ಅಟಲ್ ಜೀ ಜನ್ಮದಿನವನ್ನು ಹಿಂದುಳಿದ ವರ್ಗಗಳ ಮೊರ್ಚಾ ವತಿಯಿಂದ “”ಸುಶಾಸನ ದಿನವಾಗಿ”” ಆಚರಣೆ..
ಇಂದು ಭಾರತೀಯ ಜನತಾ ಪಾರ್ಟಿಯ ಮೈಸೂರು ನಗರದ ಹಿಂದುಳಿದ ವರ್ಗಗಳ ಮೊರ್ಚಾದ ವತಿಯಿಂದ ರೈತದಿನ ಹಾಗೂ ಸೇವಾ ಚಟುವಟಿಕೆಯಾಗಿ “” ಸುಶಾಸನ ದಿನ””ವನ್ನು ನರಸಿಂಹ ರಾಜ ಕ್ಷೇತ್ರದ ದಲ್ಲಿರುವ ಬಲಮುರಿ ಗಣಪತಿ ದೇವಾಲಯ ಸ್ವಚತೆ ಮಾಡುವ ಮೂಲಕ ಆಚರಿಸಲಾಯಿತು..
ಬೆಳ್ಳಗೆ 7 ಗಂಟೆಗೆ ನಗರ ಅಧ್ಯಕ್ಷರಾದ ಜೋಗಿಮಂಜು ರವರ ತಂಡ ಸ್ವಚತೆಯ ಸಲಕರಣೆಗಳೊಂದಿಗೆ ರಾಜಕುಮಾರ್ ರಸ್ತೆಯಲ್ಲಿರುವ ಬಲಮುರಿ ಗಣಪತಿ ದೇವಾಲಯ ಸುತ್ತಮುತ್ತಲಿನ ಗಿಡ ಗಂಟೆ ಗಳನ್ನು ಕಿತ್ತು ಸ್ವಚತೆ ಮಾಡಲು ಪ್ರಾರಂಭಿಸಿದರು, ನಂತರ ಆ ಭಾಗದ ಪೌರಕಾರ್ಮಿಕರು ಗಳನ್ನು ಕರೋನಾ ವಾರಿಯರ್ಸ್ ಗಳೆಂದು ಪರಿಗಣಿಸಿ ಶ್ರೀ ಬಾಲಸುಂದರ್,ಶ್ರೀಮತಿ ಸರೊಜಮ್ಮ,ಶ್ರೀಮತಿ ನಾಗರತ್ನ ಪೌರಕಾರ್ಮಿಕರನ್ನು ಸನ್ಮಾನಿಸಿ ಸಾರ್ವಜನಿಕರಿಗೆ ಉಚಿತವಾಗಿ ಮಾಸ್ಕು ಮತ್ತು ಸ್ಯಾನಿಟೈಸರ್ ವಿತರಿಸಲಾಯಿತು..
