ಚಾಮರಾಜನಗರ: ಜಿಲ್ಲಾಡಳಿತ ಹಾಗೂ ಮೈಸೂರು ದಸರಾ ಮಹೋತ್ಸವ ಸಮಿತಿ ಸಹಯೋಗದಲ್ಲಿ ಚಾಮರಾಜನಗರ ದಸರಾ ಮಹೋತ್ಸವ ಕಾರ್ಯಕ್ರಮವು ಸೆಪ್ಟೆಂಬರ್ ೨೭ರಿಂದ ೩೦ರವರೆಗೆ ನಡೆಯಲಿದ್ದು, ಸೆಪ್ಟೆಂಬರ್ ೨೭ರಂದು ಉದ್ಘಾಟನೆ ನಡೆಯಲಿದೆ.
ವಸತಿ, ಮೂಲಸೌಲಭ್ಯ ಅಭಿವೃದ್ದಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ ಅವರು ಕಾರ್ಯಕ್ರಮ ಉದ್ಘಾಟಿಸುವರು. ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ಅಧ್ಯಕ್ಷತೆ ವಹಿಸುವರು.
ಲೋಕಸಭಾ ಸದಸ್ಯರಾದ ವಿ. ಶ್ರೀನಿವಾಸಪ್ರಸಾದ್, ಶಾಸಕರಾದ ಆರ್. ನರೇಂದ್ರ, ಎನ್. ಮಹೇಶ್, ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕೆ ನಿಗಮ ನಿಯಮಿತದ ಅಧ್ಯಕ್ಷರು ಹಾಗೂ ಶಾಸಕರಾದ ಸಿ.ಎಸ್. ನಿರಂಜನಕುಮಾರ್, ಮರಿತಿಬ್ಬೇಗೌಡ, ಡಾ. ಡಿ. ತಿಮ್ಮಯ್ಯ, ಸಿ.ಎನ್. ಮಂಜೇಗೌಡ, ಮಧು ಜಿ. ಮಾದೇಗೌಡ, ಕಾವೇರಿ ಅಚ್ಚುಕಟ್ಟು ಪ್ರದೇಶಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಜಿ. ನಿಜಗುಣರಾಜು, ನಗರಸಭೆ ಅಧ್ಯಕ್ಷರಾದ ಸಿ.ಎಂ. ಆಶಾ, ನಗರಸಭೆಯ ೨೧ನೇ ವಾರ್ಡ್ ಸದಸ್ಯರಾದ ಸುದರ್ಶನಗೌಡ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಸೆಪ್ಟೆಂಬರ್ ೨೭ರಂದು ಬೆಳಿಗ್ಗೆ ೧೦.೧೫ ಗಂಟೆಗೆ ನಗರದ ಶ್ರೀ ಚಾಮರಾಜೇಶ್ವರ ದೇವಸ್ಥಾನದಲ್ಲಿ ಪೂಜಾ ಕೈಂಕರ್ಯದೊಂದಿಗೆ ದಸರಾ ಮಹೋತ್ಸವಕ್ಕೆ ಚಾಲನೆ ದೊರೆಯಲಿದೆ. ೧೧ ಗಂಟೆಗೆ ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಜೆ.ಎಚ್. ಪಟೇಲ್ ಸಭಾಂಗಣ ಹಾಗೂ ವರನಟ ಡಾ. ರಾಜ್ ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ನೆರವೇರಲಿದೆ. ಬೆಳಿಗ್ಗೆ ೧೧ ಗಂಟೆಗೆ ಚಾಮರಾಜೇಶ್ವರ ದೇವಸ್ಥಾನದ ಆವರಣದಲ್ಲಿ ಚಿತ್ರಕಲಾ ಪ್ರದರ್ಶನ ನಡೆಯಲಿದೆ. ಮಧ್ಯಾಹ್ನ ೨.೩೦ ಗಂಟೆಗೆ ನಗರದ ಜಿಲ್ಲಾಡಳಿತ ಭವನದಿಂದ ವಿವಿಧ ಕಲಾತಂಡಗಳು ಮತ್ತು ಇಲಾಖೆಗಳಿಂದ ಸ್ತಬ್ದ ಚಿತ್ರಗಳ ಮೆರವಣಿಗೆ ಆರಂಭವಾಗಲಿದೆ. ಸಂಜೆ ೫.೩೦ ಗಂಟೆಗೆ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗದ ಮುಖ್ಯ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ಕಾರ್ಯಕ್ರಮ ನೆರವೇರಲಿದೆ.
