ಚಾಮರಾಜನಗರ: ಜೈ ಹಿಂದ್ ಪ್ರತಿ?ನ ಮತ್ತು ಋಗ್ವೇದಿ ಯೂತ್ ಕ್ಲಬ್ ವತಿಯಿಂದ ಕುಮಾರವ್ಯಾಸ ಜಯಂತಿ ಮತ್ತು ವಸಂತ ಪಂಚಮಿ ಕಾರ್ಯಕ್ರಮ ಜೈಹಿಂದ್ ಕಟ್ಟೆಯ ಋಗ್ವೇದಿ ಕುಟೀರದಲ್ಲಿ ಜರುಗಿತು.
ಕುಮಾರವ್ಯಾಸ ರಚಿತ ಕರ್ನಾಟಕ ಕಥಾಮಂಜರಿ ಪುಸ್ತಕಕ್ಕೆ ಪೂಜೆಯನ್ನು ಮಾಡುವ ಮೂಲಕ ಮೈಸೂರಿನ ಗಮಕವಿದ್ವಾನ್ ನಿರಂಜನ್ ರವರು ಉದ್ಘಾಟಿಸಿದರು. ಕುಮಾರವ್ಯಾಸ ಕನ್ನಡ ಸಾಹಿತ್ಯದ ಮೇರು ಶಕ್ತಿ. ಕುಮಾರವ್ಯಾಸರ ಕಾವ್ಯ ಪ್ರತಿಭೆ ಎಂದು ಮರೆಯಲು ಸಾಧ್ಯವಿಲ್ಲ. ೭೦೦ ವ?ಗಳ ಹಿಂದೆ ರಚಿತವಾದ ಗದುಗಿನ ನಾರಾಯಣಪ್ಪ ಕುಮಾರವ್ಯಾಸ ರೆಂದೆ ಪ್ರಸಿದ್ಧಿ. ಕರ್ನಾಟಕದ ಹಳ್ಳಿ ಹಳ್ಳಿಗಳಲ್ಲೂ ಕರ್ನಾಟಕ ಕಥಾಮಂಜರಿಯ ಚಿತ್ರಣಗಳು ಜನರ ಬಾಯಲ್ಲಿ ಸದಾ ಕಾಲ ಹರಿದಾಡುತ್ತಿದೆ. ಕುಮಾರವ್ಯಾಸರ ಕಾವ್ಯ ಸಾಹಿತ್ಯ ಯುವಕವಿಗಳಿಗೆ ಅಪಾರ ಸ್ಪೂರ್ತಿಯನ್ನು ನೀಡುತ್ತದೆ ಎಂದು ತಿಳಿಸಿದರು.
ಸಂಗೀತ ವಿಧುಷಿ ಶ್ರೀಮತಿ ಧರಿತ್ರಿ ಆನಂದ ರಾವ್ ಕುಮಾರವ್ಯಾಸ ಜಯಂತಿ ಹಾಗೂ ವಸಂತ ಪಂಚಮಿ ಕಾರ್ಯಕ್ರಮಕ್ಕೆ ಶುಭ ಕೋರಿ ವಸಂತ ಪಂಚಮಿ ಪವಿತ್ರವಾದ ದಿನ. ಜ್ಞಾನ, ಸಂಗೀತ ,ಕಲೆ ಅಧ್ಯಯನ ಮಾಡಲು ಸೂಕ್ತವಾದ ದಿನ. ಪ್ರತಿಯೊಬ್ಬರು ಜ್ಞಾನಿಗಳಾಗಬೇಕು ನಮ್ಮ ಸಾಂಸ್ಕೃತಿಕ ನೆಲೆಗಟ್ಟನ್ನು ಸದಾಕಾಲ ಜೀವಂತವಾಗಿಡುವ ಕಾರ್ಯ ಮಾಡಬೇಕು ಎಂದರು.
ಸಭೆಯ ಅಧ್ಯಕ್ಷತೆಯನ್ನು ಜೈ ಹಿಂದ್ ಪ್ರತಿ?ನದ ಅಧ್ಯಕ್ಷರಾದ ಸುರೇಶ್ ಎನ್ ಋಗ್ವೇದಿ ಮಾತನಾಡುತ್ತಾ ವಸಂತ ಪಂಚಮಿ ಉತ್ತರದ ಪಶ್ಚಿಮ ಬಂಗಾಳ, ಬಿಹಾರ ,ತ್ರಿಪುರ, ಒರಿಸ್ಸಾ ನೇಪಾಳ, ಗಳಲ್ಲಿ ಹೆಚ್ಚು ಆಚರಣೆಯಲ್ಲಿದೆ . ಸರಸ್ವತಿ ಜ್ಞಾನದ ಅಧಿದೇವತೆಯಾಗಿದೆ. ಸರಸ್ವತಿ ಪೂಜೆಯ ಮೂಲಕ ಪ್ರತಿಯೊಬ್ಬರು ಜ್ಞಾನಾರ್ಜನೆಯನ್ನು ಮಾಡಿಕೊಳ್ಳಬೇಕು. ಹೊಸ ಹೊಸ ವಿಚಾರಗಳು ,ಪುಸ್ತಕಗಳು, ಕಾವ್ಯಗಳ ಅಧ್ಯಯನವನ್ನು ಮಾಡುವ ಮೂಲಕ ಪವಿತ್ರತೆಯನ್ನು ಹೆಚ್ಚಿಸಿಕೊಳ್ಳಬೇಕು. ಋಗ್ವೇದಿ ಯೂತ್ ಕ್ಲಬ್ ಮೊಟ್ಟಮೊದಲಿಗೆ ವಸಂತ ಪಂಚಮಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಮೂಲಕ ಶ್ರೇ?ರಾದ ಶ್ರೀ ನಿರಂಜನ್, ಶ್ರೀಮತಿ ಸುಜಾತ, ಶ್ರೀಮತಿ ಧರಿತ್ರಿ ಆನಂದ ರಾವ್, ರವರನ್ನು ಸನ್ಮಾನಿಸಿ ಗೌರವಿಸಿರುವುದು ಬಹಳ ಹೆಮ್ಮೆಯಾಗಿದೆ. ಗಮಕಲೆ ಯುವ ಸಮುದಾಯ ಮರೆತು ಸಾಗುತ್ತಿರುವ ಸಂದರ್ಭದಲ್ಲಿ ಗಮಕ ಕಲೆಯನ್ನು ಉಳಿಸಿ ಬೆಳೆಸುವ ಕಾರ್ಯ ಮಾಡುತ್ತಿರುವ ಶ್ರೇ?ರಿಗೆ ಗೌರವಿಸಿರುವುದು ಕಲೆಯನ್ನು ಗೌರವಿಸಿದಂತೆ ಎಂದು ತಿಳಿಸಿದರು.
ಜೈಹಿಂದ್ ಪ್ರತಿ?ನದ ಕುಸುಮ,.ಝಾನ್ಸಿ ಮಕ್ಕಳ ಪರಿ?ತ್ತಿನ ಶ್ರಾವ್ಯ, ಉಪಸ್ಥಿತರಿದ್ದರು.