ಚಾಮರಾಜನಗರ: ಮಹೇಶ್ ಕುದರ್ ಅಭಿಮಾನಿ ಬಳಗವ ವತಿಯಿಂದ ಮಾಜಿ ಸಂಸದ, ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ಅವರ ೬೧ ನೇ ಹುಟ್ಟುಹಬ್ಬವನ್ನು ತಾಲೂಕಿನ ಭೋಗಾಪುರ ದೀಪಾ ಅಕಾಡೆಮಿ ದೃಷ್ಟಿವಿಕಲಚೇತನ ವಿಕಲಚೇತನ ವಸತಿಶಾಲೆ, ಪುನಶ್ಚೇತನ ಕೇಂದ್ರದ ಮಕ್ಕಳೊಂದಿಗೆ ಆಚರಿಸಲಾಯಿತು.
ಇದೇವೇಳೆ ಅವರು ಶಾಲಾಮಕ್ಕಳಿಗೆ ಮಧ್ಯಾಹ್ನದ ಭೋಜನಾ ವ್ಯವಸ್ಥೆ ಮಾಡಲಾಗಿತ್ತು. ಜತೆಗೆ ಅವರು ಮಕ್ಕಳೊಂದಿಗೆ ಸಹಪಂಕ್ತಿ ಭೋಜನ ಮಾಡಿದರು.
ಇದೇವೇಳೆ ಮಹೇಶ್ ಕುದರ್ ಅಭಿಮಾನಿ ಬಳಗದ ಅಧ್ಯಕ್ಷ ಚಿಕ್ಕಹೊಳೆ ಕುಮಾರ್ ಮಾತನಾಡಿ, ಮಾಜಿಸಂಸದ, ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ಅವರ ೬೧ ನೇ ಹುಟ್ಟುಹಬ್ಬವನ್ನು ದೀಪಾಅಕಾಡೆಮಿ ಅಂಧಮಕ್ಕಳೊಂದಿಗೆ ಕೇಕ್ ಕತ್ತರಿಸುವ ಮೂಲಕ ಆಚರಣೆ ಮಾಡಿಕೊಳ್ಳಲಾಗುತ್ತಿದೆ. ಮುಂದಿನದಿನಗಳಲ್ಲಿ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳಲಾಗುವುದು ಎಂದರು.
ಮಹೇಶ್ ಕುದರ್, ಉಮೇಶ್ ಕುದರ್, ಶ್ರೀನಿಧಿ ಕುದರ್, ಸಿದ್ದು, ಅಭಿಮಾನಿಬಳಗದ ಗೌರವಾಧ್ಯಕ್ಷ ಉಮ್ಮತ್ತೂರುಚಂದ್ರು, ಉಪಾಧ್ಯಕ್ಷ ತಿಲಕ್, ಮರಿಯಾಲದಹುಂಡಿ ಕುಮಾರ್. ರಾಮಸಮುದ್ರ ಗೋವಿಂದೇಗೌಡ, ಪರಶಿವ, ಶಿಕ್ಷಕಿ ಜ್ಯೊತಿ ಹಾಜರಿದ್ದರು.