ಚಾಮರಾಜನಗರ, ಡಿಸೆಂಬರ್ ೧೫ (ಕರ್ನಾಟಕ ವಾರ್ತೆ):- ಚಾಮರಾಜನಗರ ಜಿಲ್ಲೆಯ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಬುಧವಾರ ಕೇರಳ ರಾಜ್ಯದ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ವೈನಾಡು ಜಿಲ್ಲೆಯ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿಯವರಾದ ಉಬೈದುಲ್ಲಾ ಅವರು ತಂಡದೊಂದಿಗೆ ಭೇಟಿ ನೀಡಿ ಚರ್ಚಿಸಿದರು.

ಚಾಮರಾಜನಗರದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ  ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಂ. ಶ್ರೀಧರ ರವರ ಜೊತೆ  ಕರ್ನಾಟಕ  ನಾಲ್ಸಾ ಯೋಜನೆಯಡಿ  ಆಕಾಂಕ್ಷೆ ಕಾರ್ಯಕ್ರಮದ ಅಂಗವಾಗಿ ಮುತ್ತಂಗದಲ್ಲಿ ನಡೆಯಲಿರುವ  ಅಂತರ ರಾಜ್ಯ ಕಾರ್ಯಕ್ರಮದ ಕುರಿತು ರಾಜ್ಯ ಬೋರ್ಡರ್ ಮತ್ತು ನಾಲ್ಸಾ ಅಡಿಯಲ್ಲಿ ಆಸ್ಪರೇಷನ್ ಜಿಲ್ಲೆಯ ಕಾರ್ಯಕ್ರಮದ ಕ್ರಿಯಾ ಯೋಜನೆಯ ಸಂಬಂಧ ಸಭೆಯಲ್ಲಿ ಭಾಗವಹಿಸಿದರು. 

ಬಾಲ ಕಾರ್ಮಿಕರು, ಮಾನವ ಕಳ್ಳ ಸಾಗಾಣಿಕೆ, ಅರಣ್ಯ ಮತ್ತು ಅಬಕಾರಿ ಕಾಯಿದೆ, ಐಪಿಸಿ ಮತ್ತು ಇತರೆ ಗಡಿ ಕಾನೂನು ಸಮಸ್ಯೆಗಳ ಕಾನೂನು ಅರಿವು ಮೂಡಿಸುವ ಬಗ್ಗೆ ಸಭೆಯಲ್ಲಿ ಚರ್ಚಿಸಿದರು.

ಚಾಮರಾಜನಗರ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರಾದ ಸರಸ್ವತಿ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಉಮ್ಮತ್ತೂರು ಇಂದುಶೇಖರ್, ಹಿರಿಯ ವಕೀಲರಾದ ಬಾಲಸುಬ್ರಹ್ಮಣ್ಯಂ ಸಭೆಯಲ್ಲಿ ಉಪಸ್ಥಿತರಿದ್ದರು.