ಮೈಸೂರು: ನವದೆಹಲಿಯಲ್ಲಿನ ರೈಲ್ವೆ ಮಂಡಳಿಯ ರೈಲ್ವೆ ಸಂರಕ್ಷಣಾ ದಳದ ಮಹಾನಿರ್ದೇಶಕರ ನಿರ್ದೇಶನದಂತೆ ಮೈಸೂರು ವಿಭಾಗದ ರೈಲ್ವೆ ಸಂರಕ್ಷಣಾ ದಳದ ವತಿಯಿಂದ ಇಂದು ಆಜಾದಿ ಕಾ ಅಮೃತ್ ಮಹೋತ್ಸವ್ ಅಂಗವಾಗಿ ಬೈಕ್ ಅಭಿಯಾನ ಕಾರ್ಯಕ್ರಮ ಆಯೋಜಿಸಲಾಯಿತು.
ಮೈಸೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ರಾಹುಲ್ ಅಗರ್ವಾಲ್ ರವರು ಮೈಸೂರು ರೈಲ್ವೆ ನಿಲ್ದಾಣದ ಆವರಣದಿಂದ ಪ್ರಾರಂಭವಾದ ಬೈಕ್ ಅಭಿಯಾನಕ್ಕೆ ಚಾಲನೆ ನೀಡಿದರು. ರೈಲ್ವೆ ಸಂರಕ್ಷಣಾ ದಳದ ಸುಮಾರು ೧೦ ಸಿಬ್ಬಂದಿಗಳು ೫ ಬೈಕ್‌ಗಳಲ್ಲಿ ವಿವಿಧ ರಾಜ್ಯಗಳ ಮುಖಾಂತರ ಸಂಚರಿಸಿ ಅಂತಿಮವಾಗಿ ಆಗಸ್ಟ್ ೧೪ ರಂದು ನವದೆಹಲಿ ತಲುಪಲಿದ್ದಾರೆ.
ನಂತರ ಮಾತನಾಡಿದ ಶ್ರೀ ರಾಹುಲ್ ಅಗರ್ವಾಲ್ ರವರು, ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದ ಭಾರತ ಸರ್ಕಾರವು ೭೫ ವರ್ಷಗಳ ಸ್ವಾತಂತ್ರ್ಯ ಆಚರಣೆಯ ಸ್ಮರಣಾರ್ಥ ?ಆಜಾದಿ ಕಾ ಅಮೃತ್ ಮಹೋತ್ಸವ್?ನ ಅಂಗವಾಗಿ ಬೈಕ್ ಅಭಿಯಾನ ಆಯೋಜಿಸಿದೆ. ಭಾರತದ ಸ್ವಾತಂತ್ರ್ಯವನ್ನು ದೇಶಾದ್ಯಂತ ಆಚರಿಸಲಾಗುತ್ತಿದೆ. ?ಆಜಾದಿ ಕಾ ಅಮೃತ್ ಮಹೋತ್ಸವ್? ಮತ್ತು ರೈಲ್ವೆ ಸಂರಕ್ಷಣಾ ಪಡೆಗಳ ಸಾಧನೆಗಳ ಕುರಿತು ಸಂದೇಶ ಮೂಡಿಸಲು ಮತ್ತು ಜಾಗೃತಿಯನ್ನು ಹರಡಲು ಅಭಿಯಾನದಲ್ಲಿ ಭಾಗವಹಿಸುವವರಿಗೆ ತಿಳಿಸಲಾಯಿತು.
ಮೈಸೂರು ವಿಭಾಗದ ವಿಭಾಗೀಯ ಸಂರಕ್ಷಣಾ ಆಯುಕ್ತರಾದ ಶ್ರೀ ಥಾಮಸ್ ಜಾನ್, ಹಿರಿಯ ವಿಭಾಗೀಯ ವಿತ್ತೀಯ ವ್ಯವಸ್ಥಾಪಕರಾದ ಶ್ರೀ ಲೆವಿನ್ ಪ್ರಭು ಮತ್ತು ಇತರ ಹಿರಿಯ ಅಧಿಕಾರಿಗಳು ದ್ವಜ ತೋರಿಸಿ ಬೈಕ್ ಅಭಿಯಾನವನ್ನು ಪ್ರಾರಂಭಿಸುವ ಸಂದರ್ಭದಲ್ಲಿ ಉಪಸ್ಥಿತರಿದ್ದರು.