ಮೈಸೂರು. ನವೆಂಬರ್-ಮನೆಕಳ್ಳತನ ಮಾಡಿ ಹಣ ಪಡವೆ ದೋಚುತ್ತಿದ್ದ ಕುಖ್ಯಾತ ಕಳ್ಳರಿಬ್ಬರನ್ನು ಬಂದಿಸಿ, ಒಟ್ಟು 75,00,000/-ರೂ ಮೌಲ್ಯದ 1 ಕೆಜಿ 439 ಗ್ರಾಂ ತೂಕದ ಚಿನ್ನಾಭರಣ ವಶ ಪಡಿಸಿಕೊಳ್ಳುವಲ್ಲಿ ನಗರದ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಮೈಸೂರು ನಗರದಲ್ಲಿ ಇತ್ತೀಚೆಗೆ ಮನೆಗಳ್ಳತನ ವರದಿಯಾಗುತ್ತಿದ್ದ ಹಿನ್ನಲೆಯಲ್ಲಿ ಈ ಪ್ರಕರಣಗಳ ಪತ್ತೆ ಸಂಬಂಧ ಪೊಲೀಸ್ ಆಯುಕ್ತರವರಾದ ಡಾ|| ಚಂದ್ರಗುಪ್ತ, ಐ.ಪಿ.ಎಸ್.ರವರು ಸಿ.ಸಿ.ಬಿ.ಘಟಕದ ಎ.ಸಿ.ಪಿ. ವಿ.ಮರಿಯಪ್ಪನವರ ನೇತೃತ್ವದಲ್ಲಿ ಪೊಲೀಸ್ ಇನ್ಸ್‍ಪೆಕ್ಟರ್ ಆರ್. ಜಗದೀಶ್ ಮತ್ತು ಸಿಬ್ಬಂದಿಗಳಿದ್ದ ವಿಶೇಷ ತಂಡವನ್ನು ರಚಿಸಿದ್ದರು. ಈ ವಿಶೇಷ ತಂಡವು ನವೆಂಬರ್ 01 ರಂದು ಮೈಸೂರು ನಗರದ ಅಶೋಕ ರಸ್ತೆಯಲ್ಲಿರುವ ಜ್ಯುವೆಲ್ಲರಿ ಅಂಗಡಿ ಲಿಂಗರಾಜು 38ವರ್ಷ, ಸೈಯದ್ ಶಾಹೀದ್ 40ವರ್ಷ, ಎಂಬುವವರುಗಳನ್ನು ವಶಕ್ಕೆ ಪಡೆದು ಸ್ಥಳದಲ್ಲಿ ಅವರನ್ನು ಪರಿಶೀಲಿಸಿದಾಗ ಆರೋಪಿ ಲಿಂಗರಾಜು ವಶದಲ್ಲಿ ಒಂದು ಚಿನ್ನದ ಕಾಸಿನ ಸರವಿದ್ದು, ಹಿಂದೂಗಳು ಧರಿಸುವ ಚಿನ್ನದ ಆಭರಣವಾದ್ದರಿಂದ ಅನುಮಾನ ಬಂದು ಸಿ.ಸಿ.ಬಿ. ಘಟಕಕ್ಕೆ ಕರೆದುಕೊಂಡು ಬಂದು ಅವರುಗಳನ್ನು ಕೂಲಂಕುಷವಾಗಿ ವಿಚಾರಣೆಗೊಳಪಡಿಸಲಾಗಿ ಈ ಇಬ್ಬರು ಆರೋಪಿಗಳು ಸೇರಿಕೊಂಡು ಇದೇ ವರ್ಷದ ಜುಲೈ ತಿಂಗಳ ಕೊನೆಯ ದಿವಸ ಮೈಸೂರು ನಗರ ಸರಸ್ವತಿಪುರಂ ಠಾಣಾ ಸರಹದ್ದಿನ ಸರಸ್ವತಿಪುರಂ 7ನೇ ಮೈನ್, 5ನೇ ಕ್ರಾಸ್ ಮನೆಯೊಂದರಲ್ಲಿ ಚಿನ್ನಾಭರಣಗಳನ್ನು ಕಳವು ಮಾಡಿದ್ದು, 2018ನೇ ಇಸವಿ ನವೆಂಬರ್ ತಿಂಗಳಿನಲ್ಲಿ ಮೈಸೂರು ನಗರದ ಬನ್ನಿಮಂಟಪದಲ್ಲಿ ಒಂದು ಮನೆಯೊಳಗೆ ಇಟ್ಟಿದ್ದ ಒಂದು ಪರ್ಸ್‍ನೊಳಗಿದ್ದ ಚಿನ್ನದ ಬಳೆಗಳನ್ನು ಆರೋಪಿ ಸೈಯದ್ ನವಾಬ್ ಕಳವು ಮಾಡಿರುವುದಾಗಿ ತಿಳಿಸಿದರು.
