ಢಿಕ್ಕಿ
ಎರಡು ಗಾಡಿಗಳು ಡಿಕ್ಕಿಯಾದಾಗ ಸೇರುವುದು
ಗ್ಯಾರೇಜ್
ಎರಡು ಬಾಡಿಗಳು ಡಿಕ್ಕಿಯಾದಾಗ ಆಗುವುದು ಮ್ಯಾರೇಜ್?
*ಕುಮಾರಕವಿನಟರಾಜ್
ಸೌಧ
ಸತ್ತರೂ ಬದುಕಿರುವವರು
ಅಮರ ಸೌಧದಲ್ಲಿ ಇದ್ದರೆ!
ಬದುಕಿಯೂ ಸತ್ತಂತಿರುವವರು
ವಿಧಾನ ಸೌಧದಲ್ಲಿ ಇದ್ದಾರೆ?
*ಕುಮಾರಕವಿನಟರಾಜ್
ಬದಲಾವಣೆ
ಬದಲಾವಣೆಯು ಜಗದ ನಿಯಮ
ಮಾಡಲು ಸಾಧ್ಯವೇನು ನೀ ಯಮ?
ಬದಲಿಸಿ ಒಬ್ಬರಿಂದೊಬ್ಬರಿಗೆ ಪ್ರಾಣ
ಅಥವ ಮಾಡಿ ಅತ್ತಿಂದಿತ್ತ
ಜೀವಹರಣ..! *
ಕುಮಾರಕವಿನಟರಾಜ್
ಜೀವಾ…
. ಜೀವದ ಗೆಳೆಯ ಎಂದರೇನು?
ಜೀವವನ್ನು ತೆಗೆ[ಕೊಡು]ವವನೇನು..!
ಬಾಳಿನ ಸಂಗಾತಿ ಅಂದರೇನು?
ಸಂಗಾತಿಯೊಡನೆ ಓ[ಕೂ]ಡಿದವಳೇನು..!
*ಕುಮಾರಕವಿನಟರಾಜ್
ಅವಳು
ಹಿಂಭಾಗದಿಂದ ನೋಡಿದರೆ ಸಿನಿಮಾ ತಾರೆ
ಮುಂಭಾಗದಿಂದ ನೋಡಲಾಗದು ಅವಳ ಮೋರೆ
ಆದರೂ ಹುಡುಗರೆಲ್ಲ ಅನುದಿನ ಕರೆಯುತ್ತಾರೆ
ಹೋಟೆಲ್-ಸಿನಿಮಾಗೆ ಹೋಗೋಣ ಬಾರೆಬಾರೆ
*ಕುಮಾರಕವಿನಟರಾಜ್
ಸಂಕ್ರಮಣ
ಸೂರ್ಯ ಬದಲಿಸಿದಾ ಪಥ ಸಂಚಲನ
ಚುಮುಚುಮು ಚುರುಚುರು ಸಮ್ಮಿಲನ
ಭೂಮಿಯು ವಾಲಿದಾ ನವ ಸಂಕ್ರಮಣ
ಹೊಸಅಕ್ಕಿ ಬಿಸಿಬೆಲ್ಲದ ಸಿಹಿಸಿಹಿ ಹೂರಣ
*ಕುಮಾರಕವಿನಟರಾಜ್
ರೈತ-ಬಸವಣ್ಣ
ಬೆವರುಸುರಿಸಿ ಬೆತ್ತಿಬೆಳೆವನು ಹೊಸಫ಼ಸಲು
ದೇಶದ ಬೆನ್ನೆಲುಬಾಗಿರುವ ನಮ್ಮ ರೈತಣ್ಣ
ರಕ್ತಸುರಿಸಿ ಉತ್ತಿದುಡಿವನು ಹೊಲಗದ್ದೆಬಯಲು
ರೈತನ ಉಸಿರಾಗಿರುವ ನಂದಿನಿ ಬಸವಣ್ಣ
*ಕುಮಾರಕವಿನಟರಾಜ್
ಸಂ-ಕ್ರಾಂತಿಪುಢಾರಿ
ಉತ್ತಲಿಲ್ಲ ಬಿತ್ತಲಿಲ್ಲ ಉಂಡಾಡಿ ಗುಂಡ
ಉಂಡೂಹೋದ ಕೊಂಡೂಹೋದ ಚಂಡ
ಧರೆದುಡಿಮೆಗೆ ದಂಡ, ಕೂಳುಬಾಳಿಗೆ ಭಂಡ
ಅಕಾಲಿಕ ನಾಯಿ-ನರಿ ತಿನ್ನಲಿ ಅವನ ಪಿಂಡ
*ಕುಮಾರಕವಿನಟರಾಜ್.
ಕೋವಿಡ್-೧೯ ಸಂತತಿ
ದುಷ್ಟಚೀನಾದಿಂದ ಆವಿಷ್ಕಾರಗೊಂಡ ಉರಿ
ಮನುಕುಲವನ್ನೇ ಕಾಡುತ್ತಿದೆ ಮಹಾಮಾರಿ
೩-೪ನೇ ಅಲೆಯ ಓಮಿಕ್ರಾನ್ ಜಗತ್ ದಳ್ಳುರಿ
ಸಂ-ಕ್ರಾಂತಿ ಕಿಚ್ಚಾಯಿಸಿ ಸುಟ್ಟುಬೂದಿ ಮಾಡಿರಿ
*ಕುಮಾರಕವಿನಟರಾಜ್
ನಿಸರ್ಗ ವಿಕೋಪ
ಅತಿವೃಷ್ಟಿಯಾದರೆ ಮಣ್ಣಿನಮಗನಿಗೆ ಅನಿಷ್ಟ
ಅನಾವೃಷ್ಟಿಯಾದರೂ ಇವನಿಗೇ ಅತಿಕಷ್ಟ
ಸೃಷ್ಟಿವಿಕೋಪಕ್ಕೆ ಬಲಿಪಶುವಾಗೊ ನತದೃಷ್ಟ
ಇವನಿಗೆ ಸಹಾಯಹಸ್ತ ನೀಡೋರು ದೇವರಿಗಿಷ್ಟ
*ಕುಮಾರಕವಿನಟರಾಜ್

ನಾಗರಬಾವಿ, ಬೆಂಗಳೂರು-೫೬೦೦೭೨