ಚಾಮರಾಜನಗರ: ಸರಕಾರಿ ನೌಕರರಿಗೆ 7 ನೇ ವೇತನ ಆಯೋಗ ರಚನೆ ಮಾಡಬೇಕು ಎಂಬ ಸರಕಾರಿ ನೌಕರರ ಹಲವಾರು ವರ್ಷಗಳ ಬೇಡಿಕೆ ಈಡೇರಿದ್ದು, ಇದಕ್ಕೆ ಕಾರಣರಾದ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸರಕಾರಿನೌಕರರ ಸಂಘದ ರಾಜ್ಯಾಧ್ಯಕ್ಷ ಷಡಕ್ಷರಿ, ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಶಂಭುಗೌಡಪಾಟೀಲ್, ಜಿಲ್ಲಾ ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಚಂದ್ರಶೇಖರ್ ಅವರನ್ನು ಅಭಿನಂದಿಸುವುದಾಗಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಕೆ.ಎಸ್.ಮಾದಪ್ಪ ಹೇಳಿದರು.
ನಗರದ ತಾಲೂಕು ಪ್ರಾಥಮಿಕ ಶಾಲಾಶಿಕ್ಷಕರಸಂಘದ ಭವನದಲ್ಲಿ ನಡೆದ ಶಿಕ್ಷಕರ ಸಂಘದ ಜಿಲ್ಲಾ ಕಾರ್ಯಕಾರಣಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
”ಜಿಲ್ಲಾಪ್ರಧಾನ ಕಾರ್ಯದರ್ಶಿ ಮಹದೇವಸ್ವಾಮಿ ಮಾತನಾಡಿ, ವೇತನ ಆಯೋಗವು ಹೆಚ್ಚು ಸಮಯ ತೆಗೆದುಕೊಳ್ಳದೇ, ಶೀಘ್ರವೇ ವೇತನ ಆಯೋಗ ರಚನೆಗೆ ಸರಕಾರಕ್ಕೆ ವರದಿಸಲ್ಲಿಸುವಂತೆ ಮನವಿ ಮಾಡಲಾಗುವುದು. ಮುಖ್ಯಶಿಕ್ಷಕರಿಗೆ ಪ್ರತ್ಯೇಕವೇತನಶ್ರೇಣಿ, ಶಿಕ್ಷಕರಿಗೆ ಸಿಗಬೇಕಾದ ಆರ್ಥಿಕ ಸೇರಿದಂತೆ ಇತರೇ ಸೌಲಭ್ಯ ಒದಗಿಸುವಂತೆ ಆಯೋಗದ ಮುಂದೆ ಮಂಡಿಸಲಾಗುವುದು. ನೂತನಪಿಂಚಣಿ ಯೋಜನೆ ರದ್ದುಪಡಿಸಿ, ಹಳೆಯ ಪಿಂಚಣಿ ಯೋಜನೆ ಅನುಷ್ಠಾನ ಮಾಡುವಂತೆ ಒತ್ತಾಯಿಸಲಾಗುವುದು ಎಂದರು.
ನ.೩೦ ರಂದು ತುಮಕೂರಿನಲ್ಲಿ ನಡೆಯುವ ರಾಜ್ಯಮಟ್ಟದ ಶೈಕ್ಷಣಿಕ ಕಾರ್ಯಾಗಾರಕ್ಕೆ ಜಿಲ್ಲೆಯ ಶಿಕ್ಷಕರಸಂಘದ ಎಲ್ಲ ಘಟಕದ ಪ್ರತಿನಿಧಿಗಳು ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಸಭೆಯಲ್ಲಿ ಜಿಲ್ಲಾ ಗೌರವಾಧ್ಯಕ್ಷ ಮಹೇಶ್, ಉಪಾಧ್ಯಕ್ಷ ಬುಕಾನಿ, ಪದಾಧಿಕಾರಿಗಳಾದ ಮಂಜುನಾಥ್, ದಿನೇಶ್, ಮಾದೇಶ್, ರಾಚಯ್ಯ, ಚಾಮರಾಜನಗರ ತಾಲೂಕುWಟಕದ ಲಾಲಿಂಗಸ್ವಾಮಿ, ಗುಂಡ್ಲುಪೇಟೆಘಟಕದ ಶಿವಪ್ರಸಾದ್, ಕಾರ್ಯದರ್ಶಿ ರವೀಂದ್ರ, ಯಳಂದೂರು ಘಟಕದ ಸೋಮಣ್ಣ, ಕಾರ್ಯದರ್ಶಿ ನಾಗರಾಜು, ಕೊಳ್ಳೇಗಾಲಘಟಕದ ಶ್ರೀಧರ್, ಕಾರ್ಯದರ್ಶಿ ನಂದೀಶ, ಹನೂರುಘಟಕದ ಗಿರೀಶ್ ಹಾಜರಿದ್ದರು.