ಸೆಪ್ಟೆಂಬರ್ ೨೮ರಂದು ಬೆಳಿಗ್ಗೆ ೬.೩೦ ಗಂಟೆಗೆ ಚಾಮರಾಜೇಶ್ವರ ದೇವಸ್ಥಾನದ ಆವರಣದಲ್ಲಿ ಮ್ಯಾರಥಾನ್, ಬೆಳಿಗ್ಗೆ ೭.೩೦ ಗಂಟೆಗೆ ಮಹಿಳಾ ದಸರಾ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದೆ. ಬೆಳಿಗ್ಗೆ ೧೧ ಗಂಟೆಗೆ ಜಿಲ್ಲಾಡಳಿತ ಭವನದ ಆವರಣದಲ್ಲಿ ಫಲಪುಷ್ಪ ಪ್ರದರ್ಶನ ಹಾಗೂ ಪ್ರದರ್ಶನ ಮಳಿಗೆಗಳ ಉದ್ಘಾಟನೆ ನಡೆಯಲಿದೆ. ಬೆಳಿಗ್ಗೆ ೧೧ ರಿಂದ ಸಂಜೆ ೬ ಗಂಟೆಯವರೆ ನಗರದ ಜೆ.ಎಚ್. ಪಟೇಲ್ ಸಭಾಂಗಣ ಹಾಗೂ ವರನಟ ಡಾ. ರಾಜ್ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಜರುಗಲಿವೆ. ಸಂಜೆ ೪ರಿಂದ ರಾತ್ರಿ ೯.೪೫ರವರೆಗೆ ಚಾಮರಾಜೇಶ್ವರ ದೇವಸ್ಥಾನದ ಆವರಣದ ಮುಖ್ಯ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಸೆಪ್ಟೆಂಬರ್ ೨೯ರಂದು ಬೆಳಿಗ್ಗೆ ೯ ಗಂಟೆಗೆ ಚಾಮರಾಜೇಶ್ವರ ದೇವಸ್ಥಾನದ ಆವರಣದಲ್ಲಿ ರೈತ ದಸರಾ ಕಾರ್ಯಕ್ರಮದ ಉದ್ಘಾಟನೆ ನೆರವೇರಲಿದೆ. ೧೦ ಗಂಟೆಗೆ ಚಾಮರಾಜೇಶ್ವರ ದೇವಸ್ಥಾನದಿಂದ ಡಾ. ಬಿ.ಆರ್. ಅಂಬೇಡ್ಕರ್ ಭವನದವರೆಗೆ ರೈತರ ದಸರಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. ೧೧ ಗಂಟೆಗೆ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ರೈತ ದಸರಾ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಬೆಳಿಗ್ಗೆ ೧೧ ರಿಂದ ಸಂಜೆ ೬ ಗಂಟೆಯವರೆಗೆ ಜೆ.ಎಚ್. ಪಟೇಲ್ ಸಭಾಂಗಣ ಹಾಗೂ ವರನಟ ಡಾ. ರಾಜ್ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ನಡೆಯಲಿವೆ. ಸಂಜೆ ೪ರಿಂದ ರಾತ್ರಿ ೯.೪೫ರವರೆಗೆ ಚಾಮರಾಜೇಶ್ವರ ದೇವಸ್ಥಾನದ ಆವರಣದ ಮುಖ್ಯ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.
