ಮೈಸೂರು ನಾಯಕರ ಪಡೆ ವತಿಯಿಂದ ನಗರದ ನಜರ್ ಬಾದ್ ನಲ್ಲಿರುವ ಮಿನಿ ವಿಧಾನಸೌಧದ(ತಾಲ್ಲೂಕು ಕಛೇರಿ) ಮುಂಬಾಗದ ಉದ್ಯಾನವನದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಪುತ್ಥಳಿ ನಿರ್ಮಾಣಕ್ಕೆ ಆಗ್ರಹಿಸಿ ನಗರಪಾಲಿಕೆ ಮುಂಬಾಗದಲ್ಲಿರುವ ಆಂಚೆ ಪೆಟ್ಟಿಗೆಯ ಬಳಿ ಪೋಸ್ಟ್ ಕಾರ್ಡ್ ಚಳುವಳಿ ನಡೆಸಲಾಯಿತು
ಕಳೆದೊಂದು ದಶಕದ ಬೇಡಿಕೆಯಾದ ವಾಲ್ಮೀಕಿ ಪ್ರತಿಮೆ ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ನಿರ್ಮಿಸಲು ಬೇಡಿಕೆಯನ್ನು ನಾಯಕ ಸಮುದಾಯ ಹೊಂದಿದೆ ಅದಕ್ಕೆ ಸ್ಪಂದಿಸಿ ಜಿಲ್ಲಾ ಉಸ್ತುವಾರಿ ಸಚಿವರು ಶಾಸಕರು ಸಂಸದರು ಭರವಸೆಯನ್ನು ಕೊಟ್ಟಿದ್ದಾರೆ ಅದರಂತೆಯೇ ನಗರಪಾಲಿಕೆ ಕೌನ್ಸಿಲ್ ಸಭೆಯಲ್ಲಿ ವಾಲ್ಮೀಕಿ ಪ್ರತಿಮೆಯನ್ನು ಪ್ರತಿಷ್ಟಾನೆಗೆ ನಿರ್ಣಿಯಿಸಿದ್ದು ಸಂಬಂಧಿಸಿದಂತೆ ಪ್ರಾಧಿಕಾರದವರು ನಿರ್ಲಕ್ಷ್ಯ ತೋರಿದ್ದಾರೆ ಶ್ರೀರಾಮನ ಹೆಸರೇಳಿ ಅಧಿಕಾರಕ್ಕೆ ಬಂದಿರುವ ರಾಜ್ಯಸರ್ಕಾರದವರು ಜಗತ್ತಿಗೆ ಶ್ರೀರಾಮನನ್ನು ಪರಿಚಯಿಸಿದ ಶ್ರೀ ಮಹರ್ಷಿ ವಾಲ್ಮೀಕಿ ರವರ ಬಗ್ಗೆ ನಿರ್ಲಕ್ಷ ಯಾಕ? ಎಂಬ ಪ್ರಶ್ನೆ ಏಳುತ್ತದೆ ಇವರ ಪ್ರವೃತ್ತಿಯನ್ನು ಖಂಡಿಸಿ ಇಂದು ಮುಖ್ಯಮಂತ್ರಿಗಳಿಗೆ ಆಂಚೆ ಪತ್ರ ಹಾಕುವ ಒತ್ತಾಯಿಸಲಾಯಿತು ನಾಯಕರ ಪಡೆ ಅದ್ಯಕ್ಷರಾದ ವಕೀಲ
ಪಡುವಾರಹಳ್ಳಿ ಎಂ ರಾಮಕೃಷ್ಣ ರಾಜು ಮಾರ್ಕೆಟ್, ಶ್ರೀದರ ಬೆಟ್ಟ,ಗೋವಿಂದರಾಜು, ತಿಮ್ಮನಾಯಕ,ರಮನಹಳ್ಳಿ ಶಿವಣ್ಣ,ಅಜಯ್,ಕ್ಯಾತಮಾರನಹಳ್ಳಿ ಯೋಗೇಶ್,ನವೀನ್,ಸಂತೋಷ ಮತ್ತಿತರಿದ್ದರು

By admin