ಚಾಮರಾಜನಗರ: ಚಾಮರಾಜನಗರ ಕೃಷಿಉತ್ಪನ್ನ ಮಾರುಕಟ್ಟೆ ಸಮಿತಿ ಚುನಾವಣೆ ನಿರ್ದೇಶಕ ಸ್ಥಾನಕ್ಕಾಗಿ ವರ್ತಕರ ಕ್ಷೇತ್ರದಿಂದ ರ್ಧಿಸಿರುವ ವೆಂಕಟರಾವ್(ಎಸ್,ಎನ್.ಪಿ) ಅವರು ಇಂದು ನಗರದ ಮಾರುಕಟ್ಟೆಯಲ್ಲಿ ವರ್ತಕ ಕ್ಷೇತ್ರದ ಮತದಾರರಲ್ಲಿ ಮತಯಾಚಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರಉ ಏ.೧೭ ರಂದು ನಡೆಯಲಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಚುನಾವಣೆಯಲ್ಲಿ ನಿರ್ದೇಶಕ ಸ್ಥಾನಕ್ಕೆ ವರ್ತಕರ ಕ್ಷೇತ್ರದಿಂದ ಸ್ಪರ್ಧಿಸಿದ್ದು ವರ್ತಕರ ಪರವಾಗಿ ಕೆಲಸ ಮಾಡುವ ಇಚ್ಛೆಯುಳ್ಳವನಾಗಿದ್ದು ಎಪಿಎಂಸಿಯಲ್ಲಿ ವರ್ತಕರ ಪರವಾದ ಅಭಿವೃದ್ದಿ ಕೆಲಸಗಳನ್ನು ಮಾಡಲು ಬದ್ದನಾಗಿದ್ದೇನೆ, ಹೀಗಾಗಿ ಈ ಬಾರಿ ಗೆಲ್ಲಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಎಸ್.ಎನ್.ಪಿ ಮಲ್ಲಿಕ್ ಪ್ರಭು ಕಾರ್ನಾಗೇಶ್ ಈರುಳ್ಳಿ ಮಂಡಿ ರಘು ಪ್ರರ್ಮಾನ್ ಆಲ್ತ್ಪ್ಮುರುಘು ವೀಜಿ ಸ್ವಾಮಿ ಸೇರಿದಂತೆ ಇತರರು ಹಾಜರಿದ್ದರು.