ಸೆಪ್ಟೆಂಬರ್ ೩೦ರಂದು ಬೆಳಿಗ್ಗೆ ೧೧ ರಿಂದ ಸಂಜೆ ೬ ಗಂಟೆಯವರೆಗೆ ಜೆ.ಎಚ್. ಪಟೇಲ್ ಸಭಾಂಗಣ ಹಾಗೂ ವರನಟ ಡಾ. ರಾಜ್ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ನಡೆಯಲಿವೆ. ಸಂಜೆ ೪ರಿಂದ ರಾತ್ರಿ ೯.೪೫ರವರೆಗೆ ಚಾಮರಾಜೇಶ್ವರ ದೇವಸ್ಥಾನದ ಆವರಣದ ಮುಖ್ಯ ವೇದಿಕೆಯಲ್ಲಿ ೨೦೨೨ನೇ ಸಾಲಿನ ದಸರಾ ಸಮಾರೋಪ ಸಮಾರಂಭ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ಪ್ರಕಟಣೆ ತಿಳಿಸಿವೆ.
ಚಾಮರಾಜೇಶ್ವರದ ದೇವಸ್ಥಾನದ ಆವರಣದ ಮುಖ್ಯ ವೇದಿಕೆಯಲ್ಲಿ ಆಕರ್ಷಕ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ
ಚಾಮರಾಜನಗರ ದಸರಾ ಮಹೋತ್ಸವದ ಅಂಗವಾಗಿ ಸೆಪ್ಟೆಂಬರ್ ೨೭ ರಿಂದ ೩೦ ರವರೆಗೆ ನಗರದ ಶ್ರೀ ಚಾಮರಾಜೇಶ್ವರ ದೇವಸ್ಥಾನ ಆವರಣದ ಮುಖ್ಯ ವೇದಿಕೆಯಲ್ಲಿ ವೈವಿಧ್ಯಮಯ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಸೆಪ್ಟೆಂಬರ್ ೨೭ ರಂದು ಮಧ್ಯಾಹ್ನ ೩.೩೦ ರಿಂದ ೪ ಗಂಟೆಯವರೆಗೆ ಆರ್.ಎಂ. ಶಿವಮಲ್ಲೇಗೌಡ ಮತ್ತು ಮಂಜುನಾಥ ತಂಡದವರಿಂದ ಗೊರವರ ಕುಣಿತ, ವೀರಗಾಸೆ, ೪ ರಿಂದ ೪.೧೫ರವರೆಗೆ ಹಂಪಾಪುರದ ರಾಜೇಶ್ ಮತ್ತು ತಂಡದವರಿಂದ ವಾದ್ಯ ಸಂಗೀತ, ೪.೧೫ ರಿಂದ ೪.೩೦ ರವರೆಗೆ ರಂಜಿತ ಸೋಮಶೇಖರ ಮತ್ತು ತಂಡದವರಿಂದ ಭರತನಾಟ್ಯ, ೪.೩೦ ರಿಂದ ೫.೩೦ರವರೆಗೆ ಕೊಳ್ಳೇಗಾಲದ ರಂಗಲಕ್ಷ್ಮಣಂ ಫೌಂಡೇಶನ್ ತಂಡದವರಿಂದ ನವರಾತ್ರಿ ವೈಭವ ನೃತ್ಯ ನಡೆಯಲಿದೆ.
ಸಂಜೆ ೬.೩೦ ರಿಂದ ೭.೩೦ರವರೆಗೆ ಕಾಲೇಜು ವಿದ್ಯಾರ್ಥಿಗಳಿಂದ ನೃತ್ಯೋತ್ಸವ, ೭ ರಿಂದ ೮ ರವರೆಗೆ ಡಾ. ಮಳವಳ್ಳಿ ಮಹದೇವಸ್ವಾಮಿ, ಡಾ. ಅಪ್ಪಗೆರೆ ತಿಮ್ಮರಾಜು, ಸಿ.ಎಂ. ನರಸಿಂಹಮೂರ್ತಿ ಮತ್ತು ತಂಡದವರಿಂದ ಮಾಯಾದಂತ ಮಳೆ ಬಂತಣ್ಣ ಜಾನಪದ ಗೀತೆ ವೈಭವ ನಡೆಯಲಿದೆ. ೮ ರಿಂದ ೮.೩೦ರವರೆಗೆ ಅರುಣ್ ಕುಮಾರ್, ಎಸ್.ಬಿ. ನಾಗರಾಜು, ಜೆ.ಬಿ. ಮಹೇಶ್, ನಂಜುಂಡಸ್ವಾಮಿ, ಜೆ. ಮೂರ್ತಿ ತಂಡದವರಿಂದ ಸಂಗೀತ ರಸಗಂಗೆ, ೮.೩೦ರಿಂದ ೯.೫೫ರವರೆಗೆ ಬೆಂಗಳೂರಿನ ಐಶ್ವರ್ಯ ಮತ್ತು ತಂಡದವರಿಂದ ನೃತ್ಯೋತ್ಸವ ಕಾರ್ಯಕ್ರಮ ನಡೆಯಲಿವೆ.
