬಸವಣ್ಣ 

*ಕುಮಾರಕವಿನಟರಾಜ್

ಸಂ-ಕ್ರಾಂತಿಪುಢಾರಿ

  ಉತ್ತಲಿಲ್ಲ ಬಿತ್ತಲಿಲ್ಲ ಉಂಡಾಡಿ ಗುಂಡ

ಉಂಡೂಹೋದ ಕೊಂಡೂಹೋದ ಚಂಡ

ಧರೆದುಡಿಮೆಗೆ ದಂಡ, ಕೂಳುಬಾಳಿಗೆ ಭಂಡ

ಅಕಾಲಿಕ ನಾಯಿ-ನರಿ ತಿನ್ನಲಿ ಅವನ ಪಿಂಡ

*ಕುಮಾರಕವಿನಟರಾಜ್.

ಕೋವಿಡ್-೧೯ ಸಂತತಿ

ದುಷ್ಟಚೀನಾದಿಂದ ಆವಿಷ್ಕಾರಗೊಂಡ ಉರಿ

ಮನುಕುಲವನ್ನೇ ಕಾಡುತ್ತಿದೆ ಮಹಾಮಾರಿ

೩-೪ನೇ ಅಲೆಯ ಓಮಿಕ್ರಾನ್ ಜಗತ್ ದಳ್ಳುರಿ

ಸಂ-ಕ್ರಾಂತಿ ಕಿಚ್ಚಾಯಿಸಿ ಸುಟ್ಟುಬೂದಿ ಮಾಡಿರಿ

*ಕುಮಾರಕವಿನಟರಾಜ್

ನಿಸರ್ಗ ವಿಕೋಪ

ಅತಿವೃಷ್ಟಿಯಾದರೆ ಮಣ್ಣಿನಮಗನಿಗೆ ಅನಿಷ್ಟ

ಅನಾವೃಷ್ಟಿಯಾದರೂ ಇವನಿಗೇ ಅತಿಕಷ್ಟ

ಸೃಷ್ಟಿವಿಕೋಪಕ್ಕೆ ಬಲಿಪಶುವಾಗೊ ನತದೃಷ್ಟ 

ಇವನಿಗೆ ಸಹಾಯಹಸ್ತ ನೀಡೋರು ದೇವರಿಗಿಷ್ಟ

*ಕುಮಾರಕವಿನಟರಾಜ್   

ಕುಮಾರಕವಿ ಬಿ.ಎನ್.ನಟರಾಜ್ [೯೦೩೬೯೭೬೪೭೧]
   ನಾಗರಬಾವಿ, ಬೆಂಗಳೂರು-೫೬೦೦೭೨