ಹರದನಹಳ್ಳಿಯಲ್ಲಿ ಪಿಎಸಿಸಿ ನೂತನ ಮಳಿಗೆ, ಗೋದಾಮು ಕಟ್ಟಡ ನಿರ್ಮಾಣ ಶಂಕುಸ್ಥಾಪನಾಸಮಾರಂಭ
ಚಾಮರಾಜನಗರ: ಜಿಲ್ಲೆಯಲ್ಲಿನ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಬೆಳವಣಿಗೆ ಹಿನ್ನೆಲೆಯಲ್ಲಿ ಎಂಸಿಡಿಸಿಸಿ ಬ್ಯಾಂಕಿನಿಂದ ಜಿಲ್ಲೆಗೆ ೩೦೦ ಕೋಟಿ ಸಾಲಮಂಜೂರು ಮಾಡಲಾಗಿದೆ.

ಎಂದು ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಜಿ.ಡಿ.ಹರೀಶ್‌ಗೌಡ ಹೇಳಿದರು. ತಾಲೂಕಿನ ಹರದನಹಳ್ಳಿ ಗ್ರಾಮದಲ್ಲಿ ಮಂಗಳವಾರ ಎಂಸಿಡಿಸಿಸಿ ಬ್ಯಾಂಕ್, ನಬಾರ್ಡ್ ವಿಶೇಷಪುನವರ್ಧನ ಯೋಜನೆಯಡಿ ಪಿಎಸಿಎಸ್ ಮಲ್ಟಿಕೇರ್ ಸೆಂಟರ್, ಮಳಿಗೆ ಹಾಗೂ ಗೋದಾಮುಕಟ್ಟಡ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ವೇದಿಕೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಜಿಲ್ಲೆಯಲ್ಲಿನ ಪ್ರಾಥಮಿಕ ಕೃಷಿಪತ್ತಿನ ಸಹಕಾರಸಂಘಗಳು ಉತ್ತಮವಾಗಿ ನಡೆಯುತ್ತಿದ್ದು, ಸಂಘಗಳ ವ್ಯಾಪ್ತಿಯ ರೈತರ ಕೃಷಿಸೇರಿದಂತೆ ನಾನಾಚಟುವಟಿಕೆಗಳಿಗೆ ಜಿಲ್ಲೆಗೆ ೩೦೦ ಕೋಟಿ ರೂ.ಗಳಷ್ಟು ಸಾಲಸೌಲಭ್ಯ ಒದಗಿಸಲಾಗಿದೆ. ಗ್ರಾಮದ ಕೃಷಿಪತ್ತಿನ ಸಹಕಾರ ಸಂಘ ೪೫ ಲಕ್ಷ ರೂ.ಗಳಷ್ಟು ಪಿಗ್ಮಿ ವಸೂಲಾತಿಯಲ್ಲೂ ಪ್ರಗತಿ ಸಾಧಿಸಿದ್ದು, ಹೆಮ್ಮೆಯ ಸಂಗತಿ ಎಂದರು.

ಜಿಲ್ಲೆಯಲ್ಲಿ ೨೭೫ ಪ್ರಾಥಮಿಕ ಕೃಷಿಪತ್ತಿನ ಸಹಕಾರಸಂಘಗಳಿದ್ದು, ಈವರಗೆ ೧೫೦ ಕ್ಕೂ ಹೆಚ್ಚು ಸಂಘಗಳಿಗೆ ಸ್ವಂತಕಟ್ಟಡ ನಿರ್ಮಿಸಲು ನೆರವು ನೀಡಲಾಗಿದೆ. ಗ್ರಾಮದ ಪಿಎಸಿಸಿ ಮಳಿಗೆ ಹಾಗೂ ಗೋದಾಮು ನಿರ್ಮಾಣಕ್ಕೆ ನಬಾರ್ಡ್‌ನಿಂದ ೨೩ ಲಕ್ಷ, ಎಂಸಿಡಿಸಿಸಿ ವತಿಯಿಂದ ೧೦ ಲಕ್ಷ, ಹೆಚ್ಚುವರಿಯಾಗಿ ೧೫ ಲಕ್ಷ ಮಂಜೂರು ಮಾಡಲಾಗುವುದು ಎಂದರು.