ಸೆಪ್ಟೆಂಬರ್ ೨೮ ರಂದು ಮಧ್ಯಾಹ್ನ ೩.೩೦ ರಿಂದ ೪ ಗಂಟೆಯವರೆಗೆ ರಾಮಸಮುದ್ರದ ಸಿದ್ದರಾಜು ಮತ್ತು ತಂಡದಿಂದ ಡೊಳ್ಳುಕುಣಿತ, ಸಂಜೆ ೪ ರಿಂದ ೪.೧೫ರವರೆಗೆ ಮೈಸೂರು ಹರೀಶ್ ಪಾಂಡವ್ ಅವರಿಂದ ಸ್ಯಾಕ್ಸೊಪೋನ್ ವಾದನ, ೪.೧೫ ರಿಂದ ೪.೩೦ ರವರೆಗೆ ಡೊಡ್ಡಮೋಳೆಯ ದೊಡ್ಡಗವಿಬಸಪ್ಪ ಹಾಗೂ ರಾಮಸಮುದ್ರದ ನಿಂಗಶೆಟ್ಟಿ ತಂಡದಿಂದ ತಂಬೂರಿಪದ, ೪.೩೦ ರಿಂದ ೫ರವರೆಗೆ ಗುಂಡ್ಲುಪೇಟೆಯ ಮೋಹನ್ ಮತ್ತು ತಂಡದಿಂದ ಜನಪದ ವೈಭವ, ೫ ರಿಂದ ೫.೩೦ರವರೆಗೆ ಎಸ್.ಜಿ. ಮಹಾಲಿಂಗಸ್ವಾಮಿ, ಎಸ್. ನಟರಾಜು, ಸುರೇಶ್ ನಾಗ್, ಬಿ. ಕೃಷ್ಣಮೂರ್ತಿ, ಅರ್ಜುನ್ ಸುರಾಗ್ ತಂಡದಿಂದ ಜನಪದ ಸಂಗೀತ, ೫.೩೦ ರಿಂದ ೬.೩೦ರವರೆಗೆ ಕಾಲೇಜು ವಿದ್ಯಾರ್ಥಿಗಳಿಂದ ನೃತ್ಯೋತ್ಸವ, ೬.೩೦ ರಿಂದ ೭.೩೦ರವರೆಗೆ ಸರಿಗಮಪ ಕಲಾವಿದರಾದ ಆರ್. ಮಹೇಂದ್ರ, ರವಿಕುಮಾರ್ ತಂಡದಿಂದ ಭಾವಯಾನ ಸುಗಮ ಸಂಗೀತ, ೭.೩೦ ರಿಂದ ೮.೩೦ರವರೆಗೆ ಕೃಷ್ಣೇಗೌಡ ಮತ್ತು ತಂಡದವರಿಂದ ನಗೆಹಬ್ಬ ಹಾಸ್ಯಸಂಜೆ, ೮.೩೦ ರಿಂದ ೯ರವರೆಗೆ ಗುಂಡ್ಲುಪೇಟೆಯ ಪಿ. ಅವಿನಾಶ್ ಶಿವತಾಂಡವ ನೃತ್ಯ ಕಲಾ ಸಂಸ್ಥೆಯ ತಂಡದಿಂದ ಜನಪದ ನೃತ್ಯ, ೯ ರಿಂದ ೯.೩೦ರವರೆಗೆ ಚಾಮರಾಜನಗರದ ಚೇತನ್ ನೃತ್ಯಶಾಲೆಯವರಿಂದ ನೃತ್ಯ ರೂಪಕ, ೯.೩೦ರಿಂದ ೯.೫೦ರವರೆಗೆ ಚಾಮರಾಜನಗರದ ಅವತಾರ್ ಡ್ಯಾನ್ಸ್ ಇನ್ಸ್ಟ್ಯೂಟ್ನಿಂದ ನೃತ್ಯರೂಪಕ ಕಾರ್ಯಕ್ರಮ ನಡೆಯಲಿದೆ.
