ಚಾಮರಾಜನಗರ: ತಾಲೂಕಿನ ಕೋಡಿಮೋಳೆ ಗ್ರಾಮಕ್ಕೆ ಹೊಂದಿಕೊಂಡಂತಿರುವ ಕೆರೆಯಿಂದ ಅಕ್ಕಪಕ್ಕದ ಜಮೀನುಗಳಿಗೆ ತೇವಾಂಶದಿಂದ ಬೆಳೆಗಳು ನಾಶವಾಗುತ್ತಿದ್ದು, ಸೂಕ್ತಪರಿಹಾರ ಕೊಡಿಸುವಂತೆ ರೈತರ ಮನವಿಮೇರೆಗೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಭೇಟಿನೀಡಿ, ರೈತರ ಸಮಸ್ಯೆಯನ್ನು ಆಲಿಸಿದರು.
ಕೋಡಿಮೋಳೆ ಸೇರಿದಂತೆ ರಾಮಸಮುದ್ರ, ಕೋಡಿಮೋಳೆಬಸವನಪುರ ಗ್ರಾಮದ ಸುತ್ತಮುತ್ತ ಭತ್ತ,ರಾಗಿ, ಮುಸುಕಿನಕಜೋಳ ಸೇರಿದಂತೆ ಇತರೇ ಬೆಳೆಬೆಳೆಯುತ್ತಿದ್ದು, ಸಮೀಪದ ಕೋಡಿಮೋಳೆಕೆರೆಯ ನೀರು ಜಿನುಗಿ ಅದರ ತೇವಾಂಶ ಜಮೀನಿನಲ್ಲಿ ಹೆಚ್ಚಾಗಿದ್ದು, ಇದರಿಂದ ಬೆಳೆನಾಶ ಹಂತದಲ್ಲಿವೆ. ಸಾಲಸೋಲ ಮಾಡಿ, ಬೆಳೆದ ಬೆಳೆಯು ಕೈಸೇರದಂತಾಗುವ ಆತಂಕವಿದೆ. ಇದಕ್ಕೆ ಶಾಶ್ವತಪರಿಹಾರ ಕಲ್ಪಿಸುವಂತೆ ರೈತರು ಶಾಸಕರಲ್ಲಿ ತಮ್ಮ ಅಳಲುತೋಡಿಕೊಂಡರು.
ಶಾಸಕರು ಪ್ರತಿಕ್ರಿಯಿಸಿ’ ಕೆರೆಯ ತೇವಾಂಶ ದ ನೀರು ಜಮೀನಿನಲ್ಲಿ ನಿಲ್ಲದಂತೆ ಒಂದೂವರೆ ಕಿಮೀ ಉದ್ದದ ಮೋರಿ ನಿರ್ಮಿಸಲು ವೆಚ್ಚದ ಅಂದಾಜುಪಟ್ಟಿ ತಯಾರಿಸುವಂತೆ ಸ್ಥಳದಲ್ಲಿ ಹಾಜರಿದ್ದ
ಸಣ್ಣ ನೀರಾವರಿ ಇಲಾಖೆ ಎಇಇ ಇಂಜಿನಿಯರ್ ಈಶ್ವರ್ ಅವರಿಗೆ ಸೂಚಿಸಿದರು.
ಕಾವೇರಿನೀರಾವರಿ ನಿಗಮದ ಎಇಇ ಮಂಜುನಾಥ್, ಜಿಪಂ ಎಂಜಿನಿಯರ್ ನಟರಾಜು, ಕ್ಷೇತ್ರ ನಿರೀಕ್ಷಕ ಬಸವಣ್ಣ, ತಾಪಂ ಮಾಜಿಅಧ್ಯಕ್ಷ ಚಿಕ್ಕಮಹಾದೇವು, ಮುಖಂಡರಾದ ಕೋಡಿಮೋಳೆ ಗೋವಿಂದಶೆಟ್ಟಿ ಸೇರಿದಂತೆ ಆಭಾಗದ ರೈತರು ಹಾಜರಿದ್ದರು.
ರಸ್ತೆಕಾಮಗಾರಿಪರಿಶೀಲನೆ; ಇದೇವೇಳೆ ಪಿಎಂಜಿಎಸ್‌ವೈ ಯೋಜನೆಯಡಿ ಸಂತೇಮರಹಳ್ಳಿ ಮುಖ್ಯರಸ್ತೆಯಿಂದ ಕಾಡಹಳ್ಳಿ- ಸಪ್ಪಯ್ಯನಪುರ ನಡೆಯುತ್ತಿರುವ ರಸ್ತೆಕಾಮಗಾರಿಯನ್ನು ಶಾಸಕ ಸಿ.ಪುಟ್ಟರಂಗಶೆಟ್ಟಿ ಪರಿಶೀಲಿಸಿದರು.
ಸಂಬಂಧಪಟ್ಟ ಕಾಮಗಾರಿ ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡಬೇಕು ಎಂದು ಸೂಚಿಸಿದರು.