ಸಂಘದ ವತಿಯಿಂದ ಶೇ ೧೨ ರ ಬಡ್ಡಿದರದಲ್ಲಿ ಮಹಿಳಾಸಂಘಗಳು ಸಂಘದಿಂದ ದೊರೆಯುವ ಸಾಲಸೌಲಭ್ಯಗಳ ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.

ಸಂಘದ ಅಧ್ಯಕ್ಷ ಆರ್.ವೆಂಕಟೇಶ್ ಮಾತನಾಡಿ, ಸಂಘ ಸ್ಥಾಪನೆಯಾಗಿ ೬ ವರ್ಷಗಳಾಗಿದ್ದು, ಸಂಘದ ಸದಸ್ಯರ ಸಂಪೂರ್ಣ ಸಹಕಾರದೊಂದಿಗೆ ಸಂಘ ಅಭಿವೃದ್ಧಿಯತ್ತ ಪಥದಲ್ಲಿ ನಡೆಯುತ್ತಿದ್ದು, ಇದೇ ರೀತಿಯ ಸಹಕಾರ ಮುಂದಿನದಿನಗಳಲ್ಲೂ ಸಿಗುವಂತಾಗಬೇಕು ಎಂದರು.
ಮುಖ್ಯಕಾರ್ಯನಿರ್ವಾಹಕ ಸಿದ್ದರಾಜು ಸಂಘ ನಡೆದು ಬಂದ ಹಾದಿಕುರಿತು ಮಾತನಾಡಿದರು.

ಚಾಮುಲ್ ನಿರ್ದೇಶಕ, ಎಂಸಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಂ.ಪಿ.ಸುನಿಲ್, ನಿರ್ದೇಶಕ ಬಿ.ಜಿ.ನಾಗೇಂದ್ರಕುಮಾರ್, ಆದಿಶೇಷನ್ ಗೌಡ, ಮುಖ್ಯಕಾರ್ಯನಿರ್ವಹಣಾಧಿಕಾರಿ ಬಿ.ಸಿ.ಜನಾರ್ಧನ್, ಜಿಲ್ಲಾಸಹಕಾರಸಂಘಗಳ ಉಪನಿಭಂದಕಿ ಜ್ಯೋತಿ, ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ ಎಚ್.ಎನ್.ಸುಂದರ್‌ರಾಜ್, ಸಹಕಾರಸಂಘಗಳ ಸಹಾಯಕ ನಿಭಂದಕ ಕಿರಣ್‌ಕುಮಾರ್, ಅಧೀಕ್ಷಕ ನಾಗೇಶ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಸವಣ್ಣ, ತಾಪಂ ಮಾಜಿಸದಸ್ಯ ಎಚ್.ಎಂ.ಮಹದೇವಶೆಟ್ಟಿ, ನಿವೃತ್ತ ಎಂಜಿನಿಯರ್ ರಂಗರಾಮನಾಯ್ಕ, ಗ್ರಾಪಂ ಅಧ್ಯಕ್ಷೆ ಯಶೋಧಮ್ಮ, ಉಪಾಧ್ಯಕ್ಷೆ ಚಿಕ್ಕಮ್ಮ, ಪಿಎಸಿಸಿ ಉಪಾಧ್ಯಕ್ಷ ಬಂಗಾರಶೆಟ್ಟಿ, ಕಿರಿಯ ಮೇಲ್ವಿಚಾರಕ ಸಂದೀಪ್, ಜಿಪಂ ಮಾಜಿಸದಸ್ಯ ರಮೇಶ್, ಗ್ರಾಪಂ ಮಾಜಿ ಅಧ್ಯಕ್ಷ ಶಮಿತ್ ಕುಮಾರ್, ಪಿ.ವೃಷಬೇಂದ್ರಪ್ಪ ಸೇರಿದಂತೆ ಆಡಳಿತಮಂಡಳಿ, ಸಿಬ್ಬಂದಿ ಗ್ರಾಮಸ್ಥರು ಹಾಜರಿದ್ದರು.