ಸೆಪ್ಟೆಂಬರ್ ೨೯ ರಂದು ಮಧ್ಯಾಹ್ನ ೩.೩೦ ರಿಂದ ೪ ಗಂಟೆಯವರೆಗೆ ರಾಮಸಮುದ್ರದ ಕುಮಾರ್ ಮತ್ತು ತಂಡದವರಿಂದ ಡೊಳ್ಳುಕುಣಿತ, ಸಂಜೆ ೪ ರಿಂದ ೪.೩೦ರವರೆಗೆ ಯಳಂದೂರಿನ ಪಿ. ಮಲ್ಲಿಕಾರ್ಜುನಸ್ವಾಮಿ ಮತ್ತು ತಂಡದವರಿಂದ ನಾದಸ್ವರ, ಸಂಜೆ ೪.೩೦ರಿಂದ ೫ರವರೆಗೆ ಕೊಳ್ಳೇಗಾಲದ ಪಿಟೀಲು ಎಸ್. ಪ್ರಭಾಕರ್ ಮತ್ತು ತಂಡದಿಂದ ವಾದ್ಯ ಸಂಗೀತ, ೫ರಿಂದ ೫.೩೦ರವರೆಗೆ ಚಾಮರಾಜನಗರದ ಜೈ ಭುವನೇಶ್ವರಿ ಕನ್ನಡ ಯುವ ವೇದಿಕೆ ವತಿಯಿಂದ ನೃತ್ಯರೂಪಕ, ೫.೩೦ರಿಂದ ೬ರವರೆಗೆ ಗುಂಡ್ಲುಪೇಟೆಯ ಸದ್ದಾಂ ಡ್ಯಾನ್ಸ್ ಗ್ರೂಪ್ ಅಂಡ್ ಮೆಲೋಡಿಸ್ ನಿಂದ ನೃತ್ಯರೂಪಕ, ೬ರಿಂದ ೬.೩೦ರವರೆಗೆ ಬೆಂಗಳೂರಿನ ಸಂಸ್ಕೃತಿ ಕೇಶವನ್ ತಂಡದಿಂದ ಭರತನಾಟ್ಯ, ೬.೩೦ರಿಂದ ೭ ರವರೆಗೆ ಎಸ್. ಸುಂಗಧರಾಜನ್, ಶಾಂತರಾಜು, ರಾಧ, ಜಯ್ಗುರು, ಎಂ. ನಟರಾಜು, ಎಚ್.ಎಂ. ಸುಜಾತ ತಂಡದಿಂದ ಭಕ್ತಿ ಸಂಗೀತ, ೭ ರಿಂದ ೭.೩೦ರವರೆಗೆ ಚಾಮರಾಜನಗರದ ಬಿ. ಬಸವರಾಜು, ಬಿ.ಎಸ್. ಲತಾ, ಜಿ. ರಾಜಪ್ಪ, ಎಂ. ಮಂಜುನಾಥ್, ಎಂ. ಪುಟ್ಟಸ್ವಾಮಿ ತಂಡದಿಂದ ಸುಗಮ ಸಂಗೀತ, ೭.೩೦ ರಿಂದ ೮.೩೦ರವರೆಗೆ ಕೆ.ಆರ್. ಎಂಟರ್ಟ್ರೈನರ್ಸ್ ನ ಕಂಬದ ರಂಗಯ್ಯ ಮತ್ತು ತಂಡದಿಂದ ಸಂಗೀತ ಸಂಜೆ, ೮.೩೦ ರಿಂದ ೯ ರವರೆಗೆ ಕೆಂಪರಾಜು, ಎನ್. ಮಹೇಶ್, ಮಹನ ಎನ್. ಪದ್ಮಾ, ಯಡಿಯೂರು ಮಹದೇವಯ್ಯ, ಮಹದೇವಪ್ರಭು ತಂಡದಿಂದ ಜನಪದ ಸಂಗೀತ, ೯ ರಿಂದ ೯.೫೦ರವರೆಗೆ ಬಸವಟ್ಟಿ ಲೋಕೇಶ್ ಮತ್ತು ತಂಡದಿಂದ ಕಾಮಿಡಿ ಕಿಲಾಡಿಗಳು ಕಾರ್ಯಕ್ರಮ ನಡೆಯಲಿದೆ.
