ಅಮೋಘ ಅಪೂರ್ವದಾ 76ನೇ ಸ್ವತಂತ್ರೋತ್ಸವ
ಆಚರಿಸೆ ಸ್ವರಾಜ್ಯದ ಅಮೃತ ಮಹೋತ್ಸವ
ಇರಲಿ ಇದ್ದೇಇರಲಿ ಇರುವೆಗಳಂತೆ ಒಮ್ಮತ
ಈರ್ಷ್ಯಾಸೂಯೆ ಸುಟ್ಟು ಒಂದಾಗಲಿ ಸರ್ವಮತ
ಉತ್ತಮರನ್ನೇ ಆರಿಸಿ ಭಾರತ ಗದ್ದುಗೆ ನೀಡೋಣ
ಊರ್ಜಿತವಾಗುವಂತೆ ದೇಶದ ಸೇವೆಯ ಮಾಡೋಣ
ಋಷಿ ಮುನಿಗಳ ತಪೋ ಭೂಮಿ ಈ ನಮ್ಮ ನಾಡು
ಎಂಜಲಾಸೆ ತೋರುವವರನ್ನ ಒದ್ದೋಡಿಸೋಣ
ಏನೇ ಬ(ಇ)ರಲಿ ಸ್ವರಾಜ್ಯವನ್ನ ಕಾಪಾಡಿಕೊಳ್ಳೋಣ
ಐದಾರು ಆಮಿಷಕ್ಕೆ ಮತವನ್ನ ಮಾರೋದು ನೀಚತನ
ಒರುಕ್ಷಣದ ಸುಖಕ್ಕೆ ನರಕವಾದೀತು ಜೀವಮಾನ
ಓಡಿಸೋಣ ಧರ್ಮ-ದೇಶ ದ್ರೋಹಿಗಳ ಪ್ರತಿಕ್ಷಣ
ಔದಾರ್ಯ ಮೆರೆಯೋಣ ಸ್ಥಾಪಿಸುತೆ ಶಾಂತಿವನ
ಅಂತರಂಗ ಬಹಿರಂಗ ಶುದ್ಧಿಯಿಂದ ಅನುದಿನ
ಆಃ ಎನುವಂತೆ ಬೆಳೆಸಿ ಉಳಿಸಿ ಸರ್ವಜನಾಂಗದ ತೋಟವನ್ನ
ವಿಶ್ವಮಾನವರಾಗಲು ಭೀಷ್ಮ ಪ್ರತಿಜ್ಞೆ ಮಾಡೋಣ

ಕುಮಾರಕವಿ ಬಿ.ಎನ್.ನಟರಾಜ 9036976471