ಚಾಮರಾಜನಗರ: ಜಾಲಹಳ್ಳಿಹುಂಡಿ ಹಾಗೂ ಚನ್ನೀಪುರದ ಮೋಳೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಚಿತ್ರನಟ ದಿ.ಪುನೀತ್ ರಾಜ್‌ಕುಮಾರ್‌ಅವರ ೧ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ನಗರಸಭಾ ಸದಸ್ಯೆ ಭಾಗ್ಯಮ್ಮ ಅವರ ಪುತ್ರ ರಘು ವಿಧ್ಯಾರ್ಥಿಗಳಿಗೆ ನೋಟ್ ಪುಸ್ತಕಗಳನ್ನು ವಿತರಣೆ ಸರಳ ಕಾರ್ಯಕ್ರಮದಲ್ಲಿ ಪುನೀತ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಲಾಯಿತು.
ನಂತರ ಈಶ್ವರಿಸಂಗೀತ ಶಾಲೆಯ ಸಂಸ್ಥಾಪಕ ಅಧ್ಯಕ್ಷ ಸಿ.ಎಂ.ವೆಂಕಟೇಶ್ ಮಾತನಾಡಿ ಪುನೀತ್ ರಾಜ್‌ಕುಮಾರ್ ಅವರು ಕನ್ನಡಚಿತ್ರರಂಗ ಕಂಡ ಶ್ರೇಷ್ಟ ಎಂದರೆ ಅತಿಶಯೋಕ್ತಿಯಲ್ಲ. ಎತ್ತರಕ್ಕೆ ಬೆಳೆಯುತ್ತಿರುವ ಸಂದರ್ಭದಲ್ಲಿ ವಿಧಿವಶರಾದ್ದದ್ದು. ಕನ್ನಡಚಿತ್ರರಂಗಕ್ಕೆ ಅಪಾರನಷ್ಟ ಉಂಟಾಗಿದೆ. ಎಂದ ಅವರ ೧ನೇ ವರ್ಷದ ಪುಣ್ಯಸ್ಮರಣೆಯನ್ನು ಅವರ ಅಭಿಮಾನಿಬಳಗ ರಾಜ್ಯದ್ಯಂತ ಜಾತಿಮತ ಭೇದ ಎಣಿಸದೇ ಆಚರಣೆ ಮಾಡುತ್ತಿರುವುದು ಅವರು ನಮ್ಮ ನಡುವೆಯೇ ಇದ್ದಾರೆ ಎಂಬ ಭಾವ ಮೂಡಿಸುತ್ತಿದೆ ಎಂದರು

ಈ ಸಂದರ್ಭದಲ್ಲಿ ಸಮಾಜ ಸೇವಕ ಎಲ್ ಸುರೇಶ್ ಸುರೇಶ್‌ವಾಜಪಾಯಿ ಮುಖ್ಯ ಶಿಕ್ಷಕರು ಹಾಗೂ ಸಹ ಶಕ್ಷಕರ ಇತರರು ಇದ್ದರು.