ಇದರ ಆಧಾರದ ಮೇರೆಗೆ ಆರೋಪಿಗಳನ್ನು ನವೆಂಬರ್ 02 ರಂದು ನ್ಯಾಯಾಲಯಕ್ಕೆ ಹಾಜರುಪಡಿಸಿ, ನಂತರ ಪೊಲೀಸ್ ವಶಕ್ಕೆ ಪಡೆದುಕೊಂಡಿರುತ್ತಾರೆ. ಆರೋಪಿಗಳು ಕಳುವು ಮಾಡಿದ್ದ ಚಿನ್ನಾಭರಣಗಳನ್ನು ಹುಬ್ಬಳ್ಳಿ, ತುಮಕೂರು, ಬೆಂಗಳೂರು, ಮೈಸೂರು ನಗರದಲ್ಲಿ ವಿವಿಧ ಸ್ಥಳಗಳಲ್ಲಿ ವಿಲೇವಾರಿ ಮಾಡಿದ್ದು, ಈ ಸ್ಥಳಗಳಿಂದ ಮೇಲ್ಕಂಡ 02 ಪ್ರಕರಣಗಳಿಗೆ ಸಂಬಂದಿಸಿದಂತೆ ಒಟ್ಟು ಸುಮಾರು ರೂ. 75,00,000/- 1 ಕೆ.ಜಿ. 439 ಗ್ರಾಂ ತೂಕದ ಚಿನ್ನಾಭರಣಗಳನ್ನು ವಶಕ್ಕೆಪಡಿಸಿಕೊಂಡಿರುತ್ತಾರೆ.
ಈ ಪತ್ತೆ ಕಾರ್ಯವನ್ನು ಮೈಸೂರು ನಗರದ ಡಿ.ಸಿ.ಪಿ. (ಕಾನೂನು ಮತ್ತು ಸುವ್ಯವಸ್ಥೆ) ರವರಾದ ಡಾ||ಎ.ಎನ್. ಪ್ರಕಾಶಗೌಡ, ಐ.ಪಿ.ಎಸ್. ಹಾಗೂ ಡಿ.ಸಿ.ಪಿ. (ಕೇಂದ್ರಸ್ಥಾನ, ಅಪರಾಧ ಮತ್ತು ಸಂಚಾರ) ರವರಾದ ಎಂ.ಎಸ್.ಗೀತಪ್ರಸನ್ನರವರ ಮಾರ್ಗದರ್ಶನದಲ್ಲಿ, ಎ.ಸಿ.ಪಿ. ವಿ.ಮರಿಯಪ್ಪರವರ ನೇತೃತ್ವದಲ್ಲಿ ಸಿ.ಸಿ.ಬಿ.ಯ ಇನ್ಸ್‍ಪೆಕ್ಟರ್ ಆರ್. ಜಗದೀಶ್, ಎ.ಎಸ್.ಐ.ಗಳಾದ ಯು. ಉಮೇಶ್, ಡಿ.ಜಿ. ಚಂದ್ರೇ ಗೌಡ, ಅಲೆಕ್ಸಾಂಡರ್, ಸಿಬ್ಬಂದಿಗಳಾದ ರಾಮಸ್ವಾಮಿ, ಚಿಕ್ಕಣ್ಣ, ಪರಮೇಶ, ಶಿವರಾಜು, ಲಕ್ಷ್ಮಿಕಾಂತ, ಗಣೇಶ್.ಎಂ.ಆರ್. ಯಾಕೂಬ್ ಷರೀಪ್, ಸಲೀಂ ಪಾಷ, ಶ್ರೀನಿವಾಸ ಪ್ರಸಾದ್, ಆನಂದ್, ಅನಿಲ್, ಚಂದ್ರಶೇಖರ್, ಸಿ.ಎಂ.ಮಂಜು, ಕುಮಾರ್ ಮಹಿಳಾ ಸಿಬ್ಬಂದಿ ರಾಜಶ್ರೀ ಜಾಲವಾದಿ, ಗೌತಮ್, ಸೋಮು ತಾಂತ್ರಿಕ ಕೋಶದ ಪೊಲೀಸ್ ಇನ್ಸ್‍ಪೆಕ್ಟರ್ ಲೋಲಾಕ್ಷಿ. ಟಿ.ಎಸ್. ಸಿಬ್ಬಂದಿಗಳಾದ ಗುರುದೇವಾರಾಧ್ಯ, ಮಂಜು.ಸಿ.ಎಂ, ಶ್ಯಾಂ ಸುಂದರ್, ಕುಮಾರ್. ಪಿ ರವರು ಮಾಡಿರುತ್ತಾರೆ.

ಈ ಪತ್ತೆ ಕಾರ್ಯವನ್ನು ಮೈಸೂರು ನಗರದ ಪೊಲೀಸ್ ಆಯುಕ್ತರಾದ ಡಾ|| ಚಂದ್ರಗುಪ್ತ, ಐ.ಪಿ.ಎಸ್., ರವರು ಪ್ರಶಂಶಿಸಿರುತ್ತಾರೆ.

By admin