ಚಾಮರಾಜನಗರ: ಭಗತ್ ಸಿಂಗ್ ಯುವಸೇನೆ ವತಿಯಿಂದ ಹೊರತರಲಾದ ೨೦೨೩ನೇ ನೂತನ ವರ್ಷದ ಕ್ಯಾಲೆಂಡರ್ ಅನ್ನು ಡಿವೈಎಸ್ ಪಿ ಪ್ರಿಯದರ್ಶಿನಿ ಸಾಣಿಕೊಪ್ಪ ಅವರು ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಭಗತ್ ಯುವಸೇನೆ ಸಮಾಜಮುಖಿ ಕೆಲಸಗಳ ಮೂಲಕ ಮತ್ತಷ್ಟು ಜನಾನುರಾಗಿಯಾಗಿ ನೊಂದವರ ಪರವಾಗಿ ಕೆಲಸ ಮಾಡಿ ಉತ್ತಮ ಹೆಸರು ಪಡೆಯಲಿ ಎಂದು ಆಶಿಸಿದರು.
ಈ ಸಂದರ್ಭದಲ್ಲಿ ಭಗತ್ ಸಿಂಗ್ ಯುವಸೇನೆ ಅಧ್ಯಕ್ಷ ಕಾಂತರಾಜು, ಮಹದೇವಸ್ವಾಮಿ, ಕೀರ್ತಿ ಪಬ್ಲಿಕೇಷನ್ ಕುಮಾರ್, ಮಹೇಶ್, ಅಸ್ರಿಯಾ, ಮಹದೇವಸ್ವಾಮಿ, ಇದ್ದರು.