ಚಾಮರಾಜನಗರ: ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಭಾರತ್ ಸೇವಾದಳ ಜಿಲ್ಲಾ ಸಮಿತಿ ಸಹಯೋಗದೊಂದಿಗೆ ಜಿಲ್ಲಾ ಸಮಿತಿ ಹಾಗೂ ಎಲ್ಲಾ ತಾಲ್ಲೂಕು ಸಮಿತಿಗಳ ಪದಾಧಿಕಾರಿಗಳು ಮತ್ತು ಸದಸ್ಯರಿಗೆ ಕಾಂiಗಾರ ಹಾಗೂ ಪ್ರಮಾಣಪತ್ರ ವಿತರಣೆ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮವನ್ನು ಭಾರತ್ ಸೇವಾದಳದ ಕೇಂದ್ರ ಕಾರ್ಯಕಾರಿ ಸಮಿತಿಯ ಸದಸ್ಯರಾದ ಎಂ.ವಿ. ಲಿಂಗರಾಜು ಅವರು ಉದ್ಘಾಟಿಸಿ ಮಾತನಾಡಿ ಸೇವೆಗಾಗಿ ಬಾಳು ಎಂಬ ತತ್ವದಡಿ ಸೇವಾದಳ ಸಮಿತಿ ಜಿಲ್ಲಾದ್ಯಂತ ಕೆಲಸ ಮಾಡುತ್ತಿದ್ದು,ಯುವ ಜನತೆಯಲ್ಲಿ ದೇಶಪ್ರೇಮ ಮೂಡಿಸುವಂತಹ ಮಹತ್ತರ ಕೆಲಸವನ್ನು ಮಾಡಲಾಗುತ್ತಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಭಾರದ ಸೇವಾದಳ ಸಮತಿಯ ಜಿಲ್ಲಾಧ್ಯಕ್ಷ ವೆಂಕಟನಾಗಪ್ಪಶೆಟ್ಟಿ ಮುಂದಿನ ದಿನಗಳಲ್ಲಿ ಸೇವಾದಳ ಸಮಿತಿ ವತಿಯಿಂದ ಪದಾಧಿಕಾರಿಗಳ ಸಹಕಾರ ಪಡೆದು ಜಿಲ್ಲಾ ಸಮ್ಮೇಳನ ಮಾಡಿ ರಾಜ್ಯದಲ್ಲೇ ಉತ್ತಮ ಮಾದರಿ ಸಮಿತಿ ನಿರ್ಮಾಣಕ್ಕೆ ಮುಂದಾಗಬೇಕೆಂದು ಸದಸ್ಯರಿಗೆ ತಿಳಿಸಿದರು.
ಶಿಸ್ತು,ದೇಶಪ್ರೇಮ,ಸಾಮರಸ್ಯ,ತತ್ವದಡಿ ಸೇವಾ ಮನೋಭಾವನೆಯಿಂದ ಸೇವಾದಳ ಸಮಿತಿ ಕೆಲಸ ಮಾಡುತ್ತಿದ್ದು ಮತ್ತಷ್ಟು ಸಾಮಾಜಿಕ ಚಿಂತನೆಗಳ ಮೂಲಕ ರಾಷ್ಟ್ರೀಯ ಪ್ರೇಮವನ್ನು ಜನರಲ್ಲಿ ಮೂಡಿಸುವ ಕೆಸಲವನ್ನು ಮಾಡಲಾಗುತ್ತದೆ ಎಂದರು.ಜಿಲ್ಲೆಗೊಂದು ಸೇವಾದಳ ಶಿಕ್ಷಣಸಂಸ್ಥೆ ಅಗತ್ಯವಿದ್ದು,ತರಬೇತಿ,ಸೇವಾ ಮನೋಭಾವನೆ ಮೂಡಿಸಲು ಸಂಸ್ಥೆ ನಿರ್ಮಾಣಕ್ಕೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿ ಮುಂದಿನ ೫ ವರ್ಷಗಳಲ್ಲಿ ಸಂಸ್ಥೆ ನಿರ್ಮಾಣಕ್ಕೆ ಪದಾಧಿಕಾರಿಗಳು ಸಹಕರಿಸಬೇಕೆಂದು ತಿಳಿಸಿದರು.