ನಂತರ ಮಾತನಾಡಿದ ನಗರ ಅಧ್ಯಕ್ಷರಾದ ಜೋಗಿಮಂಜು ಅಟಲ್ ಜೀ ರವರು ಅಜಾತ ಶತ್ರು, ಹಿಂದೆ ಅವರು ಪ್ರಧಾನಿ ಮಂತ್ರಿಗಳಾದ ಸಂಧರ್ಭದಲ್ಲಿ ಫೋಕ್ರಾನ್ ಅಣು ಬಾಂಬು ತಯಾರು ಮಾಡುವ ಮೂಲಕ ಎಲ್ಲ ದೇಶದವರಿಗೂ ನಾವು ಸರಿ ಸಾಟಿ ಎಂದು ತೋರಿಸಿದರು,ಪಾಕ್ ನ ಉಗ್ರಗಾಮಿಗಳನ್ನು ಸದೆಬಡಿದು ಕಾರ್ಗಿಲ್ ಯುದ್ದದಲ್ಲಿ ಸೈನಿಕರಿಗೆ ಆತ್ಮಸ್ಥೈರ್ಯ ತುಂಬಿ ಜಯಶಾಲಿ ಯಾದವರು,ಇವರು ಮತ್ತು ಎಲ್.ಕೆ.ಆಡ್ವಾಣಿ ಯವರ ಸ್ನೇಹ ದೇಶದ ಎಲ್ಲ ಪ್ರಜೆಗಳಿಗೆ ಮಾದರಿ,ಇಂದು ಇವರ 96 ನೇ ಹುಟ್ಟು ಹಬ್ಬ ವನ್ನು ಭಾಜಪ”” ರೈತ ದಿನ”” ಹಾಗು””” ಸುಹಾಸನ ದಿನಾಚರಣೆ””” ಯಾಗಿ ಆಚರಿಸುವ ಮೂಲಕ ಅವರಿಗೆ ಗೌರವ ಸಲ್ಲಿಸುತ್ತಿರುವುದು ನಮಗೆ ಸಂತೋಷವಾಗಿದೆ,ಹಾಗೆಯೆ ಮೈಸೂರಿನಲ್ಲಿ ಯಾವುದಾದರೂ ಜಾಗದಲ್ಲಿ ಅಟಲ್ ಜೀ ರವರ ಪ್ರತಿಮೆ ಯನ್ನು ನಗರಪಾಲಿಕೆ ನಿರ್ಮಾಣ ಮಾಡಬೇಕೆಂದು ತಿಳಿಸಿದರು…
ನಗರ ಪಾಲಿಕೆ ಸದಸ್ಯರಾದ ಸಾತ್ವಿಕ್ ಸಂದೇಶ್ ಸ್ವಾಮಿ ಮಾತನಾಡಿ ಅಟಲ್ ಜೀ ರವರು ಮಹಾನು ಪುರುಷರು, ಅವರು ಪ್ರಧಾನಮಂತ್ರಿ ಆಗಿದ್ದ ಸಂಧರ್ಭದಲ್ಲಿ ಅವರ ಆಡಳಿತ ಭಾರತದ ಎಲ್ಲ ಜನ ಸಾಮಾನ್ಯ ರ ಒಪ್ಪುವಂತಿತ್ತು ಅದೇ ರೀತಿ ಯ ಆಡಳಿತ ಈಗಿನ ಪ್ರಧಾನಿ ನರೇಂದ್ರ ಮೋದಿ ಯವರು ನಡೆಸುತ್ತಿದ್ದಾರೆ ಅಟಲ್ ಜೀ ಯವರು ಅಮರ ವಾಗಿದ್ದಾರೆ ಎಂದು ಸ್ಮರಿಸಿದರು…
ಈ ಸಂಧರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಗಳಾದ ಸುರೇಶ್ ಬಾಬು,ರಾಜ್ಯ ಸದಸ್ಯರಾದ ಉಮೇಶ್ ನಗರ ಪಾಲಿಕೆ ಸದಸ್ಯರಾದ ಸಾತ್ವಿಕ್ ಸಂದೇಶ್ ಸ್ವಾಮಿ, ಪ್ರಧಾನ ಕಾರ್ಯದರ್ಶಿ ಗಳಾದ ಗೋಪಾಲ್,ಮಣಿರತ್ನಂ,ನರಸಿಂಹ ರಾಜ ಕ್ಷೇತ್ರದ ಅಧ್ಯಕ್ಷ ನಾಗೇಶ್,ಶಿವರಾಜ್, ಮಹದೇವ್,ಜಗದೀಶ್, ಪ್ರಸಾದ್,ಮಂಜುನಾಥ್,ಹರೀಶ್ ಅಂಕಿತ್, ಸೂರಜ್,ಜೀವನ್, ನಿತಿನ್ ಅರಸ್,ಅಚ್ಚಯ್ಯ,ಮಂಜು, ಮುಂತಾದವರು ಇದ್ದರು..