ಸೆಪ್ಟೆಂಬರ್ ೩೦ ರಂದು ಮಧ್ಯಾಹ್ನ ೩ ರಿಂದ ೩.೪೫ ರವರೆಗೆ ನಾಗರಾಜು ಮತ್ತು ತಂಡವರಿಂದ ಡೊಳ್ಳುಕುಣಿತ, ೩.೪೫ ರಿಂದ ೪ರವರೆಗೆ ಉತ್ತುವಳ್ಳಿ ಬಿ.ಮಹದೇವಸ್ವಾಮಿ ಮತ್ತು ತಂಡದವರಿಂದ ಸ್ಯಾಕ್ಯೊಪೋನ್ ವಾದನ, ೪ ರಿಂದ ೪.೧೫ರವರೆಗೆ ಬಿಳಿಗಿರಿರಂಗನಬೆಟ್ಟದ ಬಸವರಾಜು ಮತ್ತು ತಂಡದವರಿಂದ ಗೊರುಕನ ನೃತ್ಯ, ೪.೧೫ ರಿಂದ ೪.೪೫ ರವರೆಗೆ ಕೊಳ್ಳೇಗಾಲದ ದಶ್ಪಾಲ್ ಮತ್ತು ತಂಡದವರಿಂದ ವಾದ್ಯ ಸಂಗೀತ, ಸಂಜೆ ೪.೪೫ ರಿಂದ ೫.೧೫ ರವರೆಗೆ ಚಾಮರಾಜನಗರದ ಎಸ್. ಅಕ್ಷತಾ ಮತ್ತು ತಂಡದವರಿಂದ ನೃತ್ಯರೂಪಕ, ೫.೧೫ ರಿಂದ ೫.೪೫ ರವರೆಗೆ ಕೊಳ್ಳೇಗಾಲದ ನೂಪುರ ನೃತ್ಯಾಂಜಲಿ ತಂಡದವರಿಂದ ಭರತನಾಟ್ಯ, ೫.೪೫ ರಿಂದ ೬.೧೫ ರವರೆಗೆ ವಿ. ರಾಮದಾಸ್, ಸಿ.ಕೆ.ಕೃಷ್ಣಕುಮಾರ್, ಎಂ.ಆರ್. ಲೋಕೇಶ್, ಪಿ. ಮಹೇಶ್ ಮತ್ತು ತಂಡದವರಿಂದ ಜಾನಪದ ವೈಭವ, ಸಂಜೆ ೬.೧೫ ರಿಂದ ೬.೪೫ ರವರೆಗೆ ಪ್ರಭು ಮತ್ತು ತಂಡದವರಿಂದ ಯಕ್ಷಿಣಿ (ಮ್ಯಾಜಿಕ್), ೬.೪೫ ರಿಂದ ೭.೧೫ ರವರೆಗೆ ಮೈಸೂರಿನ ಚಂಪಕ ನೃತ್ಯ ಅಕಾಡೆಮಿ ವತಿಯಿಂದ ನೃತ್ಯೋತ್ಸವ, ೭.೧೫ ರಿಂದ ೮ ರವರೆಗೆ ಕಂದೇಗಾಲದ ನಾಗೇಶ್ ಮತ್ತು ತಂಡದವರಿಂದ ಗೀತೋತ್ಸವ, ೮ ರಿಂದ ೯.೪೫ ರವರೆಗೆ ಅನುರಾಧಭಟ್, ಶ್ರೀಹರ್ಷ, ಅಶ್ವಿನ್ಶರ್ಮಾ, ಅಂಕಿತಕುಂಡು ಮತ್ತು ತಂಡದವರಿಂದ ಮ್ಯೂಸಿಕಲ್ ನೈಟ್ ಕಾರ್ಯಕ್ರಮ ನಡೆಯಲಿದೆ.