ಭಾರತ್ ಸೇವಾದಳ ಸಮಿತಿಯ ಜಿಲ್ಲಾ ಕಾರ್ಯದರ್ಶಿ ಮಹದೇವಯ್ಯ ಮಾತನಾಡಿ ಸೇವಾದಲ ಸಮಿತಿ ವತಿಯಿಂದ ಜಿಲ್ಲೆಯ ಶಾಲ-ಕಾಲೇಜು ವಿದ್ಯಾರ್ಥಿಗಳು ಹಾಗೂ ಸೇವಾದಳ ಶಿಕ್ಷಕರಿಗೆ ಕಾರ್ಯಾಗಾರ,ತರಬೇತಿಗಳನ್ನು ನಿರಂತರವಾಗಿ ನಡೆಸಿಕೊಂಡು ಬರಲಾಗುತ್ತಿದ್ದು ಈ ಮೂಲಕ ಶಿಸ್ತು,ದೇಶಪ್ರೇಮ,ಸಹಕಾರ ಮನೋಭಾವನೆಯನ್ನು ಸಮಾಜದಲ್ಲಿ ಬೆಳೆಸಲಾಗುತ್ತಇದೆ ಎಂದರು. ಜಿಲ್ಲಾಧ್ಯಕ್ಷರು ಹಾಗೂ ಪದಾಧಿಕಾರಿಗಳ ಸಹಕಾರದಿಂದ ಸಮಿತಿ ವತಿಯಿಂದ ಉತ್ತಮ ಕೆಲಸಗಳನ್ನು ಈಗಾಗಲೇ ಮಾಡಿಕೊಂಡು ಬರಲಾಗುತ್ತಿದೆ ಎಂದರು.
ರಾಜ್ಯ ಸಂಪನ್ಮೂಲ ಶಿಕ್ಷಕರಾದ ಡಿ,ಆರ್.ಶೇಷಾಚಲ ಅವರು ಸೇವಾದಳ ಸಮಿತಿಯ ಶಿಬಿರಾರ್ಥಿಗಳಿಗೆ ತರಬೇತಿ ನೀಡಿ ಮಾತನಾಡಿ ಹರ್ಡೀಕರ್ ಅವರು ಸ್ಥಾಪಿಸಿದ ಸೇವಾದಳದ ಧ್ಯೇಯೋದ್ದೇಶಗಳು, ಚಿಂತನೆಗಳ ಬಗ್ಗೆ ಸಮಗ್ರವಾಗಿ ವಿವರಿಸಿದರು. ಮೌಲ್ಯಾಧಾರಿತ ಶಿಕ್ಷಣದ ಮೂಲಕ ಸಮಾಜವನ್ನು ಸರಿದಾರಿಗೆ ತರಬಹುದಾಗಿದ್ದು ಶಿಕ್ಷಕರ ಮೂಲಕ ಮಕ್ಕಳಲ್ಲಿ ಶಿಸ್ತು, ದೇಶಪ್ರೇಮ ಮೂಡಿಸಲು ಸೇವಾದಳ ಶಿಕ್ಷಣ ಅಗತ್ಯವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು. ಭಾರತ ಸೇವಾದಳ ಸಮಿತಿಯ ಜಿಲ್ಲಾ ಉಪಾಧ್ಯಕ್ಷ ಮಹೇಶ್ ಜಿ. ಬಳಿಗರ್, ಭಾರತ್ ಸೇವಾದಳ ಸಮಿತಿಯ ಜಿಲ್ಲಾ ಕಾರ್ಯದರ್ಶಿ ಮಹದೇವಯ್ಯ, ಕೋಶಾಧ್ಯಕ್ಷ ಶ್ರೀನಿವಾಸ್ ಪ್ರಸಾದ್, ಸೇವಾದಳ ತಾಲ್ಲೂಕ್ ಸಮಿತಿ ಅಧ್ಯಕ್ಷರಾದ ಸಿ.ಎಂ. ನರಸಿಂಹಮೂರ್ತಿ, ಕೊಳ್ಳೇಗಾಲ ತಾಲ್ಲೂಕ್ ಅಧ್ಯಕ್ಷ ಪ್ರಕಾಶ್, ಯಳಂದೂರು ತಾಲ್ಲೂಕ್ ಅಧ್ಯಕ್ಷ ಬಸವರಾಜು, ಚಾ,ನಗರ ತಾಲ್ಲೂಕು ಉಪಾಧ್ಯಕ್ಷ ಮಲ್ಲಿಕಾರ್ಜುನ್ ,ಆದಿನಾಯಕ ನಾಗಣ್ಣ, ಜಿಲ್ಲಾ ಸಮಿತಿಯ ಸದಸ್ಯರಾದ ವೈ,ಎಂ ಮಂಜುನಾಥ್, ಷಡಕ್ಷರಿ, ತಗಡೂರಯ್ಯ, ನಾಗೇಂದ್ರ, ಅಮಿತಾ ಬಾನು, ಲತಾ, ಕಾರ್ಯದರ್ಶಿ ಮಹದೇವಪ್ಪ, ವಲಯ ಸಂಘಟಕ ಕೆ.ಈರಯ್ಯ, ಜಿಲ್ಲಾ ಸಂಘಟಕ ಅರುಣ್ ಸೇರಿದಂತೆ ಶಿಬಿರಾರ್ಥಿಗಳು ಹಾಜರಿದ್ದರು.